Home / ಕಥೆ / ಕಿರು ಕಥೆ / ದೃಷ್ಟಿ ಇರೆ ದಾರಿ

ದೃಷ್ಟಿ ಇರೆ ದಾರಿ

ಸಂಚಾರದಲ್ಲಿದ್ದ ಒಬ್ಬ ಗುರು ಒಂದು ದೇವಾಲಯದಲ್ಲಿ ತಂಗಿದ್ದರು. ಅಲ್ಲಿಗೆ ಕೆಲವು ಶಿಷ್ಯರು ಬಂದರು.

“ಗುರುವೆ! ನಮಗೆ ದಾರಿ ತೋರಿಸಬೇಕೆಂದು” ಒಬ್ಬ ಶಿಷ್ಯ ಕೇಳಿದ.
“ನಿನ್ನ ಮುಂದಿರುವ ವೃಕ್ಷವೇ ನಿನ್ನ ದಾರಿ” ಎಂದರು ಗುರುಗಳು.
“ಅರ್ಥವಾಗಲಿಲ್ಲ ಗುರುಗಳೇ” ಎಂದು ಶಿಷ್ಯ ಪೆಚ್ಚು ಮೋರೆ ಹಾಕಿದ.
“ವೃಕ್ಷವನ್ನು ಸುತ್ತುವಾಗ ನಿನಗೆ ಸವೆಯದ ದಾರಿ ಇದೆ. ಮೇಲೆ ಶಾಕೆಗಳ ಅನೇಕ ಕವಲುಗಳ ದಾರಿಯಲ್ಲಿ ಹೂ, ಕಾಯಿ ಫಲ ದೊರೆಯದೆ ಇರದು” ಎಂದರು ಗುರುಗಳು.

ಅಂತರಾರ್‍ಥದ ಮರ್‍ಮವನ್ನು ಅರಿತ ಶಿಷ್ಯ ‘ಧನ್ಯೂಸ್ಮಿ’ ಎಂದ.

“ಅವನಿಗೆ ವೃಕ್ಷವು ದಾರಿಯಾದರೆ ನನಗೆ ಯಾವುದು ದಾರಿ?” ಎಂದ ಮತ್ತೊರ್‍ವ ಶಿಷ್ಯ.

“ನಿನ್ನ ಮುಂದಿರುವ ಸಾಗರವೇ ನಿನಗೆ ದಾರಿ, ನಡೆದು ಹೋಗು” ಎಂದರು ಗುರುಗಳು.

“ಸಾಗರದಲ್ಲಿ ದಾರಿ ಎಲ್ಲಿ? ಮುಳುಗಿಹೋಗುವೆನಲ್ಲ, ಗುರುಗಳೇ?” ಎಂದ ಎರಡನೇಯ ಶಿಷ್ಯ.

“ನಿನ್ನ ಹೃದಯ ಸಾಗರದಲ್ಲಿ ಮನವೆಂಬ ಹಡಗು ಅಲೆಗಳ ಆರ್‍ಭಟವ ಸಹಿಸಿ ತೇಲುತ್ತ ಹೋದರೆ ದಡದಲ್ಲಿ ಕಾಣದೇ ನಿನ್ನ ದಾರಿ?” ಎಂದರು ಗುರುಗಳು. ಶಿಷ್ಯ ತೃಪ್ತನಾಗಿ ಧ್ಯೇಯದತ್ತ ದಾರಿ ಹಿಡಿದು ಸಾಗಿದ.

ಮೂರನೆಯ ಶಿಷ್ಯ ಮತ್ತೆ ಮುಂದೆ ಬಂದು “ನನಗೇನು ದಾರಿ ಹೇಳಿಗುರುಗಳೆ?” ಎಂದಾಗ.

“ಅಯ್ಯೋ! ಮೂರ್‍ಖಾ, ದಾರಿ ನಮ್ಮ ಕಣ್ಣಿಗೆ ಕಾಣಬೇಕು, ದೃಷ್ಟಿಯಲ್ಲಿ ದಾರಿಯಲ್ಲವೆ? ನಮ್ಮ ಕಾಲು ನಡೆದರೆ, ದಾರಿ ಓಡಿ ಬರುತ್ತದೆ. ಎಲ್ಲರಿಗೂ ಒಂದೊಂದು ದಾರಿ ಕಾದಿರುತ್ತದೆ. ಅದು ಕಂಡು ಕೊಳ್ಳುವುದು ಬಾಳಿನ ಗುಟ್ಟು” ಎಂದಾಗ ಶಿಷ್ಯರ ಗುಂಪಿಗೆ ಸತ್ಯವು ಮನದಟ್ಟಾಯಿತು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...