ಜ್ಞಾನದ ಮೊರೆ

ತಾರೆಗಳು ಶತಕೋಟಿ ಉದಿಸಿದರು ಬಾನಿನಲಿ,
ಮೀರಿ ತೆರೆಗಳ ಧೀರ್ಘ ಆರ್ಭಟವೆ ಹೆಚ್ಚಿರಲಿ,
ಶೂರ ಪುರುಷರು ಕಾಯದೊಳವಧಿಯನು ಮುಟ್ಟಿರಲಿ,
ಸಾರ ಸಗ್ಗವು ತೋರ್ಪ ಸ್ತುತಿಹಲವು ಘೂರ್ಮಿಸಲಿ-
ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಧಾರೆಧಾರೆಗಳಾಗಿ ಜಗದಿ ನೆತ್ತರವೆ ಪ್ರಹಿಸಲಿ,
ನೀರೆಯರ ಕುಡಿನೋಟದಿಂ ಬಲವೆ ತಗ್ಗಿರಲಿ,
ಭಾರವದು ಧರೆಗೀವ ಅಜ್ಞಾನ ನಾಟಿರಲಿ,
ಚೋರತಂತ್ರಗಳಲವು ನಿರ್ಭಯದಿ ಹಬ್ಬಿರಲಿ-
ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಬಡತನದ ಬೇನೆಯಲಿ ಶತವರ್ಷ ಬಳಲಿರಲಿ,
ನಡುನೆಟ್ಟನಿಡಿಕಿಲದೆ ಶತಮಾಸ ಬಾಲಿರಲಿ,
ನಿಡುಮರವು ಕಾನನದಿ ನಿಬಿಡಾಗಿ ಹಬ್ಬಿರಲಿ,
ಜಡದೇಹವದರಂತೆ ನೀರಸದಿ ಇರಲಿರಲಿ-
ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಗತಕಾಲ ಸಾಹಿತ್ಯ ಸಮಗ್ರವನು ಜಯಿಸಿರಲಿ,
ಗತವೀರ ಚಾರಿತ್ರ್‍ಯ ಶಾಸನವ ಪಠಿಸಿರಲಿ,
ಗತಲೋಕ ವೈರಾಗ್ಯ ಸಂಪದವ ಬಿಂಬಿಸಲಿ,
ಗತಜೀವ ನಿರ್ವಾಣ ಸಾಯುಜ್ಯ ನೆನೆದಿರಲಿ-
ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ?

ಕ್ರಿಮಿಯದುವೆ ಸತ್ಕರ್ಮಿ, ಅದರಂತೆ ನಾನೆಲ್ಲಿ?
ನಿಮಿಸಿದ ಬಾಳಿದುವೆ, ಮಾಭೋಗ ಇನ್ನೆಲ್ಲಿ?
ಧರ್ಮಿಧರ್ಮಗಳ ಬಾಳೆಲ್ಲ ಅಂದಾಯ್ತು-ಈಗೆಲ್ಲಿ?
ನಿಮಿಷ ನಿಮಿಷದ ಚಿಂತೆ ಇಂತಲ್ಲದಿನ್ನಿಲ್ಲಿ,
ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ.
*****

ಪುಸ್ತಕ: ಸೂರ್ಯ ಕಾಂತಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂಟೆಗಳಿಗೆ ನಗುವೋ ನಗು
Next post ಹಳೆಯ ಹಾಡು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…