ಇವರೇ ನಮ್ಮವರು ಕನ್ನಡಿಗರು

ಕನ್ನಡತನವು ನಲಿಯುತ ಮನದಲಿ
ಕನ್ನಡದಾ ಸಿರಿದೀಪ ಹಚ್ಚಿ ಬೆಳಗುತಲಿ
ಬೆಳಕಾಗಿ ತೆರೆಮರೆಯಾಗಿಹರು
ಇವರೇ ನಮ್ಮವರು ಕನ್ನಡಿಗರು||

ಅವರಲ್ಲಿವರು ಇವರಲ್ಲವರು
ಅವರಿವರವರಿವರಲ್ಲಿ ಕೆಳೆಯ
ಸಿರಿವಂತಿಕೆಯಲಿ ಬೆರೆತು ಬಾಳುವವರು
ಇವರೇ ನಮ್ಮವರು ಕನ್ನಡಿಗರು

ದಶದಿಕ್ಕುಗಳ ದಿಸೆಗಳ ಕನ್ನಡ ತನವ
ಪಸರಿಸಿ ಕನ್ನಡದಾ ಮಣ್ಣತಿಲಕವನಿರಿಸಿ
ಪಚ್ಚೆಯಲ್ಲಿಹ ಹೊನ್ನತಾವರೆಯಂತಿರುವವರು
ಇವರೇ ನಮ್ಮವರು ಕನ್ನಡಿಗರು

ಬೆಸೆದ ಭಾವಗಳಲಿ ನೊಸೆದ ಬೇಧವ
ತೊರೆದು ಭಾವೈಕ್ಯತೆಯಲಿ ಜೊತೆಗೂಡಿ
ನಲಿದು ಹೃದಯವಂತಿಕೆ ಪ್ರೀತಿ ತೋರುವವರು
ಇವರೇ ನಮ್ಮವರು ಕನ್ನಡಿಗರು

ನುಡಿ ನುಡಿಯಲ್ಲಿಹ ನಡೆವಂತಿಕೆಯ
ತೋರಿ ಗುಡಿಯಲ್ಲಿಹ ತಾಯ ಕೂಸಾಗಿ
ಬೆಳೆದು ಕಗ್ಗತ್ತಲಾ ಕಮರಿಯಲಿ ಬೆಳಕಾಗುವವರು
ಇವರೇ ನಮ್ಮವರು ಕನ್ನಡಿಗರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂಚಿನ ಶಿರ
Next post ಬೇಬಿ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…