Home / ಕವನ / ಕವಿತೆ / ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ
ಪಾರಗಾಣಲಿಲ್ಲ ಪಾಪದ ಕುಂಡಾ
ಘೋರನರಕದಿ ನೀವು ಜಾರಿಬಿದ್ದು ಹೊರಳುವಾಗ್ಗೆ
ಸೇರದಾಯಿತು ಈ ಬ್ರಹ್ಮಾಂಡ
ಪಿಂಡ ರಕ್ತ ಮಾಂಸ ಚರ್ಮ ಹೇಸಿಕೆಯ ಕಾಣಲಾಗಿ
ಅದಕಂತೀರಿ ಬಾಳಿಯ ದಿಂಡಾ
ತೋಳ ತೋಡಿ ನಾಭಿ ಸುಳಿ ಹಾಳುಗುಂಡಿ
ಮೇಲು ಕುಚದುಂಡ ಹೆಂಡಿ ಹೊಲಸಿನ ಕೈಚಂಡಾ
ದೂರದಿಂದ ನೋಡಿದರೆ ವಾರಿಜಾಕ್ಷಿ ಅನ್ನುವದೆಲ್ಲ
ನೀರಗಣ್ಣು ಪಿಚ್ಚ ಹೊಲಸಿನ ರುಂಡಾ
ಧಾರುಣಿಯ ಕವಿಗಳೆಲ್ಲ ಗಾರುಗೊಂಡು
ಹೀರಿಕೊಂಡು ಚಲ್ಲುತದೆ ಬಹುದೂರ ಚಂಡ ಮುಂಡಾ
||ಇಳವು||
ಪರಿಗೂಳಿಸಿ ಪೃಥ್ವಿ ನವಖಂಡಾ
ಅರಿಯದಲೆ ಉಸುರಿದವ ಬಂಡಾ
ಸರಿಯಹುದೆ ಸಮಾಸದಿ ತಂಡಾ
ಅರಿಕಿಲ್ಲದಾಯಿತೆ ಉದ್ಧಂಡಾ
||ಏರು||
ಆರಿಗ್ಹೇಳಿದರೂ ಇದು ತೀರಲಿಲ್ಲ ತಿಳಿಬುದ್ಧಿ
ತೋರಿಕೊಡುವೆನು ವೇದದಿ ಪುಂಡಾ
ದಾರಿಕಾರರ ಮಾತಲ್ಲಾ ದೂರ ತಿಳಿ ಮನದೊಳು
ಮಾರಿರೂಪ ನಾರಿ ನರಕದ ತಂಡಾ || ೧ ||

ನಾಡಿಗಲ್ಲ ಅಧಿಕಾದ ರೂಢಿಯೊಳು ಮಲಹಣ
ನೋಡಿ ನೋಡಿ ಸ್ತ್ರೀಯೊಳು ಮೋಹವಿಟ್ಟು
ಬ್ಯಾಡರಾಕಿ ಸಿಂಗರಿಸಿ ಹಾಡಿಕೊಂಡು ಹಲಬುತ
ಪಾಡಗಾಣಲಿಲ್ಲ ಇದಕವಬ್ರಷ್ಟಾ

ನೋಡಿ ಪರಶಿವ ಅವನ
ಕೇಡು ನುಡಿ ಕೇಳಲಾಗಿ
ರೂಢಿ ತಳಕ್ಕೆ ದೂಡಿ ನೂಕಿಸಿ ಬಿಟ್ಟ
ಆಡಲೇನು ಇಂಥ ಕವಿತ
ಬೇಡವಾಯ್ತಣ್ಣ ಹರಗೆ
ಕಾಡ ಕುಲದೊಳುಹೋಗಿ ಕುಲಗೆಟ್ಟ
||ಇಳವು||
ಹಂಗಸರ ವರ್ಣಿಸುವ ಮೂರ್ಖಾ
ವರ್ಣಶಾಸ್ತ್ರದ ಸಿಂಗರದ ತರ್ಕಾ
ಪದದಲ್ಲಿ ಇವನಿಗೇನರ್ಕಾ
ಯಮರಾಜನ ಕೈಯೊಳಗಿರ್ಕಾ
||ಏರು||
ಹೆಣ್ಣು ಜಾತಿಯ ವಿಸ್ತರಿಸಿ
ಕಣ್ಣು ಕಾಣಲಿಲ್ಲ ಕವಿ
ಬಣ್ಣಗೆಟ್ಟು ಬೊಗಳುವ ಬಲುಭಂಡಾ
ಸಣ್ಣಸಿತು ವೇದಶಾಸ್ತ್ರ ಬಣ್ಣಿಸಲು ಸವನಲ್ಲಾ
ಪುಣ್ಯಗೊಡಲಿಲ್ಲ ಪೂರ್ವದ ಭಂಡಾ ||೨||

ಒಲ್ಲೆನೆಂದ್ರೆ ಮ್ಯಾಲೆಬಿದ್ದು
ಜುಲುಮೆಯಿಂದ ಜೋಲಿಹೊಡೆದು
ಕೆಡವಿಬಿಟ್ಟಳು ಕಟ್ಟಿಚಲ್ಲಿದ್ಹಾಂಗೆ
ಸೋಲದವರ‍್ಯಾರು ಹೆಣ್ಣ
ಜಾಲತನಕಣಿಯುಂಟೆ
ಹೇಳತಾರ ಕಂಡ ಹಿರಿಯರು ನಮಗೆ
ಕೇಳಿಕೊಂಡು ನಿನ್ನ ನಂಬಿ
ಬಾಳಮಂದಿ ಕೆಟ್ಟರ‍್ಹಿಂಗ
ತೋಳತಿರುವುತ ಎದ್ದು ಬರುವಾಗ್ಗೆ
ತಾಳಲಾರದೆ ಯತಿಗಳು ತಪಗೆಟ್ಟು ವೃತಗೆಟ್ಟು
ಆಲ್ಪರಿಯುತ ಬಳಲುವರ‍್ಹಿಂಗ
ಹಲವು ಶಾಸ್ತ್ರ ವೇದ ಮಂತ್ರ ಕಲಿತಂಥ ಕವಿಗಳ
ಜಾಳಮಾಡಿಬಿಟ್ಟಿತು ಜಗದಾಗ
ಜಲಜಾಕ್ಷಿ ಜಪಿಸುತ ಗಾಳದಾಗ ಕಲಹದೊಳು
ಚಾಳದಪ್ಪಿ ಬಿದ್ದ ಮೀನದ ಹಾಂಗೆ
||ಇಳವು||
ಮೂರುಲೋಕ ಕೆಟ್ಟವು ನಿನಗಾಗಿ
ಬೆನ್ನುಹತ್ತಿ ಬರುತಾವೇ ಭವರೋಗಿ
ಮ್ಯಾಳಗೊಂಡು ಮೆರಿತಿ ಮನಸಾಗಿ
ಸೋಲದಾಯ್ತು ವಿಷಯ ಸುಖಭೋಗಿ
||ಏರು||

ಕಾಳಕೂಟಕತ್ತಲೊಳು ಗೋಳಿಟ್ಟು ಕೂಗುತದೆ
ಹೇಳಲಾರೆ ನಾನು ಗಾಣದೆತ್ತಿನ ಹಾಗೆ
ಮೇಲುಗ್ರಾಮ ಶಿಶುನಾಳಧೀಶನನೊಲುಮೆ ಇರಲಿಕ್ಕೆ
ಬೀಳಬಾರದು ಹೆಂಗಸರ ಬಲಿಯೊಳಗೆ || ೩ ||
*****

 

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್.ಎನ್.ಎಸ್.ರಾವ್