Home / ಕಥೆ / ಕಿರು ಕಥೆ / ಸ್ವಾರ್ಥಿ ಸಾಧಕ

ಸ್ವಾರ್ಥಿ ಸಾಧಕ

ಒಬ್ಬ ಸ್ವಾರ್ಥಿ ಸಾಧಕ, ಅನೇಕ ವರುಷ, ಬೆಟ್ಟತಪ್ಪಲು, ಕಾಡುಮೇಡುಗಳಲ್ಲಿ ತಪಸ್ಸು ಮಾಡಿದ. ಅವನಿಗೆ ಒಂದು ಉತ್ಕಟ ಆಸೆ ಇತ್ತು. ಅವನಲ್ಲಿ ಐದು ಬರಿದಾದ ಮಣ್ಣಿನ ಬಿಂದಿಗೆಗಳು ಇದ್ದವು. ಅವನು ಕಠಿಣ ತಪದಿಂದ ಒಂದು ಬಿಂದಿಗೆಯಲ್ಲಿ ಬೆಳಕನ್ನು, ಎರಡನೇಯದರಲ್ಲಿ ಬೆಳದಿಂಗಳನ್ನು, ಮೂರನೇಯದರಲ್ಲಿ ಗಾಳಿಯನ್ನು, ನಾಲ್ಕನೇಯದರಲ್ಲಿ ಮಳೆಯನ್ನು, ಐದನೇಯದರಲ್ಲಿ ಬಿಸಿಲನ್ನು ತುಂಬಿಟ್ಟ, ಸೂರ್ಯನಿಗೆ ಮೋಡಕವಿದಾಗ, ಬಿಸಿಲ ಬಿಂದಿಗೆ ಬಗ್ಗಿಸಿ, ತಾನು ಮಾತ್ರ ಬಿಸಿಲು ಪಡೆಯುತ್ತಿದ್ದ. ರಾತ್ರಿ ಹೊತ್ತು, ಗಾಢಾಂಧಕಾರವಾದಾಗ ಬೆಳಕಿನ ಬಿಂದಿಗೆ ಬಗ್ಗಿಸಿ ಪ್ರಕಾಶ ಪಡೆಯುತ್ತಿದ್ದ. ಬೇಸಿಗೆ ಸಮಯದಲ್ಲಿ ಗಾಳಿ ಬಿಂದಿಗೆ ಬಗ್ಗಿಸಿ ತಂಪನ್ನು ಪಡೆದು ಸುಖ ಪಡುತ್ತಿದ್ದ, ಇನ್ನು ಕ್ಷಾಮ ಬಂದಾಗ ನೆಲ ಬಿರುಕು ಬಿಟ್ಟಾಗ ಬಿಂದಿಗೆ ಉರುಳಿಸಿ ಮಳೆ ಸುರಿಸಿ ಬೆಳೆ ಬಿತ್ತಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ. ಇವನ ಸ್ವಾರ್ಥಕ್ಕೆ ಪಾಠಕಲಿಸಲು ಒಮ್ಮ ದೇವರು ದೊಡ್ಡ ಆಲಿಕಲ್ಲು ಮಳೆ ಸುರಿಸಿದ. ಕೊಡಗಳೆಲ್ಲಾ ಒಡೆದು ಚೂರು ಚೂರಾಗಿ ಬೆಳಕು, ಬೆಳದಿಂಗಳು, ಗಾಳಿ, ಮಳೆ, ಬಿಸಿಲು ಎಲ್ಲಾ ಹರಿದು ಹೋಯಿತು. ಸ್ವಾರ್ಥಿ ಸಾಧಕ ಎಲ್ಲಾ ಬಿಂದಿಗೆಗಳಲ್ಲಿ ಬಗ್ಗಿ ನೋಡಿದ. ಅವನಿಗೆ ಬರಿ ಶೂನ್ಯ ಕಂಡು ಅವನ ಕಣ್ಣು ತೆರೆಯಿತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...