Home / ಕವನ / ಕವಿತೆ / ಕನಸು

ಕನಸು

ನಾನೂ ಕನಸು ಕಾಣುತ್ತೇನೆ
ನನಸು ಮಾಡಿಕೊಳ್ಳುವ ಆಸೆಯಿಂದ
ಆದರೆ, ನನ್ನದು ಹಗಲುಗನಸಲ್ಲ
ರಾತ್ರಿಯ ಸುಂದರ, ಸುಮಧುರ ಸ್ವಪ್ನ

ದಿನಾ ಒಂದೊಂದು ಕನಸು
ಆಶಾಗೋಪುರವ ಹತ್ತಿ,
ವಾಸ್ತವ ಲೋಕದಿಂದ ಮೇಲೇರಿ
ವಿಹರಿಸಿದ ಅನುಭವ

ಮುಚ್ಚಿದ ಕಣ್ಣುಗಳೊಳಗೆ ಕಾಣುವ
ನಿಜ ಜೀವನದ ಪ್ರತಿಬಿಂಬ
ಕಣ್ಣು ತೆರೆದಾಗ ಕಳೆದುಹೋಗುವ
ವಿಚಿತ್ರವಾದ; ವಿಶೇಷವಾದ ಲೋಕ

ಕೆಲವು ರಾತ್ರಿಗಳಲ್ಲಿ ಕನಸೇ ಇಲ್ಲ
ಆ ರಾತ್ರಿ ನಿರಾಶವಾಗುತ್ತದೆ ಮನಸ್ಸು
ಕಳೆದುಕೊಂಡ ಆನಂದಕ್ಕಾಗಿ;
ಶೂನ್ಯ ನಿದಿರೆಗಾಗಿ

ನಾನು ಕನಸಿನಲ್ಲಿ ರಾಜನಾಗುತ್ತೇನೆ
ಇನ್ನೊಮ್ಮೆ ಭಿಕ್ಷಕುನಾಗುತ್ತೇನೆ
ಕೆಲವೊಮ್ಮೆ ಸುಂದರ ತರುಣಿಯ
ಮನಸೆಳೆದ, ಬರಸೆಳೆದ ಪ್ರಿಯಕರನಾಗುತ್ತೇನೆ

ಮಿತಿಯಿಲ್ಲ ಈ ಹುಚ್ಚು ಕನಸುಗಳಿಗೆ;
ಕನಸು ಕಾಣುವ ಕಣ್ಣುಗಳಿಗೆ
ಮನದ ಪರಿಧಿಯನ್ನು ದಾಟಿ
ಸೀಮೋಲ್ಲಂಘನ ಮಾಡುತ್ತವೆ ಅದೆಷ್ಟೋ ಬಾರಿ

ಆದರೂ ಕನಸುಗಳು ಬೇಕು
ಒಂದು ಮಧುರ ಅನುಭವಕ್ಕಾಗಿ;
ನಿಜಜೀವನದಲ್ಲಿ ದೊರಕದ
ಅಭಿಲಾಷೆಗಳ ಅನಾವರಣಕ್ಕಾಗಿ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...