ಮಳೆಯ ಬೆಳೆ (ಬೀದಿ ನಾಟಕದ ಹಾಡು)

ಯಾತಕೆ ಮಳೆ ವಾದವೊ
ಶಿವಶಿವನೆ
ಜೀವ ತಲ್ಲಣಿಸುತಾವೊ ||

ಮಳೆಯಿಲ್ಲ ಬೆಳೆಯಿಲ್ಲ ಶಿವನೆ
ನಮ ಬದುಕಿಗೆ ನೆಲೆಯೆಲ್ಲಿ ಶಿವನೆ ||

ದಿನವೂ ಮುಗಿಲತ್ತ ದಿಟ್ಟಿಯನಿಟ್ಟು
ಕಾಣದಾದೆವೊ ಹೊಟ್ಟೆಗೆ ಹಿಟ್ಟು
ಎತ್ತ ನೋಡಲ್ಲಿ ಬಿಸಿಲು ರಣರಣಾ
ಬರಿದಾದ ಒಡಲೆಲ್ಲ ಭಣ ಭಣಾ ||

ಮಳೆರಾಯ ನಮ್ಮ ಮರೆತಾನಲ್ಲ
ಸೂರ್ಯಪ್ಪ ನಮ್ಮ ಸುಡುತಾನಲ್ಲ
ಗಂಗಮ್ಮ ನಮ್ಮ ಕೈಬಿಟ್ಟಳಲ್ಲ
ಭೂತಾಯಿ ಮಾತ್ರ ಸಲುವ್ತಾಳಲ್ಲ ||

ಯಾತಕ್ಕೆ ಮಳೆ ವಾದವೊ
ಶಿವಶಿವನೆ
ಜೀವ ತಲ್ಲಣಿಸುತಾವೊ ||

ಹಾಡು – ೨

ಗಂಡ ಹೆಂಡಿರ ಕೆಡಿಸಿತು
ನೀರು ಕಣಣ್ಣಾ ನೀರು ||

ಅತ್ತೆ ಸೊಸೆಯ ಕೆಡಿಸಿತು
ನೀರು ಕಣಣ್ಣಾ ನೀರು ||

ತಾಯಿ ಮಗನ ಕೆಡಿಸಿತು
ನೀರು ಕಣಣ್ಣಾ ನೀರು ||

ಹಾಡು – ೩

ದೊಡ್ಡ ಮನೆಯ ದೊಡ್ಡವ್ವ
ಮನಸು ಮಾತ್ರ ಚಿಕ್ಕದವ್ವ ||

ಹಟ್ಟಿಯಿಂದ ಹನುಮಂತನ
ದೊಡ್ಡವ್ವನಲ್ಲಿಗೆ ಕರೆಸಿತು ನೀರು ||

ಒಡತಿ ಆಳಿನ ಮನಸನೆಲ್ಲ
ಕೆಡಿಸಿತು ನೀರು ||

ಹಾಡು – ೪

ಊರಿನ ಮಾನ ಎಲ್ಲೈತಣ್ಣ
ಕುಡಿಯೊ ನೀರಲ್ಲಿ ||

ಹೆಣ್ಣಿನಮಾನ ಗಂಡಿನ ಕಣ್ಣು
ಕೆರೆಯ ನೀರಿನ ಬಣ್ಣ ||

ಜೀವ ನೀರು ಮಾನ ಪ್ರಾಣ
ಊರ ಘನತೆಣ್ಣ ||

ಹಾಡು – ೫

ದೇಸಾಯಿಗೆ ಎಂಥಾ ರೋಗವಯ್ಯ
ದೊಡ್ಡರೋಗ ದೊಡ್ಡರೋಗ ||

ಯಾತರಿಂದ ಬಂದ ರೋಗ
ಸಾವಿನ ಸಿದ್ಧತೆಗೆಲ್ಲಾ ಯೋಗ ||

ಜೀವನ ಶುದ್ಧ ಇಲ್ಲದಿದ್ದರೆ
ಬರುತೈತಣ್ಣ ದೊಡ್ಡ ರೋಗ ||

ಹಾಡು – ೬

ನೀಡಿರಮ್ಮ ದಾನ ನೀರ
ಕೇಳ ಬಂದಿಹನೀ ವಜೀರ ||

ಬಾವಿ ಬತ್ತಿ ಬಾಯಿ ಬತ್ತಿ
ಜೀವ ತಲ್ಲಣಿಸೂತೈತೆ ||

ಸಾಯಲಿರುವ ಜೀವವನ್ನು
ಚೊಂಬು ನೀರಲಿ ಉಳಿಸಲಿನ್ನು ||

ಹಾಡು – ೭

ಜೀವಕ್ಕೆ ಜಲಬೇಕು
ಜಲದೊಳಗೆ ಜೀವವುಂಟು ||

ದೇಸಾಯ ಜೀವ ಎಂಬೋದು
ಊರು ನೀಡಿದ ಧರ್ಮ ||

ಮಾಡಿದ್ದ ಉಣ್ಣುತೀಯ ತಮ್ಮ
ತಿಳೀಯಿದುವೆ ಬದುಕ ಮರ್ಮ ||

ಹಾಡು – ೮

ಬಾವಿ ಬತ್ತಿದರೇನಣ್ಣಾ
ಭೂಮಿ ಬಂಜೆಯಲ್ಲ ||

ಕರೆಯ ಆಳದಿ ತೋಡಣ್ಣ
ನೀರ ನೆಲೆಯ ನೋಡಣ್ಣ ||

ಬಿದ್ದ ಮಳೆಯ ನೀರನ್ನು
ಕೆರೆಯಲಿ ತಡೆಯಣ್ಣ ||

ಹಾಡು – ೯

ನೀರಿನ ನಾಯಕನೊ
ನಮ್ಮ ವಜೀರ್‌ಸಾಬನೊ ||

ಕೆರೆ ಹೂಳೆತ್ತಿಸಿ ನೀರನಿಂಗಿಸಿ
ಬಾವಿ ಜಲವನು ಬರಿಸಿದನೊ ||

ಮಳೆಯ ಬೆಳೆಯನು ಬೆಳೆಸಿದನೊ
ಊರಿನ ಬರವಾ ಮುಗಿಸಿದನೊ ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಟ ಕುರುಡರೆಂಟು ಮಂದಿ
Next post ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys