ಒಂಟೆಗಳಿಗೆ ನಗುವೋ ನಗು

ಉದ್ದಗಲ ಮರುಭೂಮಿ ಕೊರೆಯುವ ಬಿಸಿಲು
ದಿನಗಳೇ ರಣ ರಣ ಮಟ ಮಟ ಮಧ್ಯಾನ್ಹ
ಕೊನೆ ಇರದ ದಾರಿ ಸತ್ತು ಹೋದ ಮಣ್ಣು
ತಂಪು ಇಂಪಿಲ್ಲದ ಸಂಜೆಗೆ
ಡೇರಿ ಹೂಡುವ ಯಾತ್ರಿಕರ
ಬಿಡುಗಡೆಯಾಗುವ ಒಂಟೆಗಳ ಸಂಭ್ರಮ.
ಗುಂಪು ಗುಂಪುಗಳ ಎಷ್ಟೊಂದು ಒಂಟೆಗಳು
ಮಾತುಕತೆ ಇನ್ನೂ ಎಷ್ಣು ದೂರ
ಮೆಲುಕುತ್ತ ಮೈಲೇಜ್ ಎನಿಸುತ್ತವೇನೋ!
ಓಯಸಿಸ್ ಇಲ್ಲ
ನೀರಿಲ್ಲದ ಊಟವಿಲ್ಲದ ದಂಡಿಗೆ ಸುಸ್ತು
ಆರಿಸಿ ದಷ್ಟಪುಷ್ಟದ ಒಂಟೆ ಎಳೆದು
ಆಯಿತಲ್ಲ ಎರಡೂ
ರುಂಡ ಸಿಡಿಸಿ ಹೊಟ್ಟೆಯೊಡೆದು
ನೀರೆಳೆದು ಬೆಂಕಿಗೆ ತಳ್ಳಿ ಸುಟ್ಟು
ತಿಂದಿದ್ದೇನು ಮಜ ಅವರಿಗೆ
ಕರುಳು ಕಳೆದುಕೊಂಡಿದ್ದೇನು ದುಃಖ
ಇವುಗಳಿಗೆ.
ಶತ ಶತಮಾನದ ದಲಿತಗಳಿವು
ಇದ್ದರೂ ಶಕ್ತಿ ಎದುರಿಸಲಾರದ ಶೋಷಿತಗಳಿವು
ಧ್ವನಿ ಇಲ್ಲದ ಗುಂಪುಗಳಿವು
ಸ್ವತಂತ್ರವಿಲ್ಲದ ದೇಸಿಗಳು
ಅಬ್ಬಬ್ಬಾ ಎಷ್ಟೊಂದು ಸಹನೆ,
ಆದರೂ ಒಳಗೊಳಗೆ ಕೊರಗುವ ದುಃಖ ದುಮ್ಮಾನ
ಈಗೀಗ ಪಾತ್ರವಾಗಿವೆ
ಅಲ್ಲಾನ ನಾಡಿನ ಅಲ್ಲಾನ ಕೃಪೆಗೆ
ಮರುಹುಟ್ಟು ಪಡೆದಿವೆ.

ಈಗ ಉದ್ದಗಲದ ಮರುಭೂಮಿಗೆ
ವಿದೇಶಿ ಕಾರು ವಿಮಾನಗಳ ದಾಳಿ
ಯಾರೊಬ್ಬ ಅರಬ್ ನೋಡುತ್ತಿಲ್ಲ ಮಾತಾಡಿಸುತ್ತಿಲ್ಲ
ಒಂಟೆಗಳೊಂದಿಗೆ
ಕಟ್ಟಿ ಹಾಕುವ ಮಾಲೀಕರಿಲ್ಲ
ಹೊಟ್ಟೆಯೊಡೆದು ನೀರೆಳೆಯುವ ದರೋಡೆ ಕೋರರಿಲ್ಲ
ದಂಡೆಗೆ ಸರಿದಿವೆ ಮರುಭೂಮಿ
ಮುದಿ ಹಡಗುಗಳು
ಕಲಿಸುತಿವೆ ಮರಿಗಳಿಗೆ
ಎಲ್ಲೆಂದರಲ್ಲಿ ಮರ್ಸಿಡಿಸ್ ಬೆಂಜ್‌ನಂತೆ
ಫ್ರೀಯಾಗಿ ಓಡಾಡಲು
ಈಗೀಗ ಶಕ್ತಿ ಬಂದಿದೆ ಬೆಂಜ್
ಡಿಕ್ಕಿ ಹೊಡೆದುರುಳಿಸುವ
ಸ್ವಾತಂತ್ರ್ಯಸಿಕ್ಕಿದೆ ಅಲೆಯುವ
ವಿದೇಶಿ ತೌಡು ತಿಂದು ಮೆಲಕುಹಾಕುತ್ತ
ನಗುತ್ತವೇನೋ!
ಒಂಟೆಗಳಿಗೀಗೀಗ ರಾಯಲ್ ಟ್ರೀಟ್‍ಮೆಂಟ್
ಮಾಲೀಷ್, ವಾಕಿಂಗ್‌ಮಾಡಿಸಲು
ಬಂಗ್ಲಾ ಮಕ್ಕಳು ಬರುತ್ತಿವೆಯಂತೆ
ಒಂಟೆಗಳಿಗೆ ಒಳಗೊಳಗೊ ನಗುವೋ ನಗು.
*****

ಪುಸ್ತಕ: ಗಾಂಜಾ ಡಾಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತ್ಯಕ್ಷ ದೇವರು
Next post ಜ್ಞಾನದ ಮೊರೆ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys