Home / ಕವನ / ಕವಿತೆ / ಇಲ್ಲಿಯ ನ್ಯಾಯ

ಇಲ್ಲಿಯ ನ್ಯಾಯ

ಸುಡು ಈ ಗಾಳಿವೇಗವನ್ನು, ಭೋಗವನ್ನು, ಚೆಲುವನ್ನು!
ಪಯಣವಿಲ್ಲದೆ ನರನು ಬಾಳಿದರೆ-ತಪ್ಪೇನಿತ್ತು?
ನಿರ್ಮಿಸಿಹನೀಗ ನರಕವನ್ನು ನರಪ್ರಾಣಿಗಳಿಗೆ,
ಒಬ್ಬನ ಸುಖಕಾಗಿ ಇನ್ನೊಬ್ಬರಿಗೆ ದುಃಖ:
ಒರ್ವನ ಸ್ವರ್ಗಕ್ಕಾಗಿ ಇನ್ನೊರ್ವನಿಗೆ ರವರವ ನರಕ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?

ಬಿಳಿಯನಿಗಿದೆ ಮಂಜುಗಡ್ಡೆಯ ತಿನುವಾಸೆ;
ಅದಕೆ ನಂಜಿನಂಥ ಶೆಡ್ಡಿನಲ್ಲಿ ನಿಲ್ಲುವನು ಕರಿಯ.
ಬಿಳಿಯನಿಗೆ ಬೇಕು ಕೈಜೋಡಿಸಿದ ಸೇವೆ,-
ಆದಕೆ ಕರಿಯನಾದ ನಿತ್ಯಸೇವಕ!
ಇವ ಬಿಳಿಯ ಅವ ಕರಿಯ, ಇವ ಹಾರುವ ಅವ ಹೊಲೆಯ,
ಇವ ಸೇವ್ಯ ಅವ ಸೇವಕ, ಇವ ಗಾಣಿಗ ಅವ ಗಾಣ,-
ಅವ ತ್ರಾಣ-ಅವ ನಿತ್ರಾಣ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?

ಮಾನವಜಾತಿಯನ್ನು ಮಣ್ಣುಮುಕ್ಕಿಸುವ ರೀತಿಯ ನೋಡಿರೆ!
ಪಶುವಿಗಿಂತ ಕಡೆ,-ಪಕ್ಷಿಗಿಂತ ಕೀಳು ಮಾನವನಿಲ್ಲಿ!
ತಲೆಗೆ ಎಣ್ಣೆಯಿಲ್ಲ, ಮೈಗೆ ಬಟ್ಟೆಯಿಲ್ಲ-
ಮೈಯಲ್ಲಿಯ ಎಣ್ಣೆ ಮುಗಿಯುವ ತನಕ-
ಕಣ್ಣೆದುರಿನ ಬಟ್ಟೆ ಕಾಣುವ ತನಕ-
ದುಡಿಯಬೇಕು ಮಡಿಯಬೇಕಿಲ್ಲಿ ಮಾನವನು!
ಅಡಿಯಾಳಾಗಿ ನಡೆಯಬೇಕು!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?

ದಾಸ್ಯದಲ್ಲಿ ಸಿಲುಕಿ ಗಾಸಿಗೊಂಡ ತಾಯ್ನಾಡೆ!
ಭಾರತದೇವಿ!
ಈ ಬವಣಿ ಮಾತ್ರ ಬರದಿರಲಿ ನಿನಗೆ.
ಪಾರತಂತ್ರ್ಯದಲ್ಲಿ ಬಿದ್ದು ಪಾರಗಾಣದಿರಬಹುದು,-
ಬಡತನ, -ಒಡಕುತನ,-ಎಲ್ಲ ಬರಬಹುದು.
ಆದರೆ ಈ ಮದೋನ್ಮತ್ತತೆಯ ಅಂಧತೆ ಬೇಡ!
ಒಡೆತನದ ನರಕ ಬೇಡ!
ಬಂಡಿವಾಳದ ಬಂಡು ಬೇಡ!
ಅದು ಪರಮ ದಾಸ್ಯ! ದುಃಸ್ಸಹ ನರಕ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...