Home / ಕವನ / ಕವಿತೆ / ಹೀಗಿರಲು

ಹೀಗಿರಲು

ಈ ಕವಿತೆಗಳಲ್ಲಿ ಯಾಕೆ ಇಷ್ಟೊಂದು ಏಕಾಂತ

ಪ್ರಾಕೃತದ ಸ್ಮೃತಿಯಂತೆ
ಹೋದಲ್ಲಿ ಬರುವ ತಾಳೆ ಮರವೇ
ದಾರಿಯುದ್ದಕ್ಕೂ
ಜತೆಗಾರ

ಯಾಕಿಲ್ಲ ಅರ್ಥ ಯಾಕಿಲ್ಲ ಉದ್ದೇಶ
ಯಾಕಿಲ್ಲ ಪ್ರಮಾಣ ಹಾಗೂ ವ್ಯಾಕರಣ
ನಿನ್ನ ತಾಡಪತ್ರಗಳ ನಿಗೂಢ ಸಂಜ್ಞೆಗಳಲ್ಲಿ
ಕೇವಲ ಗೆರೆಗಳು ಮಾತ್ರ ಕಾಣಿಸುತ್ತಿವೆ ಯಾಕೆ
ಬಳಕೆಯಲ್ಲಿರದ ದಾರಿಗಳ ಹಾಗೆ
ಹುಲ್ಲು ಕಡ್ಡಿ ನಾಚಿಕೆ ಮುಳ್ಳು ಹಬ್ಬಿ

ಹಾಗೂ ಅವನು ಹೋಗದ ಜಾಗಗಳೇ ಇಲ್ಲ
ಉಗಿಬಂಡಿಯಲ್ಲೂ ಅವನ ಜತೆ ಬಸ್ಸಿನಲ್ಲೂ
ಹೊಸ ಪೇಟೆಯಲ್ಲಿ ಅವನು ಸುತ್ತಾಡಿದಾಗಲೂ
ಜನ ನಿಬಿಡತೆಯಲ್ಲಿ ಮತ್ತು ಜನ ಶೂನ್ಯತೆಯಲ್ಲಿ
ಪಂಪನ ಓದಿದಾಗಲೂ ಶೇಕ್ಸ್‌ಪಿಯರನ ಅನುವಾದಿಸಿದಾಗಲೂ
ನಾಡಿನಲ್ಲೂ ಪರದೇಶದಲ್ಲೂ
ಎಲ್ಲೆಡೆಯಲ್ಲೂ ಮಗುವಿನಂತೆ ಛಲಹಿಡಿದು

ಅದರ ಗಲಗಲ ಸದ್ದು ಇತರೆಲ್ಲ
ಸದ್ದುಗಳಿಗಿಂತ ಅವನಿಗಿಷ್ಟ ಅರ್ಥವಿಲ್ಲದೆ ಅದು ಮಾತಾಡುವ ಕ್ರಮಕ್ಕೆ
ಮನಸೋತ
ಮನುಷ್ಯ ಕಾಣದ್ದನ್ನು ಅದು ಕಾಣುವುದು ಬೆಟ್ಟದಾಚೆಗಿರುವುದನ್ನೂ ನೋಡುವುದು

ಅಷ್ಟೊಂದು ಎತ್ತರ ಅದರ ಶಿರ
ಹವಾಮಾನದ ಸಕಲ ಶಕುನಗಳನ್ನೂ ಮೊದಲು ಹಿಡಿಯುವುದು ಅದು
ಆದರೂ ಎಷ್ಟೊಂದು ಒಂಟಿ

ಕೆಲವು ಸಲ ಅದರಂತೆ ಆಗುವ ವಾಂಛೆ
ನೀಳ ಕಾಯ ಮತ್ತು ಸೂರ್ಯ ಪ್ರಭೆ
ಜಗದ ಹಂಗಿಲ್ಲದೆ ಒಬ್ಬನಾಗುವ ಇಚ್ಛೆ
ಕಾಲದ ಗಣನೆ ಮೈಮನದ ಸುಳಿಯಲ್ಲಿ
ಅಮೃತತ್ವ ಆದರ ಹಣ್ಣಿನಲ್ಲಿ

ಸುದೀರ್ಘ ನೆರಳು ಬಯಲಲ್ಲಿ ಬೆಳೆಯಲ್ಲಿ
ಬಿದ್ದು ತೇಲುವುದು ಅದರಲ್ಲಿ
ಹುಲ್ಲು ಮಲಗುವುದು
ಹಕ್ಕಿಗಳು ಹಾಯುವುವು
ಇಂದು ನಾಳೆಗಳ ಹಿಂದು ಮುಂದಾಗಿ

ಹೀಗಿರಲು
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್