Home / ಕವನ / ಕವಿತೆ / ಹೀಗಿರಲು

ಹೀಗಿರಲು

ಈ ಕವಿತೆಗಳಲ್ಲಿ ಯಾಕೆ ಇಷ್ಟೊಂದು ಏಕಾಂತ

ಪ್ರಾಕೃತದ ಸ್ಮೃತಿಯಂತೆ
ಹೋದಲ್ಲಿ ಬರುವ ತಾಳೆ ಮರವೇ
ದಾರಿಯುದ್ದಕ್ಕೂ
ಜತೆಗಾರ

ಯಾಕಿಲ್ಲ ಅರ್ಥ ಯಾಕಿಲ್ಲ ಉದ್ದೇಶ
ಯಾಕಿಲ್ಲ ಪ್ರಮಾಣ ಹಾಗೂ ವ್ಯಾಕರಣ
ನಿನ್ನ ತಾಡಪತ್ರಗಳ ನಿಗೂಢ ಸಂಜ್ಞೆಗಳಲ್ಲಿ
ಕೇವಲ ಗೆರೆಗಳು ಮಾತ್ರ ಕಾಣಿಸುತ್ತಿವೆ ಯಾಕೆ
ಬಳಕೆಯಲ್ಲಿರದ ದಾರಿಗಳ ಹಾಗೆ
ಹುಲ್ಲು ಕಡ್ಡಿ ನಾಚಿಕೆ ಮುಳ್ಳು ಹಬ್ಬಿ

ಹಾಗೂ ಅವನು ಹೋಗದ ಜಾಗಗಳೇ ಇಲ್ಲ
ಉಗಿಬಂಡಿಯಲ್ಲೂ ಅವನ ಜತೆ ಬಸ್ಸಿನಲ್ಲೂ
ಹೊಸ ಪೇಟೆಯಲ್ಲಿ ಅವನು ಸುತ್ತಾಡಿದಾಗಲೂ
ಜನ ನಿಬಿಡತೆಯಲ್ಲಿ ಮತ್ತು ಜನ ಶೂನ್ಯತೆಯಲ್ಲಿ
ಪಂಪನ ಓದಿದಾಗಲೂ ಶೇಕ್ಸ್‌ಪಿಯರನ ಅನುವಾದಿಸಿದಾಗಲೂ
ನಾಡಿನಲ್ಲೂ ಪರದೇಶದಲ್ಲೂ
ಎಲ್ಲೆಡೆಯಲ್ಲೂ ಮಗುವಿನಂತೆ ಛಲಹಿಡಿದು

ಅದರ ಗಲಗಲ ಸದ್ದು ಇತರೆಲ್ಲ
ಸದ್ದುಗಳಿಗಿಂತ ಅವನಿಗಿಷ್ಟ ಅರ್ಥವಿಲ್ಲದೆ ಅದು ಮಾತಾಡುವ ಕ್ರಮಕ್ಕೆ
ಮನಸೋತ
ಮನುಷ್ಯ ಕಾಣದ್ದನ್ನು ಅದು ಕಾಣುವುದು ಬೆಟ್ಟದಾಚೆಗಿರುವುದನ್ನೂ ನೋಡುವುದು

ಅಷ್ಟೊಂದು ಎತ್ತರ ಅದರ ಶಿರ
ಹವಾಮಾನದ ಸಕಲ ಶಕುನಗಳನ್ನೂ ಮೊದಲು ಹಿಡಿಯುವುದು ಅದು
ಆದರೂ ಎಷ್ಟೊಂದು ಒಂಟಿ

ಕೆಲವು ಸಲ ಅದರಂತೆ ಆಗುವ ವಾಂಛೆ
ನೀಳ ಕಾಯ ಮತ್ತು ಸೂರ್ಯ ಪ್ರಭೆ
ಜಗದ ಹಂಗಿಲ್ಲದೆ ಒಬ್ಬನಾಗುವ ಇಚ್ಛೆ
ಕಾಲದ ಗಣನೆ ಮೈಮನದ ಸುಳಿಯಲ್ಲಿ
ಅಮೃತತ್ವ ಆದರ ಹಣ್ಣಿನಲ್ಲಿ

ಸುದೀರ್ಘ ನೆರಳು ಬಯಲಲ್ಲಿ ಬೆಳೆಯಲ್ಲಿ
ಬಿದ್ದು ತೇಲುವುದು ಅದರಲ್ಲಿ
ಹುಲ್ಲು ಮಲಗುವುದು
ಹಕ್ಕಿಗಳು ಹಾಯುವುವು
ಇಂದು ನಾಳೆಗಳ ಹಿಂದು ಮುಂದಾಗಿ

ಹೀಗಿರಲು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...