Home / ಕವನ / ಅನುವಾದ / ಕಂಚಿನ ಶಿರ

ಕಂಚಿನ ಶಿರ

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಇಲ್ಲಿ ಬಾಗಿಲಿನ ಬಲಭಾಗದಲ್ಲೇ ಇದೆ ಕಂಚಿನ ಶಿರ;
ಮಾನುಷ, ಅತಿಮಾನುಷ, ದುಂಡನೆ ಹಕ್ಕಿಗಣ್ಣು
ಇನ್ನೆಲ್ಲ ಉದುರಿ ನಿಸ್ತಬ್ಬ ನಿಶ್ಚೇಷ್ಟಿತ.
ಗೋರಿಯಲೆಯುವ ಜೀವ ದಿಗಂತದುದ್ದಕ್ಕೂ ಬೀಸಿ ಹಾಯುತ್ತಿದೆ
(ಉಳಿದೆಲ್ಲ ಅಳಿದರೂ ಬೇರೆ ಏನೋ ಸುಳಿಯಬಹುದು ಅಲ್ಲಿ);
ತನ್ನ ಶೂನ್ಯತೆಯರಿವು ತರುವ ಸನ್ನಿಯ ಭಾವೋದ್ವೇಗದುಗ್ರತೆಯನ್ನು
ಶಮನವಾಗಿಸುವಂಥದೇನೂ ಅಲ್ಲಿಲ್ಲ.

ಗೋರಿಯಲೆದವಳಲ್ಲ ಹಿಂದೆ. ಇಡಿ ವ್ಯಕ್ತಿತ್ವ
ಘನ ಉದಾತ್ತತೆಯ ಪ್ರಭೆಯಿಂದ ತುಂಬಿದ ಹಾಗೆ.
ಬಲು ಸಭ್ಯ ಮಹಿಳೆ; ಹೇಳಬಲ್ಲರು ಯಾರು,
ವ್ಯಕ್ತಿತ್ವವೊಂದರ ಯಾವ ಮುಖ ಅದರ ನಿಜ ಸಾರ ತೋರೀತೆಂದು?
ಸಾರವೂ ಭಿನ್ನ ಮೂಲಾಂಶಗಳ ಮಿಶ್ರಣ
ಇದ್ದೀತು ಎಂದ ಮೇಧಾವಿ ಮೆಕ್ ಟ್ಯಾಗರ್‍ಟ್.
ಅಷ್ಟು ಸ್ವಲ್ಪದರಲ್ಲೆ ಉಸಿರು ಕಟ್ಟಿಸುವಂತೆ
ಬಾಳು ಸಾವುಗಳ ವಿರುದ್ಧ ತುದಿಯೆರಡನ್ನೂ ಬೆರಸಿ ಕಡೆದಂಥ ಮುಖ.

ಆರಂಭದಲ್ಲಿ ಇನ್ನೂ ಎಲ್ಲ ಹೊಸತು, ನಯ,
ಆ ದಿನಗಳಲ್ಲಿ ಕಂಡಿದ್ದೆ ಅವಳಲ್ಲೊಂದು
ವನ್ಯ ಉಚ್ಛೃಂಖಲತೆ, ನನಗೆ ಅನಿಸಿತ್ತಂದು
ಬಾಳು ಮುಂದೆಂದೊ ತಪ್ಪದೆ ಹಾಯಬೇಕಾದ
ಘೋರದರ್‍ಶನವೊಂದು ಅವಳಂತರಾತ್ಮವನ್ನೆ ಸಿಡಿಸಿಬಿಟ್ಟಿತೆಂದು.
ತನ್ನದಲ್ಲದ್ದೆಲ್ಲವನ್ನೂ ತನ್ನಾಚೆಗೆ ಕೊಡವಿ ನಡೆಯುವ ನೆಲೆಗೆ
ಸ್ನೇಹ ಕಲ್ಪನೆಯನ್ನು ನಡೆಸಿಬಿಟ್ಟಿತು; ನಾನು ಉದ್ವೇಗಗೊಂಡಿದ್ದೆ,
ನನ್ನ ಮಗುವೇ, ನನ್ನ ಮಗುವೆ ಎಂದಲ್ಲ ಕಡೆ ಉದ್ಗರಿಸಿ ತೊಳಲಿದ್ದೆ.

ಅಥವಾ ಅವಳನ್ನೊಂದು ಅಲೌಕಿಕ ಶಕ್ತಿಯೆಂದು ಬಗೆದೆ ನಾನು
ಕಠೋರ ನೇತ್ರವೊಂದು ಅವಳ ಕಣ್ಣನ್ನು ಹಾದು
ಈ ಕೀಳುಲೋಕದ ಪತನ ಕ್ಷತಿಗಳನ್ನು ನೋಡಿತೆಂಬಂತೆ;
ಕ್ಷುದ್ರಮೂಲಗಳು ಉನ್ನತಿಗೆ ಏರಿದ್ದನ್ನು
ಹಿರಿಮೂಲಗಳ ಸಾರ ಆರಿಹೋದದ್ದನ್ನು
ಪರಂಪರಾರ್‍ಜಿತ ಮುತ್ತನ್ನೆತ್ತಿ ಹಂದಿಗಳತ್ತ ಬೀಸಿ ಒಗೆದದ್ದನ್ನು
ಕೋಡಂಗಿ ಕೇಡಿಗರು ಭವ್ಯ ಕಣಸುಗಳನ್ನು
ಗೇಲಿಮಾಡಿದ್ದನ್ನು ಕಂಡಿತೆಂಬಂತೆ,
ಏನುಳಿಯಿತಿನ್ನು ತಪ್ಪಿಸಲು ನರಮೇಧಕ್ಕೆ ಎಂದು ಬೆರಗಾದಂತೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...