ಸಿರಿಯೆ ನೀ ಸಿರಿಯೆ

ಸಿರಿಯೆ ನೀ ಸಿರಿಯೆ
ಮಲೆನಾಡ ಕಣ್‌ಮಣಿಯೆ
ಕನ್ನಡ ತಾಯ ಹೊನ್ನ ಹೂರಣವೇ ನೀ
ಸಿರಿಯೆ ನೀ ಸಿರಿಯ ಬಾರಲೇ ನೀಽಽಽಽ ||ಸಿ||

ಅರಳಿದ ಹೊಂಗನಸ ಹೂ ಮಾಲೆಯೆ ನೀ
ಸಪ್ತ ಸ್ವರ ರಾಗ ಝೇಂಕಾರದಲಿ
ಕನ್ನಡ ತಾಯ ಕೊರಳ ಬಳಸು ನೀಽಽಽಽ ||ಸಿ||

ಹಸಿರ ಸೀರೆಯ ಹೊನ್ನ ರವಿಕೆಯ
ಧರಿಸಿ ನೀ ಬಂದೆಯಾ ಓ ಗೆಳತಿ
ಕಣ್ಣಂಚಿನ ನೋಟವ ಹರಿಸಿದೆಯಾ ನೀ ||ಸಿ||

ವಸಂತನ ವರಿಸಿ ನಂದನ ವನವೇ
ನಾಚುವ ಸೊಬಗೆ ಎಲ್ಲಿಹೆ ನೀ ಗೆಳತಿ
ಕಿನ್ನರ ನರ್ತನ ತಾಳಕೆ ಹಾಡುವ ಕೋಗಿಲೆಯೆ
ಎಲ್ಲಿಹೆ ನೀ ಗೆಳತಿ ||ಸಿ||

ಮಾಧುರ್ಯ ಮಾನಸೆಯೆ ನೀ
ಅಂಬರಕೆ ಹಂದರವ ಕಟ್ಟೀ
ಮುತ್ತಿನಾರತಿ ಎತ್ತಲು ಅಂಗನೆಯರು
ಕಾದಿಹರು ಬಾರಲೆ ಓ ಗೆಳತಿ ||ಸಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಯ್ಕೆ
Next post ಸ್ವಾಮಿ ಯಾಕೆ ಮಾತಾಡಲಿಲ್ಲ?

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…