Home / ಕವನ / ಅನುವಾದ / ಕಂಚಿನ ಶಿರ

ಕಂಚಿನ ಶಿರ

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಇಲ್ಲಿ ಬಾಗಿಲಿನ ಬಲಭಾಗದಲ್ಲೇ ಇದೆ ಕಂಚಿನ ಶಿರ;
ಮಾನುಷ, ಅತಿಮಾನುಷ, ದುಂಡನೆ ಹಕ್ಕಿಗಣ್ಣು
ಇನ್ನೆಲ್ಲ ಉದುರಿ ನಿಸ್ತಬ್ಬ ನಿಶ್ಚೇಷ್ಟಿತ.
ಗೋರಿಯಲೆಯುವ ಜೀವ ದಿಗಂತದುದ್ದಕ್ಕೂ ಬೀಸಿ ಹಾಯುತ್ತಿದೆ
(ಉಳಿದೆಲ್ಲ ಅಳಿದರೂ ಬೇರೆ ಏನೋ ಸುಳಿಯಬಹುದು ಅಲ್ಲಿ);
ತನ್ನ ಶೂನ್ಯತೆಯರಿವು ತರುವ ಸನ್ನಿಯ ಭಾವೋದ್ವೇಗದುಗ್ರತೆಯನ್ನು
ಶಮನವಾಗಿಸುವಂಥದೇನೂ ಅಲ್ಲಿಲ್ಲ.

ಗೋರಿಯಲೆದವಳಲ್ಲ ಹಿಂದೆ. ಇಡಿ ವ್ಯಕ್ತಿತ್ವ
ಘನ ಉದಾತ್ತತೆಯ ಪ್ರಭೆಯಿಂದ ತುಂಬಿದ ಹಾಗೆ.
ಬಲು ಸಭ್ಯ ಮಹಿಳೆ; ಹೇಳಬಲ್ಲರು ಯಾರು,
ವ್ಯಕ್ತಿತ್ವವೊಂದರ ಯಾವ ಮುಖ ಅದರ ನಿಜ ಸಾರ ತೋರೀತೆಂದು?
ಸಾರವೂ ಭಿನ್ನ ಮೂಲಾಂಶಗಳ ಮಿಶ್ರಣ
ಇದ್ದೀತು ಎಂದ ಮೇಧಾವಿ ಮೆಕ್ ಟ್ಯಾಗರ್‍ಟ್.
ಅಷ್ಟು ಸ್ವಲ್ಪದರಲ್ಲೆ ಉಸಿರು ಕಟ್ಟಿಸುವಂತೆ
ಬಾಳು ಸಾವುಗಳ ವಿರುದ್ಧ ತುದಿಯೆರಡನ್ನೂ ಬೆರಸಿ ಕಡೆದಂಥ ಮುಖ.

ಆರಂಭದಲ್ಲಿ ಇನ್ನೂ ಎಲ್ಲ ಹೊಸತು, ನಯ,
ಆ ದಿನಗಳಲ್ಲಿ ಕಂಡಿದ್ದೆ ಅವಳಲ್ಲೊಂದು
ವನ್ಯ ಉಚ್ಛೃಂಖಲತೆ, ನನಗೆ ಅನಿಸಿತ್ತಂದು
ಬಾಳು ಮುಂದೆಂದೊ ತಪ್ಪದೆ ಹಾಯಬೇಕಾದ
ಘೋರದರ್‍ಶನವೊಂದು ಅವಳಂತರಾತ್ಮವನ್ನೆ ಸಿಡಿಸಿಬಿಟ್ಟಿತೆಂದು.
ತನ್ನದಲ್ಲದ್ದೆಲ್ಲವನ್ನೂ ತನ್ನಾಚೆಗೆ ಕೊಡವಿ ನಡೆಯುವ ನೆಲೆಗೆ
ಸ್ನೇಹ ಕಲ್ಪನೆಯನ್ನು ನಡೆಸಿಬಿಟ್ಟಿತು; ನಾನು ಉದ್ವೇಗಗೊಂಡಿದ್ದೆ,
ನನ್ನ ಮಗುವೇ, ನನ್ನ ಮಗುವೆ ಎಂದಲ್ಲ ಕಡೆ ಉದ್ಗರಿಸಿ ತೊಳಲಿದ್ದೆ.

ಅಥವಾ ಅವಳನ್ನೊಂದು ಅಲೌಕಿಕ ಶಕ್ತಿಯೆಂದು ಬಗೆದೆ ನಾನು
ಕಠೋರ ನೇತ್ರವೊಂದು ಅವಳ ಕಣ್ಣನ್ನು ಹಾದು
ಈ ಕೀಳುಲೋಕದ ಪತನ ಕ್ಷತಿಗಳನ್ನು ನೋಡಿತೆಂಬಂತೆ;
ಕ್ಷುದ್ರಮೂಲಗಳು ಉನ್ನತಿಗೆ ಏರಿದ್ದನ್ನು
ಹಿರಿಮೂಲಗಳ ಸಾರ ಆರಿಹೋದದ್ದನ್ನು
ಪರಂಪರಾರ್‍ಜಿತ ಮುತ್ತನ್ನೆತ್ತಿ ಹಂದಿಗಳತ್ತ ಬೀಸಿ ಒಗೆದದ್ದನ್ನು
ಕೋಡಂಗಿ ಕೇಡಿಗರು ಭವ್ಯ ಕಣಸುಗಳನ್ನು
ಗೇಲಿಮಾಡಿದ್ದನ್ನು ಕಂಡಿತೆಂಬಂತೆ,
ಏನುಳಿಯಿತಿನ್ನು ತಪ್ಪಿಸಲು ನರಮೇಧಕ್ಕೆ ಎಂದು ಬೆರಗಾದಂತೆ.
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...