Home / ಕವನ / ಕವಿತೆ / ಬೆಳವಡಿಯ ಬೆಳಕು (ಬೆಳವಡಿ ಮಲ್ಲಮ್ಮ)

ಬೆಳವಡಿಯ ಬೆಳಕು (ಬೆಳವಡಿ ಮಲ್ಲಮ್ಮ)

ಹಸುಗಳ ಕದ್ದ ನೆಪಕೆ
ಬೆಂಕಿಹೊತ್ತಿಕೊಂಡಿತು ಬೆಳವಡಿಗೆ
ಧಗಧಗಿಸಿದ್ದು ಶಿವಾಜಿಡೇರೆಯೊಳಗೆ
ಈಶ ಪ್ರಭುವಿನ ಮರಣ ನಕ್ಷತ್ರ ಜಾರಿದ ಹೊತ್ತು
ಉಕ್ಕಿ ಉಕ್ಕಿ ಹರಿಯಿತು ಮಲ್ಲಮ್ಮಳ ಮಲಪ್ರಭೆ

ಆಕಾಶ ತುಂಬೆಲ್ಲ ಧೂಳಿಪಟಗಳ ಅಬ್ಬರ
ಕಾಲಡಿಯಲ್ಲಿ ಬೆಳವಡಿಯ ವೀರರರಕ್ತ
ಹರಿದು ಹೆಪ್ಪುಗಟ್ಟಿ ಕೆಂಪು ಕಪ್ಪು ನೀಲಿಯಾಗಲು
ಸೋದರಿಯರ ನೋವು ಮಡುಗಟ್ಟಿತು
ಅಸಹನೆ ತಳಮಳಗಳ ಒಡ್ಡು ಒಡೆದದ್ದೇ ಕ್ಷಣ
ಪಣತೊಟ್ಟು ನಿಂತಿತು ನಾಡರಕ್ಷಣೆಗೆ
ಮಹಿಳಾಮಣಿಗಳ ಆವೇಶ ಕೆಚ್ಚೆದೆಯ ಶಕ್ತಿ

‘ಆಯುಷ್ಯ ರಾಜ್ಯ ಬೇಕೇನೋ ಶಿವರಾಮ
ನಿನ್ನ ಕನಸಿನ ಸುಳ್ಳಿನ ಚೀಲ ತುಂಬಲು
ದೇವಿಭಕ್ತ ನೀನು ಭವಾನಿಯೇ ನಾನಾಗಿ….
ರುಂಡಚೆಂಡಾಡಿ ರಕ್ತ ಹೀರುವೆ’
ಏನೋ ಕ್ಷುಲ್ಲಕ ಘಟನೆ ಅರಿಯದ ತಪ್ಪು
ಎಂಥದೋ ಸಿಡಿಲು ಯಾಕೋ ಗುಡುಗು
‘ಕ್ಷಮಿಸು ತಾಯೆ ಕ್ಷಮಿಸು’ – ಶಿರಬಾಗಿ
ಬೊನಿನೊಳಗೆ ಬಿದ್ದ ಹುಲಿಯ ಮಾತುಗಳು

ಸಂಧಾನ ಸಂಧಾನ ಸಂಧಾನ
ತಪ್ಪೊಪ್ಪಿಗೆಗೆ ಸೋದರಿಭಾವನೆ ಸ್ವೀಕಾರ
ನಾಡ ರಕ್ಷಣೆಗೆ ಪ್ರಾಣವೇ ಪಣಕ್ಕಿಟ್ಟು ಹೋರಾಡಿದ
ತಾಯಿದೇವಿ ಕನ್ನಡದ ಮುಕುಟ ಮಣಿಯೇ
ನಿನ್ನ ಸೇವೆಗೆ ಸದಾಸಿದ್ಧ, ಸದಾಕಾವಲು
ಶಿವಾಜಿ, ಬೆಳವಡಿಯ ಬಾಂಧವ್ಯ ಅಜರಾಮರ
ಧರ್ಮರಕ್ಷಕರ ಕೊಂಡಿ ಅನಂತ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...