Home / ಕವನ / ಕವಿತೆ / ಹಿಡಿಯಿರೋ ಅವನ

ಹಿಡಿಯಿರೋ ಅವನ

ಹಿಡಿಯಿರೋ ಅವನ
ಮಾತು ಬಲ್ಲವರೆಲ್ಲರೂ ಹಿಡಿಯಿರೋ!
ಮಾತುಮಾತಿನಲಿ ಅವನಿಗಾಗಿ ಗುಂಪು ಕೂಡಿದ ನೀವು
ಅವ ನಮ್ಮವ ಅವ ನಮ್ಮವನೆಂದು ಗುಂಪು ಗುಂಪಾಗಿ ಗುದ್ದಾಡುತ್ತೀರಿ

ಆ ಬ್ರಾಹ್ಮಣ್ಯ ಶಿಖಿಗೆ ಅತಿ ಆಚಾರಿಗಳಿಗೆ
ಮತಾಂಧ ಅಭಿಮಾನಿಗಳಿಗೆ ಜನಿವಾರ ಶಿವದಾರಗಳಿಗೆ
ನಾಮ ವಿಭೂತಿಗಳಿಗೆ ಗಂಟೆ ಜಾಗಟೆ ಹೂ ಪತ್ರೆ ಜಾತ್ರೆ ಪರಿಷೆಗಳಿಗೆ
ಸಿಗದ ರೀತಿಯಲ್ಲಿ ಅವನು

ಈ ನಿಮ್ಮ ಶೂದ್ರ ಪ್ರಜ್ಞೆಗೆ ದಲಿತ ಧೋರಣೆಗೆ
ಕಪ್ಪು ಮಾತುಗಳಿಗೆ ಎಡಗೈ ಬಲಗೈ ಕುಸ್ತಿಗಳಿಗೆ ಸಿಗಲಿಲ್ಲ
ಸಮಕಾಲೀನ ಪ್ರಜ್ಞೆಯ ಕಾಲಿಗೂ ಸಿಗದ
ಮಣ್ಣ ವಾಸನೆಯ ಮೂಗಿಗೂ ಹತ್ತದೆ
ಲಿಂಗಭಕ್ತಿಯ ಅನಂಗನಂಗಕ್ಕೂ ದಕ್ಕದೆ

ವರಕವಿ ಗಿರಿಕವಿ ಪಟ್ಟಭದ್ರ ಬಿರುದು ಬಾವಲಿಗಳಿಗು ಮರುಳಾಗದೆ
ಹೆಸರಾಂತ ಕೀರ್ತಿ ಕನ್ನೆಗೂ ಒಲಿಯದೆ
ನುಡಿಗಡಣದೊಡವೆಗಳಿಗಂತೂ ಮೈಗೊಡದೆ
ನಿಮ್ಮ ಪ್ರತಿಮೆಗಳಲ್ಲಿ ಮೂರ್ತೀಭವಿಸದೆ
ನಿಮ್ಮ ಸಂಕೇತಗಳ ಕಣ್ಸನ್ನೆಗಳಿಗೆ ಮೋಹಗೊಳ್ಳದೆ

ನಿಮ್ಮ ನಾದದ ಮೋಡಿಗೆ ತಲೆದೂಗದೆ ವಾದಕ್ಕಂತೂ ಎಂದೂ ಜಗ್ಗದೆ
ನಿಮ್ಮ ಸಮಯಸ್ಪೂರ್ತಿಯ ವೇಳೆಯನರಿಯದೆ
ಓಡುತ್ತಿದ್ದಾನೆ ತಪ್ಪಿಸಿಕೊಂಡು
ಹಿಡಿಯಿರಿ ಮಾತು ಬಲ್ಲವರೆಲ್ಲರೂ
ಹಿಡಿಯರೋ ಹಿಡಿಯಿರಿ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...