Home / ಕಥೆ / ಕಿರು ಕಥೆ / ದುಂಬಿದಂಡು

ದುಂಬಿದಂಡು

ಝೆನ್ ಗುರುಗಳು ಧ್ಯಾನಕ್ಕೆ ಕುಳಿತಾಗ ದುಂಬಿಯ ದಂಡು ಒಂದು ಗುರುಗಳನ್ನು ಸತಾಯಿಸುತಿತ್ತು. ಗುರುಗಳ ಧ್ಯಾನ ಭಂಗವಾಗದಂತೆ ಶಿಷ್ಯ ಬಹಳ ಶ್ರಮವಹಿಸಿ ದುಂಬಿಗಳನ್ನು ಓಡಿಸುತ್ತಿದ್ದ. ದುಂಬಿಗಳು ಝೇಂಕಾರ ಮಾಡುತ್ತ ಕೆಲವೊಮ್ಮೆ ಗುರುಗಳನ್ನು ಕುಟುಕುತಿತ್ತು. ಕಿವಿಯ ಹತ್ತಿರ ಹೋಗಿ ಗುಂಯ್ ಗುಟ್ಟುತಿತ್ತು. ಅತೀವ ಕಳವಳದಿಂದ ಶಿಷ್ಯ ಗುರುಗಳಲ್ಲಿ ಹೇಳಿದ- “ನಿಮಗೆ ತೊಂದರೆ ಕೊಡುತ್ತಿರುವ ಈ ದುಂಬಿ ದುಂಡನ್ನು ನಾನು ಇಂದು ಜಾಲದಲ್ಲಿ ಸೆರೆಹಿಡಿಯುತ್ತೇನೆ” ಎಂದು. ಸರ್ವಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

ಮಾರನೆಯದಿನ ಶಿಷ್ಯ ದುಂಬಿ ದಂಡನ್ನು ಮರ್ದಿಸಲು ಖಡ್ಗ ಪ್ರಯೋಗ ಮಾಡಲು ಅನುವಾದ. ಇದನ್ನು ನೋಡಿದ ಗುರುಗಳು- “ಶಿಷ್ಯ ದುಡಕಬೇಡ, ಇದಕ್ಕೆ ಒಂದು ಸುಲಭೋಪಾಯವಿದೆ” ಎಂದರು. “ಗುರುಗಳೇ ಹೇಳಿ ನಾನು ಏನು ಮಾಡಬೇಕು?” ಎಂದ ಶಿಷ್ಯ.

ಸುಗಂಧಿತ ಪುಷ್ಪದ ಕುಂಡಗಳಿಂದ ನಮ್ಮ ಬೌದ್ಧ ವಿಹಾರವನ್ನು ಅಲಂಕರಿಸು. ಆಗ ದುಂಬಿದಂಡು ತಮ್ಮ ಧ್ಯಾನವನ್ನು, ಗಮನವನ್ನು ಹೂವಿನ ಹೃದಯದ ಕಡೆ ತಿರುಗಿಸುತ್ತವೆ. ನನ್ನ ಧ್ಯಾನಕ್ಕೆ ಏನು ಅಡ್ಡಿಯಾಗುವುದಿಲ್ಲ.” ಎಂದರು ಗುರುಗಳು.

ಶಿಷ್ಯನ ಕೈಯಲ್ಲಿದ್ದ ಖಡ್ಗದ ಬ್ರಹ್ಮಾಸ್ತ್ರನಾಚಿ ಮೂಲೆ ಸೇರಿತು. ಸ್ವರ್ಣ ಸಂಪಿಗೆ, ಮಲ್ಲಿಗೆ, ಜಾಜಿ, ಕಮಲಗಳು ವಿಹಾರದಲ್ಲಿ ಅರಳಿ ದುಂಬಿವಿಂಡಿಗೆ ಸ್ವಾಗತವಿತ್ತವು. ಸಮಸ್ಯೆಗೆ ಶಾಂತ ಪರಿಹಾರ ಸೂಚಿಸಿದ ಗುರುಗಳಿಗೆ ಶಿಷ್ಯ ನಮಿಸಿದ.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...