ಮಳೆಯ ಬೆಳೆ (ಬೀದಿ ನಾಟಕದ ಹಾಡು)

ಯಾತಕೆ ಮಳೆ ವಾದವೊ
ಶಿವಶಿವನೆ
ಜೀವ ತಲ್ಲಣಿಸುತಾವೊ ||

ಮಳೆಯಿಲ್ಲ ಬೆಳೆಯಿಲ್ಲ ಶಿವನೆ
ನಮ ಬದುಕಿಗೆ ನೆಲೆಯೆಲ್ಲಿ ಶಿವನೆ ||

ದಿನವೂ ಮುಗಿಲತ್ತ ದಿಟ್ಟಿಯನಿಟ್ಟು
ಕಾಣದಾದೆವೊ ಹೊಟ್ಟೆಗೆ ಹಿಟ್ಟು
ಎತ್ತ ನೋಡಲ್ಲಿ ಬಿಸಿಲು ರಣರಣಾ
ಬರಿದಾದ ಒಡಲೆಲ್ಲ ಭಣ ಭಣಾ ||

ಮಳೆರಾಯ ನಮ್ಮ ಮರೆತಾನಲ್ಲ
ಸೂರ್ಯಪ್ಪ ನಮ್ಮ ಸುಡುತಾನಲ್ಲ
ಗಂಗಮ್ಮ ನಮ್ಮ ಕೈಬಿಟ್ಟಳಲ್ಲ
ಭೂತಾಯಿ ಮಾತ್ರ ಸಲುವ್ತಾಳಲ್ಲ ||

ಯಾತಕ್ಕೆ ಮಳೆ ವಾದವೊ
ಶಿವಶಿವನೆ
ಜೀವ ತಲ್ಲಣಿಸುತಾವೊ ||

ಹಾಡು – ೨

ಗಂಡ ಹೆಂಡಿರ ಕೆಡಿಸಿತು
ನೀರು ಕಣಣ್ಣಾ ನೀರು ||

ಅತ್ತೆ ಸೊಸೆಯ ಕೆಡಿಸಿತು
ನೀರು ಕಣಣ್ಣಾ ನೀರು ||

ತಾಯಿ ಮಗನ ಕೆಡಿಸಿತು
ನೀರು ಕಣಣ್ಣಾ ನೀರು ||

ಹಾಡು – ೩

ದೊಡ್ಡ ಮನೆಯ ದೊಡ್ಡವ್ವ
ಮನಸು ಮಾತ್ರ ಚಿಕ್ಕದವ್ವ ||

ಹಟ್ಟಿಯಿಂದ ಹನುಮಂತನ
ದೊಡ್ಡವ್ವನಲ್ಲಿಗೆ ಕರೆಸಿತು ನೀರು ||

ಒಡತಿ ಆಳಿನ ಮನಸನೆಲ್ಲ
ಕೆಡಿಸಿತು ನೀರು ||

ಹಾಡು – ೪

ಊರಿನ ಮಾನ ಎಲ್ಲೈತಣ್ಣ
ಕುಡಿಯೊ ನೀರಲ್ಲಿ ||

ಹೆಣ್ಣಿನಮಾನ ಗಂಡಿನ ಕಣ್ಣು
ಕೆರೆಯ ನೀರಿನ ಬಣ್ಣ ||

ಜೀವ ನೀರು ಮಾನ ಪ್ರಾಣ
ಊರ ಘನತೆಣ್ಣ ||

ಹಾಡು – ೫

ದೇಸಾಯಿಗೆ ಎಂಥಾ ರೋಗವಯ್ಯ
ದೊಡ್ಡರೋಗ ದೊಡ್ಡರೋಗ ||

ಯಾತರಿಂದ ಬಂದ ರೋಗ
ಸಾವಿನ ಸಿದ್ಧತೆಗೆಲ್ಲಾ ಯೋಗ ||

ಜೀವನ ಶುದ್ಧ ಇಲ್ಲದಿದ್ದರೆ
ಬರುತೈತಣ್ಣ ದೊಡ್ಡ ರೋಗ ||

ಹಾಡು – ೬

ನೀಡಿರಮ್ಮ ದಾನ ನೀರ
ಕೇಳ ಬಂದಿಹನೀ ವಜೀರ ||

ಬಾವಿ ಬತ್ತಿ ಬಾಯಿ ಬತ್ತಿ
ಜೀವ ತಲ್ಲಣಿಸೂತೈತೆ ||

ಸಾಯಲಿರುವ ಜೀವವನ್ನು
ಚೊಂಬು ನೀರಲಿ ಉಳಿಸಲಿನ್ನು ||

ಹಾಡು – ೭

ಜೀವಕ್ಕೆ ಜಲಬೇಕು
ಜಲದೊಳಗೆ ಜೀವವುಂಟು ||

ದೇಸಾಯ ಜೀವ ಎಂಬೋದು
ಊರು ನೀಡಿದ ಧರ್ಮ ||

ಮಾಡಿದ್ದ ಉಣ್ಣುತೀಯ ತಮ್ಮ
ತಿಳೀಯಿದುವೆ ಬದುಕ ಮರ್ಮ ||

ಹಾಡು – ೮

ಬಾವಿ ಬತ್ತಿದರೇನಣ್ಣಾ
ಭೂಮಿ ಬಂಜೆಯಲ್ಲ ||

ಕರೆಯ ಆಳದಿ ತೋಡಣ್ಣ
ನೀರ ನೆಲೆಯ ನೋಡಣ್ಣ ||

ಬಿದ್ದ ಮಳೆಯ ನೀರನ್ನು
ಕೆರೆಯಲಿ ತಡೆಯಣ್ಣ ||

ಹಾಡು – ೯

ನೀರಿನ ನಾಯಕನೊ
ನಮ್ಮ ವಜೀರ್‌ಸಾಬನೊ ||

ಕೆರೆ ಹೂಳೆತ್ತಿಸಿ ನೀರನಿಂಗಿಸಿ
ಬಾವಿ ಜಲವನು ಬರಿಸಿದನೊ ||

ಮಳೆಯ ಬೆಳೆಯನು ಬೆಳೆಸಿದನೊ
ಊರಿನ ಬರವಾ ಮುಗಿಸಿದನೊ ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಟ ಕುರುಡರೆಂಟು ಮಂದಿ
Next post ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…