ಗೀತೆಯ ಹುಟ್ಟು

ಧರ್ಮಕ್ಷೇತ್ರದ ಭೂಮಿ
ಅಸಮ ಬಲ ಇಕ್ಕಡೆಯೊ-
ಳದಮಧ್ಯೆ ಗಂಭೀರ-ಶ್ರೀಕೃಷ್ಣನು.
ಕುರುಕ್ಷೇತ್ರ ಕುರುಸೇನೆ
ಕೌರವನ ರಣಘೋಷ-
ಸೇನಾನಿ ಫಲ್ಗುಣನು ಬಾಣಸಹಿತ.

ಕುರುಸೇನಾ ಕಡಲಲ್ಲಿ
ತೇಲುತಿಹ ಅರ್ಜುನನ
ರಥವೊಂದು-ಸಾರಥಿಯು ಶ್ರೀಕೃಷ್ಣನು;
ರೋಷ ಸಹನೆಯ ಮಧ್ಯೆ
ಬೇಕೊ ಬೇಡೆಂಬುದರ
ದ್ವಂದ್ವದಲಿ-ಜೀಕಲಾಡುತಯಿರ್ದುದು!

ಭಾರತದ ವಿಧಿನಿಯಮ-
ವನ್ನು ನಡೆಸುವ ಭರದಿ
ಸೇರಿರುವ ಪ್ರಶಾಂತ ಸೂರ್ಯೋದಯ
ಸೂರ್ಯಕಾಂತಿಯ ನಲ್ಮೆ
ಪಾರ್ಥಚಿತ್ರದ ಒಲ್ಮೆ
ಒಂದಾಗಿ ಸೇರಿದುವು ಕುರುಕ್ಷೇತ್ರದಿ.

ನೋಡಿದನು ಬಂಧುಗಳ,
ಗುರುಗಳನು ಹಿರಿಯರನು-
ಬೆಂದಮನ ಸಂತೈಸೆ ಚಕ್ರಧಾರಿ!
ಉಸುರಿದನು ಗೀತೆಯನು-
ವಿಶ್ವಯೋಗದ ಗುಟ್ಟು
ಬಿಚ್ಚಿದನು-ಅರ್ಜುನಗೆ ಅತಿಕಾಮಿಗೆ.

ಕೌರವನ ಹಠಯೋಗ
ಭಾರತದ ಬಲತ್ಯಾಗ-
ಕುರುಕ್ಷೇತ್ರ ಋಣಮುಕ್ತ ಧರ್ಮಕ್ಷೇತ್ರ!
ಗಂಭೀರ ಶಾಂತಿಯದು,
ಮೂಕವಾಗಿಹ ಸೇನೆ,
ರಥಗಾಲಿ ಸ್ತಬ್ಧತೆಯಿಂ ಗೀತಮಂತ್ರ!

ಕರ್ಮಯೋಗಿಯು ಕೃಷ್ಣ
ರಾಜಯೋಗಿಯು ಪಾರ್ಥ
‘ಕಿಂ ಕರ್ಮಾಕರ್ಮ’ಗಳ ವಾದಗಳಲಿ,
ಸತ್ವ ರಾಜಸ ತಮದ
ಹುಟ್ಟು ಸಾವಿನ ಬಲದ
ವಿಶ್ವರೂಪದ ಗೂಢ ರಹಸ್ಯಗಳನು.

ಚೊಕ್ಕ ಭಾಷೆಯ ಶ್ಲೋಕ,
ಪ್ರಶ್ನೆಗುತ್ತರ ಮಾತು-
ಏಸು ಸೊಗವೊ ಅವರ ಗುರುಶಿಷ್ಯತೆ!
ತುಂಬು ಕೂರ್ಮೆಯ ಮಾತು!
ಉಪನಿಷತ್ಕಲಶದ ಮಧುವು!
ವಿಶ್ವವ್ಯಾಪಿತ ವಾಣಿ-ಅಮರಗೀತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನಾಗಿದೆ ನನಗೆ?
Next post ಪೋಲೀ ಕಿಟ್ಟೀ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…