Home / ಕವನ / ಕವಿತೆ / ಬೆಳಕು ಬೆಳೆದ ಈ ಹಿತ

ಬೆಳಕು ಬೆಳೆದ ಈ ಹಿತ

ಮನೆಯ ತೊರೆದು ಹೊರಗೆ ಬಾರೆ
ಹುಣ್ಣಿಮೆಯನು ನೋಡಲು
ಇರುಳಿನೆದೆಯು ಹೂತು ಹರಿದ
ಹಾಲಿನಲ್ಲಿ ಮೀಯಲು.
ಹುಣ್ಣಿಮೆಯಿದು ಬಾನ ಬಾಳ
ಪೂರ್ಣಿಮೆಯೇ ಅಲ್ಲವೇ?
ಬುವಿಯ ಬಯಕೆ ಬಾಯಾರಿಕೆ
ಕಳೆವ ಗಂಗೆಯಲ್ಲವೆ?
ನಂದನಕ್ಕೆ ನೀರೆರೆಯುವ
ಸಂಜೀವಕ ವಾಹಿನಿ!
ದಿಕ್ತಟಗಳ ದಾಟಿ ಹರಿದ
ಅನುಪಮ ಸಂಮೋಹಿನಿ!
ಬಾಂದೇವಿಯ ಶೃಂಗಾರಕೆ
ಹೂತ ವತ್ಸಲತೆಯಿದು.
ಭೂದೇವಿಯ ಶೃಂಗಸ್ತನ
ತೊರೆದ ಒಲವು ಹಾಲಿದು,
ಬಾಂಗಡಲಿನ ನೀಲಿಮೆಯಲಿ
ಜನಿಸಿ ನೆಗೆದ ಸುರಭಿಯು
ಮದವೇರದ ಮುದಬೀರುವ
ಅತಿ ಮಾನವ ಪೇಯವು.
ಇಂಗಡಲಿದು ಉಡುಲೋಕವ
ಮುಳುಗಿಸುತ್ತ ಬೆಳೆದಿದೆ
ಮೂಲೋಕದ ಮೂಲೆ ಮೂಲೆ
ಯನ್ನು ಮುಟ್ಟಿ ಹರಿದಿದೆ.
ಮಣ್ಣಿನಲ್ಲಿ ಸುರಿದು ಅದಕೆ
ಮಲರ ಮಾಯೆ ಬೀರಿದೆ.
ಕೊಳೆಯೆಲ್ಲವ ಸುತ್ತಿ ಮುತ್ತಿ
ಚೆಲುವನಲ್ಲಿ ಬಿತ್ತಿದೆ.
ಶುಭ ಮಂಗಲ ಪಾವನತೆಯು
ಆಣುರೇಣುವಿಗಿಳಿದಿದೆ
ಪ್ರತಿ ಜೀವದಿ ನವ ಸ್ವಪ್ನದ
ಸಂಗೀತವು ತುಂಬಿದೆ.
ಅಂಗಳದಲಿ ರಂಗೋಲಿಯ
ಮಂಗಲವನು ಬರೆದಿದೆ.
ಹೊಸ್ತಿಲದಲಿ ಸ್ವಸ್ತಿಕವನು
ಬರೆದು ಶುಭವ ಕೋರಿದೆ!
ಅರೆಯಿಲ್ಲದ ತೆರೆಯಿಲ್ಲದ
ನಿಶ್ಚಲ ಚಿರ ಶಾಂತಿಯು
ಮಧು ಮಧುರವು ಅತಿ ಮೃದುಲವು
ಇದರೆ ದಿವ್ಯ ಕಾಂತಿಯು.
ಇಲ್ಲಿ ಬಾರೆ ಬೆಳುದಿಂಗಳ
ಈ ಮಂಗಲ ಜಲಧಿಗೆ
ಮೆಯನೊಡ್ಡು ಬೆಳಕಿಗಿದರ
ತೆರೆಯದನು ಶಾಂತಿಗೆ
ಹರಿದೋಡುತ ಹೊರಳಾಡುತ
ಮುಳುಗೇಳುತ ಎಲ್ಲೆಡೆ
ತೆರೆತೆರೆಗಳು ಸೆಳೆದಲ್ಲಿಗೆ
ಕರೆಕರೆಯುತ ಎಳೆದೆಡೆ.
ಈಸಾಡಲು ಮೀನವಾಗಿ
ಹಕ್ಕಿಯಾಗಿ ಹಾರಲು
ಜೊನ್ನ ಕುಡಿದು ಜ್ಯೋತಿಯಾಗಿ
ಬಾನಿನಲ್ಲಿ ಬೆರೆಯಲು.
ಬಾ ಗೆಳತಿಯೆ ಹುಣ್ಣಿಮೆಯಲಿ
ಪೂಣ್ದಾಶಿಷ ಪಡೆಯಲು
ಮನೆಯ ತೊರೆದು ಚಿಂತೆ ಜರೆದು
ಪ್ರೀತಿಗೀತ ಹಾಡಲು
ದೇವರನ್ನು ಕುಣಿಸಿದಂಥ
ಚೆಲುವು ಚಂದ್ರನಮೃತ
ದೀನರನ್ನು ತಣಿಸದಿಹುದೆ
ಬೆಳಕು ಬೆಳದ ಈ ಹಿತ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್