Home / ಕವನ / ಕವಿತೆ / ಶಕ್ತಿ ಸಂಕೇತದ ಸೂಕಿ

ಶಕ್ತಿ ಸಂಕೇತದ ಸೂಕಿ

ಎರಡು ದಶಕದ ಜೈಲುವಾಸಕ್ಕೆ ಕೊನೆಯಾಯ್ತು
ಗೃಹಬಂಧನದ ಜೈಲಿನ ಗೋಡೆಗಳಿಗೆ
ಅಪ್ಪಳಿಸಿದ ನಿನ್ನ ಪ್ರಜಾಸತ್ತೆಯ ಧ್ವನಿ
ಮ್ಯಾನ್‌ಮಾರ್‌ನ ತುಂಬ ಪ್ರತಿಧ್ವನಿಸುತ್ತಿತ್ತು.

ಅರವತ್ತೈದರ ತೆಳ್ಳನ ದೇಹದಲ್ಲಿ
ಬಿರುಗಾಳಿಗೂ ಬಗ್ಗದ ಆತ್ಮವಿಶ್ವಾಸವಿತ್ತು.
ನೀಳ ದೇಹದಲ್ಲಿ ಸಾಗರದಷ್ಟು ಸಿಟ್ಟು
ಬಂದೂಕಿನ ನಳಿಕೆಗೂ ಹೆದರದ ಕೆಚ್ಚು
ಮುಖದಲಿ ಹೊಳೆವ ಪ್ರಶಾಂತ ಕಣ್ಣುಗಳು
ಮ್ಯಾನ್‌ಮಾರ್‌ನ ಭವಿಷ್ಯದ ಕಿರಣಗಳಾಗಿದ್ದವು.

ಮಿಲಿಟರಿ ಶಾಸನದಲಿ ರೆಕ್ಕೆ ಕತ್ತರಿಸಿದ
ಹಕ್ಕಿಯ ಚಡಪಡಿಕೆ ಪಂಜರದಲ್ಲಿತ್ತು.
ಮರಣಶಯ್ಯಯಲ್ಲಿರುವ ಪತಿಯ ಮುಖ
ನೋಡಲು ಬಿಡದ ಮಿಲಿಟರಿ ದಬ್ಬಾಳಿಕೆ
ಪತಿಯ ಅಂತಿಮ ಇಚ್ಛೆ ಪೂರೈಸಲು ಅಡ್ಡಿಯಾಯ್ತು.

ದಶಕಗಳೇ ಸಂದವಲ್ಲೇ ಸೂಕಿ
ಕರುಳ ಕುಡಿ ಮೊಮ್ಮಕ್ಕಳ ಮುಖನೋಡಿ
ಜನಶಕ್ತಿ ಕೇಂದ್ರವನು ಹಿಡಿದಿಡುವ
ಹುಚ್ಚು ಹುನ್ನಾರ ಮಿಲಿಟರಿ ಸರ್‍ಕಾರಕ್ಕೆ
ಅಂತಿಮ ತೀರ್‍ಮಾನದ ದಿನ
ಜನರೇ ವಹಿಸಿಕೊಳ್ಳುತ್ತಾರೆ ಅಧಿಕಾರ.

ಗಂಡ, ಮಕ್ಕಳಿಂದ ಅಗಲಿಸಿದ
ಪತಿಯ ಅಂತಿಮ ದರ್‍ಶನಕ್ಕೂ ಬಿಡದ,
ನೋಬಲ್‌ ಶಾಂತಿ ಪುರಸ್ಕಾರ
ಪಡೆಯಲೂ ಬಿಡದ ಆ
ಮಿಲಿಟರಿ ಸರ್‍ಕಾರವ ಸೋಲಿಸಿ
ಜೈಲಿನಲ್ಲಿದ್ದೇ ಚುನಾವಣೆಯ ಗೆದ್ದೆಯಲ್ಲೇ.

ಪ್ರಜಾಸತ್ತೆಯ ಚುನಾವಣೆಯಲ್ಲಿ
ಮ್ಯಾನ್‌ಮಾರ್‌ನ ಜನತೆ ಉತ್ತರಿಸಿದ್ದಾರೆ.
ಜೈಲಿನಲ್ಲಿದ್ದ ಸೂಕಿಗೆ ಗೆಲಿಸಿದ್ದಾರೆ.
ಮಿಲಿಟರಿ ಮಾಡಿದ ಅನ್ಯಾಯಕೆ
ಪ್ರತ್ಯುತ್ತರ ನೀಡಿ, ಎಚ್ಚರಿಸಿದ್ದಾರೆ.

ನಿನ್ನ ದೃಢ ನಿಲುವಿನ ಮುಂದೆ
ಮಂಡೆಯೂರಿನ ಮಿಲಿಟರಿ
ಬಂಧನದ ಬೇಡಿ ಕಳಚಿದಾಗ
ವಿಶ್ವದ ತುಂಬ ಸಂತೋಷದ ಲಹರಿ,
ಹಬ್ಬದ ಸಂಭ್ರಮ, ಸಿಡಿಲ ಮರಿಗೆ
ಹೃದಯ ತುಂಬಿದ ಸ್ವಾಗತ.

ಕಳಚಿ ಬಿದ್ದಿತು ಸರಳುಗಳ ಸರಪಳಿ
ಸೆರೆಮನೆಯ ಗೋಡೆಗಳು ಅದುರಿದವು
ಚೆಲ್ಲಾಪಿಲ್ಲಿಯಾದವು ಜನಶಕ್ತಿಯ ಮುಂದೆ
ಅಮೂಲ್ಯ ಬದುಕಿನ ಆ ಇಪ್ಪತ್ತು
ವರ್‍ಷಗಳ ಅಜ್ಞಾತವಾಸಕೆ,
ಮಕ್ಕಳಿಂದ, ಪತಿಯಿಂದ ಅಗಲಿಸಿದವರಿಗೆ
ಅವಳ ನಿಟ್ಟುಸಿರಿನ ಶಾಪ ತಟ್ಟದಿದ್ದೀತೆ?

ಜನರು ಮೈದಡವಿ ಮಾನವೀಯತೆಯ
ಬಿಗಿದಪ್ಪಿದರು ಭರವಸೆಯ ಬೆಳಕನು
ಇದು ಜನತೆಯ ಗೆಲುವು ನೋಡು
ಪ್ರಜಾಸತ್ತೆಯ ಉಳಿವು ಸತ್ಯವಾಯ್ತು,
ಸ್ವಾತಂತ್ರ ಹಕ್ಕಿಗೆ ಮುಕ್ತಿ ದೊರಕಿತು.

ಸೌಮ್ಯವಾದ ಶಾಂತ ಮುಖದಲ್ಲಿ
ಕಬ್ಬಿಣದಷ್ಟು ಕಠೋರ ನಿರ್‍ಧಾರ
ಒಡಲಾಳದಲ್ಲಿ ಅಸಹನೆಯ ಹೊಗೆ
ತುಟಿಯ ಮೇಲೆ ಮಾಸದ ಹೂನಗೆ
ಗುಬ್ಬಚ್ಚಿಯ ದೇಹದಲ್ಲಿ ಪರ್‍ವತದ ಆತ್ಮವಿಶ್ವಾಸ,
ಗುರಿ ಸಾಧಿಸುವವರೆಗೂ ನಿಲ್ಲದ ನಡಿಗೆ.

ಜಾಗತಿಕ ನೈತಿಕ ಕೊಂಡಿಗಳು
ಒಂದೊಂದೇ ಕಳಚಿ ಬೀಳುವ ಹೊತ್ತು
ಲೇಕ್‌ಸೈಡ್ ಮನೆಯಿಂದ ಹೊರಬಂದ
ಮೃದು ಮಾತಿನ ಒಡತಿ ಶಕ್ತಿ ಸಂಕೇತವಾಗಿ
ಭತ್ತದ ಉತ್ಸಾಹದ ಚಿಲುಮೆಯಾಗಿ
ಭರವಸೆಯ ಬೆಳಕಿನ ಚಿಗುರೆ ಕಂಗಳ
ಒಡತಿಗೆ ಕೊನೆಗೂ ದಕ್ಕಿತು ಮುಕ್ತಿ
*****
(ಸೂಕಿ ಗೃಹಬಂಧನದಿಂದ ಬಿಡುಗಡೆಯಾದ ದಿನ ಬರೆದ ಕವಿತೆ)

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...