ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಿ ತೋರಿಸಲು ಏನೆಲ್ಲ ವಿಪುಲ ಅವಕಾಶಗಳಿವೆ. ಅಲ್ಲಿ ಗುರ್ತಿಸುವಂಥಾ ಹೃದಯ ಶ್ರೀಮಂತಿಕೆಯವರಿದ್ದಾರೆ. ಜ್ಞಾನ ಬೆಳೆದಂತೆಲ್ಲ ವಿಜ್ಞಾನ ಬೆಳೆಯುತ್ತಿದೆ.
ಈ ನಿಟ್ಟಿನಲ್ಲಿ ಭವ್ಯ ಭಾರತದ ಹಿರಿಯ ವಿಜ್ಞಾನಿ ಹಾಗೂ ಡಿಆರ್ಡಿಒದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮಾಜಿ ಮುಖ್ಯ ನಿಯಂತ್ರಕ ಡಾ| ಎ. ಶಿವಥಾನು ಪಿಳ್ಳೆ ಅವರಿಗೆ ಗೀತಂ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿದೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮೂಲದ ಗೀತಂ ವಿಶ್ವವಿದ್ಯಾಲಯದ ೩೫ ನೆಯ ಸಂಸ್ಥಾಪನಾ ದಿನಾಚರಣೆಯು ಆಗಸ್ಟ್ ೦೮, ೨೦೧೫ರಂದು ಶನಿವಾರದ ದಿನದಂದು ಜರುಗಿದ್ದು ಅವರಿಗೆ ಕರೆಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿರುವರು.
“ಇದು ವಿಜ್ಞಾನಕ್ಕೆ ಸಂದ ಗೌರವವೆಂದು” ಅವರು ಹೆಮ್ಮೆಯಿಂದ ನುಡಿದಿರುವರು! ಜ್ಞಾನಿಗಳು ವಿಜ್ಞಾನಿಗಳು ಅಂದರೆ ಯಾವಾಗಲೂ ಹೀಗಿರುವರು!
ಬ್ರಹ್ಮಸ್ ಏರೋಸ್ಪೇಸ್ ಸಂಸ್ಥೆಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಡಾ|| ಎ. ಶಿವಥಾನು ಪಿಳ್ಳೈ ಅವರ ನಾಯಕತ್ವ ಅನನ್ಯವಾಗಿತ್ತು ಎಂದು ವಿವಿಯ ಕುಲಪತಿ ಪ್ರೊ | ಜಿ. ಸುಬ್ರಮಣ್ಯಂ. ಹೇಳಿರುವರು…
ಬ್ರಹ್ಮೋಸ್ ಕ್ಷಿಪಣಿಗಳು ಭವ್ಯ ಭಾರತೀಯ ಸೇವಾ ಪಡೆಗೆ ಸೇರ್ಪಡೆಯಾಗಿವೆ. ಡಾ|| ಎ. ಶಿವಥಾನುಪಿಳ್ಳೈ ಅವರು ಈಗ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಗೆ ಸಂದರ್ಶಕ ಪ್ರೊಫೆಸರ್ ಆಗಿ ಉತ್ತಮ ಸೇವೆ ಸಲ್ಲಿಸುತ್ತಿರುವರು. ಇಷ್ಟೇ ಅಲ್ಲದೆ ಶ್ರೀಯುತರು ಹರಿಯಾಣದ ಕುರುಕ್ಷೇತ್ರದ ಎನ್ಐಟಿಯ ಹಾಲಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವರು.
ಮುದ್ದು ಮಕ್ಕಳೆ… ಡಾ|| ಎ. ಶಿವಥಾನು ಪಿಳ್ಳೈ ಅವರು ನಿಮಗೆಲ್ಲ ಸ್ಫೂರ್ತಿಯ ಸೆಲೆಯಾಗಲಿ ಎಂದು ಇವರ ಬಗ್ಗೆ ಇಷ್ಟನ್ನು ದಾಖಲಿಸಿದ್ದೇನೆ. ಏನೆಲ್ಲ ಸಮಸ್ಯೆ ಬಡತನ ಕಷ್ಟ ಕಾರ್ಪಣ್ಯಗಳ ದಾಟಿಕೊಂಡು ಈವತ್ತು ಇವರ ಸಾಧನೆ ಎಲ್ಲರಿಗೆ ಮಾರ್ಗದರ್ಶನವಾಗಿದೆ.
ಈವತ್ತು ನೀವೆಲ್ಲ ಮನಸ್ಸು ಮಾಡಿ, ನಾವೂ ಏನಾದರೊಂದು ಸಾಧಿಸಿ ತೋರಿಸುತ್ತೇವೆಂದು ಶಪಥ ಮಾಡುತ್ತೀರಲ್ಲವೇ?
*****















