Home / ಕವನ / ಕವಿತೆ / ಬೆಳವಡಿಯ ಬೆಳಕು (ಬೆಳವಡಿ ಮಲ್ಲಮ್ಮ)

ಬೆಳವಡಿಯ ಬೆಳಕು (ಬೆಳವಡಿ ಮಲ್ಲಮ್ಮ)

ಹಸುಗಳ ಕದ್ದ ನೆಪಕೆ
ಬೆಂಕಿಹೊತ್ತಿಕೊಂಡಿತು ಬೆಳವಡಿಗೆ
ಧಗಧಗಿಸಿದ್ದು ಶಿವಾಜಿಡೇರೆಯೊಳಗೆ
ಈಶ ಪ್ರಭುವಿನ ಮರಣ ನಕ್ಷತ್ರ ಜಾರಿದ ಹೊತ್ತು
ಉಕ್ಕಿ ಉಕ್ಕಿ ಹರಿಯಿತು ಮಲ್ಲಮ್ಮಳ ಮಲಪ್ರಭೆ

ಆಕಾಶ ತುಂಬೆಲ್ಲ ಧೂಳಿಪಟಗಳ ಅಬ್ಬರ
ಕಾಲಡಿಯಲ್ಲಿ ಬೆಳವಡಿಯ ವೀರರರಕ್ತ
ಹರಿದು ಹೆಪ್ಪುಗಟ್ಟಿ ಕೆಂಪು ಕಪ್ಪು ನೀಲಿಯಾಗಲು
ಸೋದರಿಯರ ನೋವು ಮಡುಗಟ್ಟಿತು
ಅಸಹನೆ ತಳಮಳಗಳ ಒಡ್ಡು ಒಡೆದದ್ದೇ ಕ್ಷಣ
ಪಣತೊಟ್ಟು ನಿಂತಿತು ನಾಡರಕ್ಷಣೆಗೆ
ಮಹಿಳಾಮಣಿಗಳ ಆವೇಶ ಕೆಚ್ಚೆದೆಯ ಶಕ್ತಿ

‘ಆಯುಷ್ಯ ರಾಜ್ಯ ಬೇಕೇನೋ ಶಿವರಾಮ
ನಿನ್ನ ಕನಸಿನ ಸುಳ್ಳಿನ ಚೀಲ ತುಂಬಲು
ದೇವಿಭಕ್ತ ನೀನು ಭವಾನಿಯೇ ನಾನಾಗಿ….
ರುಂಡಚೆಂಡಾಡಿ ರಕ್ತ ಹೀರುವೆ’
ಏನೋ ಕ್ಷುಲ್ಲಕ ಘಟನೆ ಅರಿಯದ ತಪ್ಪು
ಎಂಥದೋ ಸಿಡಿಲು ಯಾಕೋ ಗುಡುಗು
‘ಕ್ಷಮಿಸು ತಾಯೆ ಕ್ಷಮಿಸು’ – ಶಿರಬಾಗಿ
ಬೊನಿನೊಳಗೆ ಬಿದ್ದ ಹುಲಿಯ ಮಾತುಗಳು

ಸಂಧಾನ ಸಂಧಾನ ಸಂಧಾನ
ತಪ್ಪೊಪ್ಪಿಗೆಗೆ ಸೋದರಿಭಾವನೆ ಸ್ವೀಕಾರ
ನಾಡ ರಕ್ಷಣೆಗೆ ಪ್ರಾಣವೇ ಪಣಕ್ಕಿಟ್ಟು ಹೋರಾಡಿದ
ತಾಯಿದೇವಿ ಕನ್ನಡದ ಮುಕುಟ ಮಣಿಯೇ
ನಿನ್ನ ಸೇವೆಗೆ ಸದಾಸಿದ್ಧ, ಸದಾಕಾವಲು
ಶಿವಾಜಿ, ಬೆಳವಡಿಯ ಬಾಂಧವ್ಯ ಅಜರಾಮರ
ಧರ್ಮರಕ್ಷಕರ ಕೊಂಡಿ ಅನಂತ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...