Home / ಲೇಖನ / ಇತರೆ / ನಮಗೆ ನಿಮ್ಮ ಪ್ರೀತಿ ಸಾಕು

ನಮಗೆ ನಿಮ್ಮ ಪ್ರೀತಿ ಸಾಕು

‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂದಿದ್ದಾರೆ ಡಿವಿಜಿ. ಆದರೆ ಇವತ್ತು ಹಳೆ ಬೇರು ಹೊಸ ಚಿಗುರಿಗೆ ಬೇಡ ಎನ್ನುವುದಕ್ಕೆ ಪೂರಕವಾಗಿ ಒಂದು ಉದಾಹರಣೆ. ಯಾರೋ ಒಬ್ಬ ಹುಡುಗ ಹೆಣ್ಣು ನೋಡಲು ಹೋಗಿದ್ದ ಸಂದರ್‍ಭದಲ್ಲಿ ಆ ಹುಡುಗಿ ಹೇಳಿದ್ದಂತೆ ‘ನಿಮಗೆ ನಿಮ್ಮ ಅಪ್ಪ, ಅಮ್ಮನ ಮೇಲೆ ಪ್ರೀತಿ ಇದ್ದರೆ ನನ್ನ ತಕರಾರಿಲ್ಲ. ಆದರೆ ಅವರ ಫೋಟೋಗೆ ಮಾಲೆ ಹಾಕಿರಬೇಕು.’ ಒಂದು ಕ್ಷಣ ತಬ್ಬಿಬ್ಬು ಮತ್ತು ಆಘಾತ ಉಂಟು ಮಾಡುವ ಮಾತು. ಹಿರಿಯರ ಮೇಲೆ ಕಿರಿಯರಿಗಿರುವ ಪ್ರೀತಿ ಅಭಿಮಾನ ಮಾಯವಾಗುತ್ತಿರುವುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ. ಇದು ನೋವು ಕೊಡುವ ಸಂಗತಿಯಾದರೂ ಇವತ್ತಿನ ವಾಸ್ತವ.

ಬಾಲ್ಯದಲ್ಲಿ ತಂದೆ-ತಾಯಿಯ ಕೈಬೆರಳು ಹಿಡಿದು ಮಕ್ಕಳು ನಡುಗೆ ಕಲಿಯುತ್ತಾರೆ. ಬೆಳೆದು ದೊಡ್ಡವರಾಗುತ್ತಾ ತಮ್ಮ ಜೀವನದ ದಾರಿಯನ್ನು ಕಂಡುಕೊಂಡು ಹೆತ್ತವರ ಬೆಚ್ಚಗಿನ ಗೂಡಿನಿಂದ ದೂರ ಹಾರಿ ಹೋಗುತ್ತಾರೆ. ಹೀಗಿರುವಾಗ ಮಕ್ಕಳು ವೃದ್ಧಾಪ್ಯದ ಊರುಗೋಲು ಆಗಬೇಕು, ಕೊನೆಯ ಕಾಲದಲ್ಲಿ ಹತ್ತಿರವಿರಬೇಕು ಎನ್ನುವ ಒತ್ತಾಯ ಹೇರಿದರೆ ಕಿರಿಯರ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ. ಈ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾದ ಕಾಲ, ಪರಿಸರ ಇಂದು ನಿರ್‍ಮಾಣವಾಗಿದೆ. ಮಕ್ಕಳು ಹತ್ತಿರದಲ್ಲಿಲ್ಲ ಎನ್ನುವ ಕಹಿ ಭಾವನೆಯಿಂದ ಹಿರಿಯರು ಮುಕ್ತರಾಗಲೇಬೇಕು.

ಮುಪ್ಪಿನ ಕಾಲಕ್ಕೆ ಬೇಕಾದ ಆರ್‍ಥಿಕ ಭದ್ರತೆಯನ್ನು ಮಾಡಿಕೊಂಡು ಸ್ವತಂತ್ರವಾಗಿ ಜೀವನ ಸಾಗಿಸುವ ಆತ್ಮವಿಶ್ವಾಸವನ್ನು ಇವತ್ತಿನ ಹಿರಿಯರು ಬೆಳೆಸಿಕೊಂಡಿರುವುದರಿಂದ ಹಿಂದಿನಂತೆ ಮುಪ್ಪಿನಲ್ಲಿ ಮಕ್ಕಳಿಗೆ ಭಾರವಾಗಿರಲು ಇಷ್ಟಪಡುವುದಿಲ್ಲ. ಇದೊಂದು ಆರೋಗ್ಯಕರ ಬೆಳವಣಿಗೆ ಮಕ್ಕಳ ಮೇಲಿನ ಪ್ರೀತಿ ಅವರನ್ನು ಸೆಳೆಯುತ್ತಿದ್ದರೂ ಮಕ್ಕಳು ಎಲ್ಲಾದರೂ ಚೆನ್ನಾಗಿರಲಿ ಎನ್ನುವುದಷ್ಟೇ ಅವರ ಆಶಯವಾಗಿರುತ್ತದೆ.

ಮುಪ್ಪಿನಲ್ಲಿ ಹಿರಿಯರಿಗೆ ಮುಖ್ಯವಾಗಿ ಬೇಕಾಗಿರುವುದು ಸಮಾಧಾನ ಹಾಗೂ ಮಾನಸಿಕ ನೆಮ್ಮದಿ. ಮಕ್ಕಳು ದೂರದಲ್ಲಿದ್ದರೂ ಮಾನಸಿಕ ಸಾಮೀಪ್ಯವನ್ನು ಬೆಳೆಸಿಕೊಂಡಿದ್ದರೆ ಅದರಲ್ಲೇ ಹೆತ್ತವರಿಗೆ ಸಮಾಧಾನ ಸಿಗುತ್ತದೆ. ಆದರೆ ಇಂದಿನ ಕ್ಲಿಷ್ಟಕರ ಜೀವನದಲ್ಲಿ ಹಿರಿಯರಿಗೆ ಅದೇ ಸಿಗುತ್ತಿಲ್ಲ. ಇದು ದುರ್‍ದೈವ.

ಹಿರಿಯರು, ಕಿರಿಯರು ಎಲ್ಲರೂ ಒಟ್ಟಾಗಿ ಒಂದೇ ಸೂರಿನಡಿಯಲ್ಲಿ ಜೀವಿಸುತ್ತಿದ್ದ ಕಾಲದಲ್ಲಿ ಹಿರಿಯರಿಗೂ, ಕಿರಿಯರಿಗೂ ಜೀವನ ಸುಲಭವಾಗಿತ್ತು. ಹಿರಿಯರು ಮುಪ್ಪಿಗೆ ಜಾರಿದಾಗ ಕಿರಿಯರು ಅವರನ್ನು ಹೆಚ್ಚಿನ ಪ್ರೀತಿಯಿಂದ, ಮುತುವರ್‍ಜಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಆಧುನಿಕ ಜಗತ್ತಿನ ಬದಲಾಗುತ್ತಿರುವ ಮೌಲ್ಯಗಳನ್ನು ಒಪ್ಪಿಕೊಂಡು ಬದುಕುತ್ತಿರುವ ಹೆಚ್ಚಿನ ಮಕ್ಕಳಿಗೆ ಹಿರಿಯರು ತಮ್ಮೊಂದಿಗಿರುವುದು ಇಷ್ಟವಿಲ್ಲ. ಮಕ್ಕಳಿಂದ ದೂರವಾಗಿ ಒಬ್ಬಂಟಿಗರಾಗಿಯೋ, ವೃದ್ಧಾಶ್ರಮದಲ್ಲೋ ಇರುವ ಬಹುಪಾಲು ಹಿರಿಯರಿಗೆ ಮುಪ್ಪು ಒಂದು ಶಾಪ ವಾಗುತ್ತಿರುವುದನ್ನು ಸುತ್ತಲೂ ನೋಡುತ್ತೇವೆ. ಇದನ್ನು ಮೀರಿ ಮುಪ್ಪಿನ ಜತೆಗೆ ಬದುಕಲು ಕಲಿತಾಗ ಮಕ್ಕಳೇ ಆಧಾರ ಎನ್ನುವ ಭಾವದಿಂದ ಮುಕ್ತರಾಗಿ ಸಮಾಧಾನದಿಂದ ಜೀವಿಸಬಹುದು.

ಜಗವಿಡೀ ಹಬ್ಬಿರುವ ಇವತ್ತಿನ ಮಕ್ಕಳಿಗೆ ಹಿರಿಯರು ಹೊರೆಯಾಗುತ್ತಿರುವ ಪರಿಸರದಲ್ಲಿ ವಿಶ್ವ ಹಿರಿಯರ ದಿನವನ್ನು ಆಚರಿಸುವ ಸಂದರ್‍ಭದಲ್ಲಿ ಹಿರಿಯರು ಇದನ್ನು ಅರಿತುಕೊಂಡು ಕಿರಿಯರಿಗೆ ಭಾರವಾಗದೆ ಜೀವಿಸಬಲ್ಲೆವು ನಮಗೆ ನಿಮ್ಮ ಪ್ರೀತಿ ಮಾತ್ರ ಸಾಕು ಎನ್ನುವ ಅರಿವುಂಟುಮಾಡುವುದು ಹೆಚ್ಚು ಸೂಕ್ತ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...