Home / ಕವನ / ಕವಿತೆ / ನಿಮಗೆ ಶೋಭಿಸದು

ನಿಮಗೆ ಶೋಭಿಸದು

ಮನುಷ್ಯರ ಮನುಷ್ಯರ ನಡುವೆ
ಜಾತಿಯ ವಿಷ ಬೀಜ
ಬಿತ್ತಿದವರು ನೀವು
ಜಾತ್ಯಾತೀತತೆಯ ಮಾತು
ನಿಮಗೆ ಶೋಭಿಸದು ಬಿಡಿ.

ಸಮಾನತೆಯ ಮಾತು ಬೇಡ
ನಿಮಗೆ ಇಷ್ಟವಾಗುವುದಿಲ್ಲ
ಹಿಟ್ಲರನ ಸಂತತಿ ಅಧಿಕಾರಿಶಾಹಿಗೆ
ಪ್ರಜಾಪರತೆಯ ಮಾತು ಬಿಡಿ
ಅದು ನಿಮಗೆ ಶೋಭಿಸದು.

ಗುಡಿಸಲ ಬಡವರವರು ನಾವು
ತಳ್ಳು ಬಂಡಿಯ ವ್ಯಾಪಾರಿಗಳು
ಗಲಭೆಗಳಾದಾಗ ನಾವು ಮೊದಲ ಬಲಿಗಳು
ಸೌಹಾರ್ದದ ಮಾತು ಬಿಡಿ
ಅದು ನಿಮಗೆ ಶೋಭಿಸದು.

ನಿಮ್ಮ “ಸಬ್ ಕಾ ವಿಕಾಸ್” ನಲ್ಲಿ
ಮನ್ ಕಿ ಬಾತ್ ಹೇಳುತ್ತಿರಿ.
ನಿಮ್ಮ ಸ್ಮಾರ್ಟ್ ಸಿಟಿಯಲ್ಲಿ
ನಮಗೆಲ್ಲಿದೆ ಜಾಗ?
ಬರೀ ಭರವಸೆಗಳು ಬಿಡಿ
ಅದು ನಿಮಗೆ ಶೋಭಿಸದು.

ಗಾಂಧೀ ಕೈಗೆ ಕಸಬರಿಕೆ ಕೊಟ್ಟಿದ್ದೀರಿ
ಭಾರತ ಸ್ವಚ್ಛ ಗೊಳಿಸಲು ಅವನ ಕನ್ನಡಕ
ನಿಮ್ಮ ಹತ್ತು ಲಕ್ಷದ ಹೊನ್ನಿನ ಸೂಟಿದೆಯಲ್ಲ
ನನ್ನ ಹರಕು ಸೀರೆಯ ಮಾತು ಬಿಡಿ
ಅದು ನಿಮಗೆ ಶೋಭಿಸದು .

ದೇಶ ಬಲಿ ಕೇಳಿದಾಗಲೆಲ್ಲ
ನನ್ನ ಕತ್ತನ್ನೇ ಮೊದಲು ಕೊಟ್ಟೆ
ಓಟಿನ ಬೇಟದಲಿ ನೀವು
ಸೌಹಾರ್ದದ ಬದುಕಿಗೆ ಬೆಂಕಿಯಿಟ್ಟವರು
ದೇಶಭಕ್ತಿಯ ಮಾತು ಬಿಡಿ
ಅದು ನಿಮಗೆ ಶೋಭಿಸದು.
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...