ಹಿಡಿಯಿರೋ ಅವನ

ಹಿಡಿಯಿರೋ ಅವನ
ಮಾತು ಬಲ್ಲವರೆಲ್ಲರೂ ಹಿಡಿಯಿರೋ!
ಮಾತುಮಾತಿನಲಿ ಅವನಿಗಾಗಿ ಗುಂಪು ಕೂಡಿದ ನೀವು
ಅವ ನಮ್ಮವ ಅವ ನಮ್ಮವನೆಂದು ಗುಂಪು ಗುಂಪಾಗಿ ಗುದ್ದಾಡುತ್ತೀರಿ

ಆ ಬ್ರಾಹ್ಮಣ್ಯ ಶಿಖಿಗೆ ಅತಿ ಆಚಾರಿಗಳಿಗೆ
ಮತಾಂಧ ಅಭಿಮಾನಿಗಳಿಗೆ ಜನಿವಾರ ಶಿವದಾರಗಳಿಗೆ
ನಾಮ ವಿಭೂತಿಗಳಿಗೆ ಗಂಟೆ ಜಾಗಟೆ ಹೂ ಪತ್ರೆ ಜಾತ್ರೆ ಪರಿಷೆಗಳಿಗೆ
ಸಿಗದ ರೀತಿಯಲ್ಲಿ ಅವನು

ಈ ನಿಮ್ಮ ಶೂದ್ರ ಪ್ರಜ್ಞೆಗೆ ದಲಿತ ಧೋರಣೆಗೆ
ಕಪ್ಪು ಮಾತುಗಳಿಗೆ ಎಡಗೈ ಬಲಗೈ ಕುಸ್ತಿಗಳಿಗೆ ಸಿಗಲಿಲ್ಲ
ಸಮಕಾಲೀನ ಪ್ರಜ್ಞೆಯ ಕಾಲಿಗೂ ಸಿಗದ
ಮಣ್ಣ ವಾಸನೆಯ ಮೂಗಿಗೂ ಹತ್ತದೆ
ಲಿಂಗಭಕ್ತಿಯ ಅನಂಗನಂಗಕ್ಕೂ ದಕ್ಕದೆ

ವರಕವಿ ಗಿರಿಕವಿ ಪಟ್ಟಭದ್ರ ಬಿರುದು ಬಾವಲಿಗಳಿಗು ಮರುಳಾಗದೆ
ಹೆಸರಾಂತ ಕೀರ್ತಿ ಕನ್ನೆಗೂ ಒಲಿಯದೆ
ನುಡಿಗಡಣದೊಡವೆಗಳಿಗಂತೂ ಮೈಗೊಡದೆ
ನಿಮ್ಮ ಪ್ರತಿಮೆಗಳಲ್ಲಿ ಮೂರ್ತೀಭವಿಸದೆ
ನಿಮ್ಮ ಸಂಕೇತಗಳ ಕಣ್ಸನ್ನೆಗಳಿಗೆ ಮೋಹಗೊಳ್ಳದೆ

ನಿಮ್ಮ ನಾದದ ಮೋಡಿಗೆ ತಲೆದೂಗದೆ ವಾದಕ್ಕಂತೂ ಎಂದೂ ಜಗ್ಗದೆ
ನಿಮ್ಮ ಸಮಯಸ್ಪೂರ್ತಿಯ ವೇಳೆಯನರಿಯದೆ
ಓಡುತ್ತಿದ್ದಾನೆ ತಪ್ಪಿಸಿಕೊಂಡು
ಹಿಡಿಯಿರಿ ಮಾತು ಬಲ್ಲವರೆಲ್ಲರೂ
ಹಿಡಿಯರೋ ಹಿಡಿಯಿರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ನಾಯುಗಳು
Next post ನಗೆ ಡಂಗುರ – ೩೯

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys