ವರುಷ ವರುಷಕ್ಕೊಮ್ಮೆ
ಹುಟ್ಟು ಹಾಕುವರು ನಿನ್ನ
ಮೆಟ್ಟಿ ನಿಲ್ಲುವರು ಕನ್ನಡ
ಕನ್ನಡವೆಂದು ಎಲೈ ತಾಯೆ
ಇಂಥ ಜೀವಿಗಳಿಗೆ ನೀಡು ಚೈತನ್ಯ
ನಿನ್ನ ಗುಣಗಾನ ಮಾಡುವರು
ಇವರೇ ಊರ ಮನೆಯವರು
ಇವರ ಭಂಡತನದ ಬದುಕಿಗೆ ನೀಡು ಚೈತನ್ಯ
ಅಂದು ನಿನ್ನ ರಕ್ಷಣೆಗಾಗಿ ಪ್ರಾಣ ತೆತ್ತವರು
ಅದೆಷ್ಟೊ ಜನ ವೀರೋನ್ಮಣಿಗಳು
ನಿನ್ನ ತೂಗುಯ್ಯಾಲೆಯಲ್ಲಿ ತೂಗಿಸಿ
ನಿನ್ನಲ್ಲೆ ಲೀನವಾದರು
ಇಂದು ವ್ಯರ್ಥವಾಯಿತೇ ಆ ಇತಿಹಾಸ
ತುಂಬು ಬಸುರ ತೊತ್ತ ಬಂಜೆರೆದೆಯ
ಬಂಜೆತನ ನಿನ್ನದಾಯಿತೆ
ಹೆರರ ಸೊತ್ತಿಗೆ ಅಂಗಲಾಚುವ
ಬದುಕು ಇವರದಾಯಿತೇ
ನ್ಯಾಯ ದೇವತೆಯಾಗಿ ಕಣ್ಣಿಗೆ
ಬಟ್ಟೆ ಕಟ್ಟುವ ಮುನ್ನ
ಅವರಿವರ ಬರುವಿಕೆಗಾಗಿ ಕಾಯುವ ಮುನ್ನ
ಒತ್ತೆ ಇಟ್ಟ ಬುದ್ದಿ ತನುಮನಗಳನ್ನ
ಹಿಡಿತುತ್ತ ಹಿಡಿದು ನಿನ್ನ ನೆನೆಯುವ ಮುನ್ನ
ಕ್ಷಮಿಸು ತಾಯೆ ನಿನ್ನ ಔದಾರ್ಯತೆಯಲಿ
ಲೀನವಾಗಿಸು ಬಿಡದಲೆ
ನಿನ್ನ ಕರುಳ ಬಳ್ಳಿಗಳಿಗೆ
ನೀಡು ಚೈತನ್ಯ
*****
Related Post
ಸಣ್ಣ ಕತೆ
-
ಒಲವೆ ನಮ್ಮ ಬದುಕು
"The best of you is he who behaves best towards the members of his family" (The Holy Prophet) ವಾರದ ಸಂತೆ.… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ಯಾರು ಹೊಣೆ?
"ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…