Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ಸೆಪ್ಟೆಂಬರ ೨೭, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ರವಿವಾರ, ಸೆಪ್ಟೆಂಬರ ೨೭, ೧೯೪೨

ಪ್ರೀತಿಯ ಕಿಟಿ,

ಬಹಳ ಕಾಲದ ಮೇಲೆ ಈಗ ತಾನೆ ನಾನು ಮಮ್ಮಿಯಿಂದ ಒದೆ ತಿಂದೆ. ಇತ್ತೀಚೆಗೆ ನಾವು ಒಬ್ಬರಿಗೊಬ್ಬರು ಹೆಚ್ಚಾಗಿ ಬೆರೆಯುವುದಿಲ್ಲ. ಮಾರ್‍ಗೊಟ್ ಮತ್ತು ನನ್ನ ಸಂಬಂಧವೂ ಸರಿಯಾಗಿಲ್ಲ. ನಮ್ಮ ಮನೆಯ ನಿಯಮದಂತೆ ನಾವು ಈ ರೀತಿಯಲ್ಲಿ ಸಿಟ್ಟು ಸೆಡವುಗಳ ಮಾಡುವಂತಿಲ್ಲ. ಹಾಗಿದ್ದರೂ ನನಗೆ ಕಾರಣವಿಲ್ಲದೇ ಸಿಟ್ಟು ಮಾಡುವುದು ಖುಷಿ ಕೊಡುತ್ತದೆ. ನನ್ನ ಸ್ವಭಾವ ಮಾರ್‍ಗೊಟ್ ಮತ್ತು ಮಮ್ಮಿಗಿಂತ ಸಂಪೂರ್ಣ ಭಿನ್ನ. ನಾನು ನನ್ನ ಗೆಳತಿಯರನ್ನು ಅರ್ಥಮಾಡಿಕೊಂಡಷ್ಟು ನನ್ನ ತಾಯಿಯನ್ನು ಅರ್ಥಮಾಡಿಕೊಳ್ಳಲಾರೆ.- ಇದು ಕಷ್ಟ.

ನಾವು ಆಗಾಗ ಯುದ್ಧದ ನಂತರದ ಸಮಸ್ಯೆಗಳನ್ನು ಚರ್ಚಿಸುತ್ತೇವೆ.ಇನ್ನು ಮುಂದೆ ಕೆಲಸಗಾರರ ಜೊತೆ ಹೇಗೆ ವ್ಯವವಹರಿಸಬೇಕಾದೀತು,ಮಾತಾಡಬೇಕಾದೀತು ಎಂಬಿತ್ಯಾದಿ.

ಶ್ರೀಮತಿ ವ್ಯಾನ್ಡ್ಯಾನ್‌ರದು ಮಕ್ಕಳಾಟದ ಸ್ವಭಾವ. ಅವರದು ವಿಚಿತ್ರ ವ್ಯಾಕುಲತೆ. ತಮ್ಮ ಖಾಸಗಿ ವಸ್ತುಗಳನ್ನು ಅಡಗಿಸಿಡುತ್ತಾರೆ. ಆದರೆ ಅವರ ಪ್ರತಿಯೊಂದು ವಸ್ತುಗಳು ಕಾಣೆಯಾದಾಗಲೂ ಮಮ್ಮಿ ಅದಕ್ಕೆ ಉತ್ತರಿಸಬೇಕು. ಅವುಗಳ ಕಣ್ಮರೆಗೆ ಸಕಾರಣ ಉತ್ತರ ನೀಡಬೇಕು. ಕೆಲವು ಜನ ತಮ್ಮ ಮಕ್ಕಳೊಂದಿಗೆ ಇತರರ ಮಕ್ಕಳನ್ನು ಸಾಕುವುದನ್ನು, ಅವರಿಗೆ ಬುದ್ದಿ ಹೇಳುವುದನ್ನು ಎಷ್ಟೊಂದು ಇಷ್ಟಪಡುವರು. ಶ್ರೀಮತಿ ವ್ಯಾನ್ಡ್ಯಾನ್ ಇಂತಹ ಜನ. ಮಾರ್‍ಗೊಟ್ ಇದನ್ನು ಬಯಸುವುದಿಲ್ಲ. ಆಕೆ ಸಜ್ಜನರಲ್ಲಿ ಸಜ್ಜನಳು. ಎಲ್ಲ ರೀತಿಯಿಂದಲೂ ಪರಿಪೂರ್ಣ, ಆದರೆ ನಮ್ಮಿಬ್ಬರನ್ನೂ ಜೊತೆಗಿಟ್ಟು ನೋಡಿದರೆ ನನ್ನಲ್ಲಿ ತುಂಬಾ ಕಿಡಿಗೇಡಿತನವಿರುವಂತೆ ಕಾಣುತ್ತದೆ. ನಮ್ಮ ಊಟದ ಸಮಯದಲ್ಲಿ ಅತ್ತಲ್ಲಿಂದ ಇತ್ತಲಿಗೆ ಇತ್ತಲಿಂದತ್ತಲಿಗೆ ಉದ್ದಟತನದ ಉತ್ತರಗಳು, ಪರಸ್ಪರ ಛೀಮಾರಿಗಳು ಹಾರಾಡುವುದನ್ನು ನೀನು ಕೇಳಬೇಕು. ಮಮ್ಮಿ ಡ್ಯಾಡಿ ಯಾವಾಗಲೂ ನನ್ನನ್ನೆ ಬಲವಾಗಿ ಸಮರ್ಥಿಸುತ್ತಾರೆ. ಅವರ ಬೆಂಬಲ ಇಲ್ಲದಿದ್ದರೆ ನಾನು ಜಗಳವನ್ನು ಕಾದುವುದು ಸಾಧ್ಯವಿಲ್ಲ. ಆದಾಗ್ಯೂ ಅವರು ನಾನು ಹೆಚ್ಚು ಮಾತನಾಡಬಾರದೆಂದು, ಸ್ವಲ್ಪ ನಯನಾಜೂಕಿನಿಂದ ಇರುವಂತೆ, ಎಲ್ಲ ವಿಷಯದಲ್ಲೂ ನನ್ನ ಮೂಗು ತೂರಿಸಬಾರದೆಂದು ಹೇಳುತ್ತಾರೆ. ಆದರೆ ಅದು ನನ್ನಿಂದಾಗುವುದಿಲ್ಲ. ಒಂದೊಮ್ಮೆ ಡ್ಯಾಡಿಗೆ ಅಷ್ಟು ತಾಳ್ಮೆ ಇಲ್ಲದಿದ್ದರೆ, ನನ್ನ ಹೆತ್ತವರಿಗೆ ಅದೆಂಥಹಾ ನೋವನ್ನು ನಾನು ತಂದೊಡ್ಡುತ್ತಿದ್ದೆ ಎಂಬುದನ್ನು ನೆನೆದರೆ ನನಗೆ ಭಯವಾಗುತ್ತದೆ. ಅವರು ನನ್ನನ್ನು ಅದೆಷ್ಟು ಪ್ರೀತಿಯಿಂದ ಸಹಿಸಿಕೊಳ್ಳುತ್ತಾರೆ.

ನನಗೆ ಇಷ್ಟವಿಲ್ಲದ ಕೆಲವು ತರಕಾರಿಗಳನ್ನು ಬಟಾಟೆಯೊಂದಿಗೆ ಮಿಶ್ರಣ ಮಾಡುವ ಸಮಯದಲ್ಲಿ ನಾನೇಕೆ ಹಾಗೇ ಮಾಡಿದೆನೆಂದು ಶ್ರೀಮತಿ ವ್ಯಾನ್ಡ್ಯಾನ್ ಮತ್ತು ಮವರೋವ್‌ರಿಗೆ[ ಮಮ್ಮಿ] ಅರ್ಥವಾಗುವುದಿಲ್ಲ. ಮಕ್ಕಳು ಹೀಗೆಲ್ಲ ಮಾಡಬಾರದು ಅನ್ನುತ್ತಾರವರು.

“ಆನ್, ಇಗೋ, ಇನ್ನೊಂದಿಷ್ಟು ತರಕಾರಿ ತಗೋ” ಅವರು ನೇರವಾಗಿಯೇ ಹೇಳಿಬಿಡುತ್ತಾರೆ.

“ಬೇಡ. ಥ್ಯಾಂಕ್ಸ , ಶ್ರೀಮತಿ ವ್ಯಾನ್ಡ್ಯಾನ್ ನನ್ನಲ್ಲಿರುವುದೇ ನನಗೆ ಸಾಕು” ಎಂದು ಹೇಳಿದರೂ,

“ತರಕಾರಿಗಳು ಆರೋಗ್ಯಕ್ಕೆ ಒಳಿತು. ನಿನ್ನ ಮಮ್ಮಿ ಕೂಡಾ ಅದನ್ನೇ ಹೇಳುವುದು. ಸ್ವಲ್ಪ ತೆಗೆದಿಕೋ” ಎನ್ನುತ್ತಾ ಡ್ಯಾಡಿ ಅವರಿಂದ ನನ್ನ ಬಚಾವ್ ಮಾಡುವವರೆಗೂ ಒತ್ತಾಯ ಮಾಡುತ್ತಾರೆ.

ಆನಂತರ ನಾವು ವ್ಯಾನ್ಡ್ಯಾನ್‌ರಿಂದ ಪುರಾಣ ಕೇಳಬೇಕಾಗುತ್ತದೆ. ನೀನು ನಮ್ಮ ಮನೆಯಲ್ಲಿರಬೇಕಾಗಿತ್ತು. ನಾವೆಲ್ಲ ಎಷ್ಟು ಸರಿಯಾಗಿ ಬೆಳೆದಿದ್ದವು. ಇದನ್ನು ನೋಡಿದರೆ ಆನ್ ಎಷ್ಟೆಲ್ಲಾ ಹದತಪ್ಪಿ ಬೆಳೆದಿದ್ದಾಳೆ. ಆಕೆ ನನ್ನ ಮಗಳಾಗಿದ್ದರೆ ನಾನು ಇದನ್ನು ಖಂಡಿತಾ ಸಹಿಸುತ್ತಿರಲಿಲ್ಲ.

ಆನ್ ನನ್ನ ಮಗಳಾಗಿದ್ದರೆ ಇದು ಯಾವಾಗಲೂ ಅವರು ಮೊದಲ ಮತ್ತು ಕೊನೆಯ ಮಾತು.

ಪುಣ್ಯಕ್ಕೆ ನಾನವರ ಮಗಳಾಗಲಿಲ್ಲ.

ಮಕ್ಕಳನ್ನು ಬೆಳೆಸುವ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಶ್ರೀಮತಿ ವ್ಯಾನ್ಡ್ಯಾನ್ ಮಾತಾಡಿದ ಮೇಲೆ ಅಲ್ಲೊಂದು ಸ್ಮಶಾನ ಮೌನವಿತ್ತು. ಆನಂತರ ಡ್ಯಾಡಿ, ನನ್ನಗನ್ನಿಸುತ್ತೆ, ಆನ್ ಬಹಳ ಸಂಸ್ಕಾರಯುತವಾಗಿಯೇ ಬೆಳೆದಿದ್ದಾಳೆ. ಅಷ್ಟಕ್ಕೂ ನಿಮ್ಮ ತರಕಾರಿಯ ಕುರಿತ ಉದ್ದುದ್ದ ಪ್ರವಚನಗಳಿಗೆ ಎದುರು ಮಾತಾಡದೇ ಸುಮ್ಮನೇ ಸಹಿಸಿಕೊಳ್ಳುವುದನ್ನು ಕಲಿತಿದ್ದಾಳೆ. ಆದರೆ ನೀವೊಮ್ಮೆ ನಿಮ್ಮ ತಟ್ಟೆಯನ್ನು ನೋಡಿಕೊಳ್ಳಿ‌ಎಂದು ನುಡಿದರು. ಈ ಮಾತುಗಳು ಅವರ ಮುಖಭಂಗ ಮಾಡಿದವು. ಒಂದು ನಿಮಿಷ ಸುಮ್ಮನೇ ಇದ್ದ ಅವರು ಅವುಗಳನ್ನು ತೆಗೆದುಕೊಳ್ಳತೊಡಗಿದರು. ಅವರು ಕೆಟ್ಟವರಲ್ಲ. ಆದರೆ ಸಂಜೆ ಹೊತ್ತಿಗೆ ಇಷ್ಟೊಂದು ತರಕಾರಿಗಳು ಅವರ ಹೊಟ್ಟೆನೋವಿಗೆ ಕಾರಣವಾಗುವುದು. ಅವರು ನನ್ನ ಬಗ್ಗೆ ಸುಮ್ಮನೇ ಬಾಯಿ ಮುಚ್ಚಿಕೊಂಡಿರುವುದಿಲ್ಲ, ಹಾಗಿದ್ದಲ್ಲಿ ಹೀಗೆ ಸುಮ್ಮನೇ ಸಣ್ಣ ಸಂಗತಿಗಳಿಗೆಲ್ಲ ಕ್ಷಮೆ ಕೇಳಬೇಕಾಗಿರಲಿಲ್ಲ. ಇನ್ನು ಶ್ರೀಮತಿ ವ್ಯಾನ್ಡ್ಯಾನ್ ತನ್ನನ್ನು ಹೊಗಳಿಕೊಳ್ಳುವುದು ಅದ್ಭುತವಾಗಿರುತ್ತದೆ. ಅದು ನನಗೆ ಬರದು. ನಾನು ತೆಪ್ಪಗಿರುತ್ತೇನೆ ಮತ್ತು ನನ್ನ ಆ ಸ್ವಭಾವವನ್ನು ಅವರು ಧ್ವೇಷಿಸುತ್ತಾರೆ.

ನಿನ್ನ,
ಆನ್

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...