Home / ಕವನ / ಕವಿತೆ / ಪ್ರಾರ್‍ಥನೆ

ಪ್ರಾರ್‍ಥನೆ

ನಾನು ಯಾವ ನೆಲದಲ್ಲಾದರೂ ನಡೆದಾಡಲಿ
ನನ್ನ ಮಾತೃಭೂಮಿಯ ಮಣ್ಣವಾಸನೆಯೇ ಸೂಸಿಬರಲಿ
ನಾನು ಕಾಶ್ಮೀರ ಕಣಿವೆಯ ಸುವಾಸನೆ ಮೂಸಿರುವೆನು.
ದ್ವೇಷದ ವಿಷಗಾಳಿ ವರ್‍ಜವಾಗಿದೆ ನನಗೆ
ಸ್ಫೋಟಕ ಮದ್ದಿನ ಘಮಟು ವಾಸನೆ ಒಗ್ಗಲಾರದು
ನನಗೆ ಹಿಮಚ್ಛಾದಿತ ಹಿಮಾಲಯವೇ ಅಚ್ಚು ಮೆಚ್ಚು
ಆದರೂ ಅವರೇಕೆ ಹೇಳುತ್ತಿದ್ದಾರೆ?
ನನಗೆ ರಾಸ ಪರ್‍ವತವೇ ಪ್ರಿಯವೆಂದು.

ನಾನು ಹಜ್ ಯಾತ್ರೆ ಕೈಕೊಂಡರೂ
ಮದೀನಾದ ನೆಲದಲ್ಲಿ ಪ್ರಾರ್‍ಥಿಸಿದರೂ
ಭಾರತದ ಏಳೆಗಾಗಿಯೇ ಪ್ರಾರ್‍ಥಿಸುವೆನು.
ನನ್ನ ದೇಶದ ಸುಖ ಸಮೃದ್ಧಿಯನೇ ಬಯಸುವೆನು
ನನಗೆ ಆಡಲು ಮಡಿಲು ನೀಡಿದ
ನೀರು, ಆಹಾರ, ಗಾಳಿ ಕೊಟ್ಟು ಪೋಷಿಸಿದ
ಮಾತೃ ಭೂಮಿಯ ಶ್ರೇಯಸ್ಸು ಬಯಸುವೆ.
ನನ್ನ ದೇಹದ ಹನಿ ಹನಿ ರಕ್ತದಲ್ಲೂ
ಭಾರತದ ಹೆಸರೇ ಪ್ರತಿಧ್ವನಿಸುತ್ತಿರುತ್ತದೆ.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಾನು ಗಡಿಯಾಚೆಯವಳೆಂದು?.

ನನ್ನ ದೇಶದಲ್ಲಿ ನಿರಂತರ ಹರಿಯುತ್ತಿವೆ
ಗಂಗೆ, ಯಮುನೆ, ಕೃಷ್ಣ, ಕಾವೇರಿಯರು
ಪ್ರೀತಿಯ ತಾಜಮಹಲು ನನ್ನ ದೇಶದಲ್ಲಿಯೇ ಇದೆ.
ಚಾರ್‌ಮಿನಾರ್, ಕುತುಬ್‌ ಮೀನಾರ್‌ಗಳು.
ಬದುಕಿರುವೆನು ನಾನು ಕಾಶೀ, ಮಥುರಾ
ಅಜ್ಮೀರ್‌ಬಾಬಾನ ಸೌಹಾರ್‍ದ ನೆಲೆಗಳಲ್ಲಿ
ಸೌಹಾರ್‍ದ ತಾಣ ಸುಂದರ ಹೂಬನ
ಪೋಷಿಸಿದವಳು ನಾನು.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಾನು ಕೋಮಲ ಹೂಗಳ ದ್ವೇಷಿಯೆಂದು?

ನಾನು ಲೋಕದ ಯಾವ
ಮೂಲೆಯಲ್ಲಾದರೂ ಕೊನೆಯುಸಿರೆಳೆಯಲಿ
ದೂರದಿಂದಲಾದರೂ ನನ್ನ ಭಾರತದ
ಗಡಿ ಕಾಣುತ್ತಿರಲಿ ಎಂದು ಬಯಸುವೆನು.
ಯಾವ ದೇಶದ ನೀರೇ ಕುಡಿಯಲಿ
ಪವಿತ್ರ ಝಂಝಂ ಸೇವಿಸಿದರೂ ಸಹ
ಅದರಲ್ಲಿ ಗಂಗೆಯ ಸ್ವಾದ ಹುಡುಕುವೆನು.
ಪ್ರಾರ್‍ಥನೆಗೆ ಕೈ ಎತ್ತಿದ ಪ್ರತಿ ಬಾರಿಯೂ
ನನ್ನ ದೇಶದ ಎಳ್ಗೆಯನೇ ಬಯಸುವೆನು.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಿನ್ನ ಬದ್ಧತೆಯನ್ನು ಸಾಬೀತು ಪಡಿಸು ಎಂದು?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...