Home / ಕವನ / ಕವಿತೆ / ಮಳೆಯ ಬೆಳೆ (ಬೀದಿ ನಾಟಕದ ಹಾಡು)

ಮಳೆಯ ಬೆಳೆ (ಬೀದಿ ನಾಟಕದ ಹಾಡು)

ಯಾತಕೆ ಮಳೆ ವಾದವೊ
ಶಿವಶಿವನೆ
ಜೀವ ತಲ್ಲಣಿಸುತಾವೊ ||

ಮಳೆಯಿಲ್ಲ ಬೆಳೆಯಿಲ್ಲ ಶಿವನೆ
ನಮ ಬದುಕಿಗೆ ನೆಲೆಯೆಲ್ಲಿ ಶಿವನೆ ||

ದಿನವೂ ಮುಗಿಲತ್ತ ದಿಟ್ಟಿಯನಿಟ್ಟು
ಕಾಣದಾದೆವೊ ಹೊಟ್ಟೆಗೆ ಹಿಟ್ಟು
ಎತ್ತ ನೋಡಲ್ಲಿ ಬಿಸಿಲು ರಣರಣಾ
ಬರಿದಾದ ಒಡಲೆಲ್ಲ ಭಣ ಭಣಾ ||

ಮಳೆರಾಯ ನಮ್ಮ ಮರೆತಾನಲ್ಲ
ಸೂರ್ಯಪ್ಪ ನಮ್ಮ ಸುಡುತಾನಲ್ಲ
ಗಂಗಮ್ಮ ನಮ್ಮ ಕೈಬಿಟ್ಟಳಲ್ಲ
ಭೂತಾಯಿ ಮಾತ್ರ ಸಲುವ್ತಾಳಲ್ಲ ||

ಯಾತಕ್ಕೆ ಮಳೆ ವಾದವೊ
ಶಿವಶಿವನೆ
ಜೀವ ತಲ್ಲಣಿಸುತಾವೊ ||

ಹಾಡು – ೨

ಗಂಡ ಹೆಂಡಿರ ಕೆಡಿಸಿತು
ನೀರು ಕಣಣ್ಣಾ ನೀರು ||

ಅತ್ತೆ ಸೊಸೆಯ ಕೆಡಿಸಿತು
ನೀರು ಕಣಣ್ಣಾ ನೀರು ||

ತಾಯಿ ಮಗನ ಕೆಡಿಸಿತು
ನೀರು ಕಣಣ್ಣಾ ನೀರು ||

ಹಾಡು – ೩

ದೊಡ್ಡ ಮನೆಯ ದೊಡ್ಡವ್ವ
ಮನಸು ಮಾತ್ರ ಚಿಕ್ಕದವ್ವ ||

ಹಟ್ಟಿಯಿಂದ ಹನುಮಂತನ
ದೊಡ್ಡವ್ವನಲ್ಲಿಗೆ ಕರೆಸಿತು ನೀರು ||

ಒಡತಿ ಆಳಿನ ಮನಸನೆಲ್ಲ
ಕೆಡಿಸಿತು ನೀರು ||

ಹಾಡು – ೪

ಊರಿನ ಮಾನ ಎಲ್ಲೈತಣ್ಣ
ಕುಡಿಯೊ ನೀರಲ್ಲಿ ||

ಹೆಣ್ಣಿನಮಾನ ಗಂಡಿನ ಕಣ್ಣು
ಕೆರೆಯ ನೀರಿನ ಬಣ್ಣ ||

ಜೀವ ನೀರು ಮಾನ ಪ್ರಾಣ
ಊರ ಘನತೆಣ್ಣ ||

ಹಾಡು – ೫

ದೇಸಾಯಿಗೆ ಎಂಥಾ ರೋಗವಯ್ಯ
ದೊಡ್ಡರೋಗ ದೊಡ್ಡರೋಗ ||

ಯಾತರಿಂದ ಬಂದ ರೋಗ
ಸಾವಿನ ಸಿದ್ಧತೆಗೆಲ್ಲಾ ಯೋಗ ||

ಜೀವನ ಶುದ್ಧ ಇಲ್ಲದಿದ್ದರೆ
ಬರುತೈತಣ್ಣ ದೊಡ್ಡ ರೋಗ ||

ಹಾಡು – ೬

ನೀಡಿರಮ್ಮ ದಾನ ನೀರ
ಕೇಳ ಬಂದಿಹನೀ ವಜೀರ ||

ಬಾವಿ ಬತ್ತಿ ಬಾಯಿ ಬತ್ತಿ
ಜೀವ ತಲ್ಲಣಿಸೂತೈತೆ ||

ಸಾಯಲಿರುವ ಜೀವವನ್ನು
ಚೊಂಬು ನೀರಲಿ ಉಳಿಸಲಿನ್ನು ||

ಹಾಡು – ೭

ಜೀವಕ್ಕೆ ಜಲಬೇಕು
ಜಲದೊಳಗೆ ಜೀವವುಂಟು ||

ದೇಸಾಯ ಜೀವ ಎಂಬೋದು
ಊರು ನೀಡಿದ ಧರ್ಮ ||

ಮಾಡಿದ್ದ ಉಣ್ಣುತೀಯ ತಮ್ಮ
ತಿಳೀಯಿದುವೆ ಬದುಕ ಮರ್ಮ ||

ಹಾಡು – ೮

ಬಾವಿ ಬತ್ತಿದರೇನಣ್ಣಾ
ಭೂಮಿ ಬಂಜೆಯಲ್ಲ ||

ಕರೆಯ ಆಳದಿ ತೋಡಣ್ಣ
ನೀರ ನೆಲೆಯ ನೋಡಣ್ಣ ||

ಬಿದ್ದ ಮಳೆಯ ನೀರನ್ನು
ಕೆರೆಯಲಿ ತಡೆಯಣ್ಣ ||

ಹಾಡು – ೯

ನೀರಿನ ನಾಯಕನೊ
ನಮ್ಮ ವಜೀರ್‌ಸಾಬನೊ ||

ಕೆರೆ ಹೂಳೆತ್ತಿಸಿ ನೀರನಿಂಗಿಸಿ
ಬಾವಿ ಜಲವನು ಬರಿಸಿದನೊ ||

ಮಳೆಯ ಬೆಳೆಯನು ಬೆಳೆಸಿದನೊ
ಊರಿನ ಬರವಾ ಮುಗಿಸಿದನೊ ||

*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ