ದೃಷ್ಟಿ ಇರೆ ದಾರಿ

ಸಂಚಾರದಲ್ಲಿದ್ದ ಒಬ್ಬ ಗುರು ಒಂದು ದೇವಾಲಯದಲ್ಲಿ ತಂಗಿದ್ದರು. ಅಲ್ಲಿಗೆ ಕೆಲವು ಶಿಷ್ಯರು ಬಂದರು.

“ಗುರುವೆ! ನಮಗೆ ದಾರಿ ತೋರಿಸಬೇಕೆಂದು” ಒಬ್ಬ ಶಿಷ್ಯ ಕೇಳಿದ.
“ನಿನ್ನ ಮುಂದಿರುವ ವೃಕ್ಷವೇ ನಿನ್ನ ದಾರಿ” ಎಂದರು ಗುರುಗಳು.
“ಅರ್ಥವಾಗಲಿಲ್ಲ ಗುರುಗಳೇ” ಎಂದು ಶಿಷ್ಯ ಪೆಚ್ಚು ಮೋರೆ ಹಾಕಿದ.
“ವೃಕ್ಷವನ್ನು ಸುತ್ತುವಾಗ ನಿನಗೆ ಸವೆಯದ ದಾರಿ ಇದೆ. ಮೇಲೆ ಶಾಕೆಗಳ ಅನೇಕ ಕವಲುಗಳ ದಾರಿಯಲ್ಲಿ ಹೂ, ಕಾಯಿ ಫಲ ದೊರೆಯದೆ ಇರದು” ಎಂದರು ಗುರುಗಳು.

ಅಂತರಾರ್‍ಥದ ಮರ್‍ಮವನ್ನು ಅರಿತ ಶಿಷ್ಯ ‘ಧನ್ಯೂಸ್ಮಿ’ ಎಂದ.

“ಅವನಿಗೆ ವೃಕ್ಷವು ದಾರಿಯಾದರೆ ನನಗೆ ಯಾವುದು ದಾರಿ?” ಎಂದ ಮತ್ತೊರ್‍ವ ಶಿಷ್ಯ.

“ನಿನ್ನ ಮುಂದಿರುವ ಸಾಗರವೇ ನಿನಗೆ ದಾರಿ, ನಡೆದು ಹೋಗು” ಎಂದರು ಗುರುಗಳು.

“ಸಾಗರದಲ್ಲಿ ದಾರಿ ಎಲ್ಲಿ? ಮುಳುಗಿಹೋಗುವೆನಲ್ಲ, ಗುರುಗಳೇ?” ಎಂದ ಎರಡನೇಯ ಶಿಷ್ಯ.

“ನಿನ್ನ ಹೃದಯ ಸಾಗರದಲ್ಲಿ ಮನವೆಂಬ ಹಡಗು ಅಲೆಗಳ ಆರ್‍ಭಟವ ಸಹಿಸಿ ತೇಲುತ್ತ ಹೋದರೆ ದಡದಲ್ಲಿ ಕಾಣದೇ ನಿನ್ನ ದಾರಿ?” ಎಂದರು ಗುರುಗಳು. ಶಿಷ್ಯ ತೃಪ್ತನಾಗಿ ಧ್ಯೇಯದತ್ತ ದಾರಿ ಹಿಡಿದು ಸಾಗಿದ.

ಮೂರನೆಯ ಶಿಷ್ಯ ಮತ್ತೆ ಮುಂದೆ ಬಂದು “ನನಗೇನು ದಾರಿ ಹೇಳಿಗುರುಗಳೆ?” ಎಂದಾಗ.

“ಅಯ್ಯೋ! ಮೂರ್‍ಖಾ, ದಾರಿ ನಮ್ಮ ಕಣ್ಣಿಗೆ ಕಾಣಬೇಕು, ದೃಷ್ಟಿಯಲ್ಲಿ ದಾರಿಯಲ್ಲವೆ? ನಮ್ಮ ಕಾಲು ನಡೆದರೆ, ದಾರಿ ಓಡಿ ಬರುತ್ತದೆ. ಎಲ್ಲರಿಗೂ ಒಂದೊಂದು ದಾರಿ ಕಾದಿರುತ್ತದೆ. ಅದು ಕಂಡು ಕೊಳ್ಳುವುದು ಬಾಳಿನ ಗುಟ್ಟು” ಎಂದಾಗ ಶಿಷ್ಯರ ಗುಂಪಿಗೆ ಸತ್ಯವು ಮನದಟ್ಟಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನದಾತುರವೋ ಯಮನ ಮನೆಯೆಡೆಗೆ?
Next post ಶ್ರೀನಾರಾಯಣ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…