Home / ಕಥೆ / ಕಿರು ಕಥೆ / ದೃಷ್ಟಿ ಇರೆ ದಾರಿ

ದೃಷ್ಟಿ ಇರೆ ದಾರಿ

ಸಂಚಾರದಲ್ಲಿದ್ದ ಒಬ್ಬ ಗುರು ಒಂದು ದೇವಾಲಯದಲ್ಲಿ ತಂಗಿದ್ದರು. ಅಲ್ಲಿಗೆ ಕೆಲವು ಶಿಷ್ಯರು ಬಂದರು.

“ಗುರುವೆ! ನಮಗೆ ದಾರಿ ತೋರಿಸಬೇಕೆಂದು” ಒಬ್ಬ ಶಿಷ್ಯ ಕೇಳಿದ.
“ನಿನ್ನ ಮುಂದಿರುವ ವೃಕ್ಷವೇ ನಿನ್ನ ದಾರಿ” ಎಂದರು ಗುರುಗಳು.
“ಅರ್ಥವಾಗಲಿಲ್ಲ ಗುರುಗಳೇ” ಎಂದು ಶಿಷ್ಯ ಪೆಚ್ಚು ಮೋರೆ ಹಾಕಿದ.
“ವೃಕ್ಷವನ್ನು ಸುತ್ತುವಾಗ ನಿನಗೆ ಸವೆಯದ ದಾರಿ ಇದೆ. ಮೇಲೆ ಶಾಕೆಗಳ ಅನೇಕ ಕವಲುಗಳ ದಾರಿಯಲ್ಲಿ ಹೂ, ಕಾಯಿ ಫಲ ದೊರೆಯದೆ ಇರದು” ಎಂದರು ಗುರುಗಳು.

ಅಂತರಾರ್‍ಥದ ಮರ್‍ಮವನ್ನು ಅರಿತ ಶಿಷ್ಯ ‘ಧನ್ಯೂಸ್ಮಿ’ ಎಂದ.

“ಅವನಿಗೆ ವೃಕ್ಷವು ದಾರಿಯಾದರೆ ನನಗೆ ಯಾವುದು ದಾರಿ?” ಎಂದ ಮತ್ತೊರ್‍ವ ಶಿಷ್ಯ.

“ನಿನ್ನ ಮುಂದಿರುವ ಸಾಗರವೇ ನಿನಗೆ ದಾರಿ, ನಡೆದು ಹೋಗು” ಎಂದರು ಗುರುಗಳು.

“ಸಾಗರದಲ್ಲಿ ದಾರಿ ಎಲ್ಲಿ? ಮುಳುಗಿಹೋಗುವೆನಲ್ಲ, ಗುರುಗಳೇ?” ಎಂದ ಎರಡನೇಯ ಶಿಷ್ಯ.

“ನಿನ್ನ ಹೃದಯ ಸಾಗರದಲ್ಲಿ ಮನವೆಂಬ ಹಡಗು ಅಲೆಗಳ ಆರ್‍ಭಟವ ಸಹಿಸಿ ತೇಲುತ್ತ ಹೋದರೆ ದಡದಲ್ಲಿ ಕಾಣದೇ ನಿನ್ನ ದಾರಿ?” ಎಂದರು ಗುರುಗಳು. ಶಿಷ್ಯ ತೃಪ್ತನಾಗಿ ಧ್ಯೇಯದತ್ತ ದಾರಿ ಹಿಡಿದು ಸಾಗಿದ.

ಮೂರನೆಯ ಶಿಷ್ಯ ಮತ್ತೆ ಮುಂದೆ ಬಂದು “ನನಗೇನು ದಾರಿ ಹೇಳಿಗುರುಗಳೆ?” ಎಂದಾಗ.

“ಅಯ್ಯೋ! ಮೂರ್‍ಖಾ, ದಾರಿ ನಮ್ಮ ಕಣ್ಣಿಗೆ ಕಾಣಬೇಕು, ದೃಷ್ಟಿಯಲ್ಲಿ ದಾರಿಯಲ್ಲವೆ? ನಮ್ಮ ಕಾಲು ನಡೆದರೆ, ದಾರಿ ಓಡಿ ಬರುತ್ತದೆ. ಎಲ್ಲರಿಗೂ ಒಂದೊಂದು ದಾರಿ ಕಾದಿರುತ್ತದೆ. ಅದು ಕಂಡು ಕೊಳ್ಳುವುದು ಬಾಳಿನ ಗುಟ್ಟು” ಎಂದಾಗ ಶಿಷ್ಯರ ಗುಂಪಿಗೆ ಸತ್ಯವು ಮನದಟ್ಟಾಯಿತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...