Home / ಕಥೆ / ಕಿರು ಕಥೆ / ದುಂಬಿದಂಡು

ದುಂಬಿದಂಡು

ಝೆನ್ ಗುರುಗಳು ಧ್ಯಾನಕ್ಕೆ ಕುಳಿತಾಗ ದುಂಬಿಯ ದಂಡು ಒಂದು ಗುರುಗಳನ್ನು ಸತಾಯಿಸುತಿತ್ತು. ಗುರುಗಳ ಧ್ಯಾನ ಭಂಗವಾಗದಂತೆ ಶಿಷ್ಯ ಬಹಳ ಶ್ರಮವಹಿಸಿ ದುಂಬಿಗಳನ್ನು ಓಡಿಸುತ್ತಿದ್ದ. ದುಂಬಿಗಳು ಝೇಂಕಾರ ಮಾಡುತ್ತ ಕೆಲವೊಮ್ಮೆ ಗುರುಗಳನ್ನು ಕುಟುಕುತಿತ್ತು. ಕಿವಿಯ ಹತ್ತಿರ ಹೋಗಿ ಗುಂಯ್ ಗುಟ್ಟುತಿತ್ತು. ಅತೀವ ಕಳವಳದಿಂದ ಶಿಷ್ಯ ಗುರುಗಳಲ್ಲಿ ಹೇಳಿದ- “ನಿಮಗೆ ತೊಂದರೆ ಕೊಡುತ್ತಿರುವ ಈ ದುಂಬಿ ದುಂಡನ್ನು ನಾನು ಇಂದು ಜಾಲದಲ್ಲಿ ಸೆರೆಹಿಡಿಯುತ್ತೇನೆ” ಎಂದು. ಸರ್ವಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

ಮಾರನೆಯದಿನ ಶಿಷ್ಯ ದುಂಬಿ ದಂಡನ್ನು ಮರ್ದಿಸಲು ಖಡ್ಗ ಪ್ರಯೋಗ ಮಾಡಲು ಅನುವಾದ. ಇದನ್ನು ನೋಡಿದ ಗುರುಗಳು- “ಶಿಷ್ಯ ದುಡಕಬೇಡ, ಇದಕ್ಕೆ ಒಂದು ಸುಲಭೋಪಾಯವಿದೆ” ಎಂದರು. “ಗುರುಗಳೇ ಹೇಳಿ ನಾನು ಏನು ಮಾಡಬೇಕು?” ಎಂದ ಶಿಷ್ಯ.

ಸುಗಂಧಿತ ಪುಷ್ಪದ ಕುಂಡಗಳಿಂದ ನಮ್ಮ ಬೌದ್ಧ ವಿಹಾರವನ್ನು ಅಲಂಕರಿಸು. ಆಗ ದುಂಬಿದಂಡು ತಮ್ಮ ಧ್ಯಾನವನ್ನು, ಗಮನವನ್ನು ಹೂವಿನ ಹೃದಯದ ಕಡೆ ತಿರುಗಿಸುತ್ತವೆ. ನನ್ನ ಧ್ಯಾನಕ್ಕೆ ಏನು ಅಡ್ಡಿಯಾಗುವುದಿಲ್ಲ.” ಎಂದರು ಗುರುಗಳು.

ಶಿಷ್ಯನ ಕೈಯಲ್ಲಿದ್ದ ಖಡ್ಗದ ಬ್ರಹ್ಮಾಸ್ತ್ರನಾಚಿ ಮೂಲೆ ಸೇರಿತು. ಸ್ವರ್ಣ ಸಂಪಿಗೆ, ಮಲ್ಲಿಗೆ, ಜಾಜಿ, ಕಮಲಗಳು ವಿಹಾರದಲ್ಲಿ ಅರಳಿ ದುಂಬಿವಿಂಡಿಗೆ ಸ್ವಾಗತವಿತ್ತವು. ಸಮಸ್ಯೆಗೆ ಶಾಂತ ಪರಿಹಾರ ಸೂಚಿಸಿದ ಗುರುಗಳಿಗೆ ಶಿಷ್ಯ ನಮಿಸಿದ.
*****

Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...