ಮಳೆಯ ನಾಡಿಗೆ ಬಂದೆನೆ

ಮಳೆಯ ನಾಡಿಗೆ ಚಳಿಯ ನಾಡಿಗೆ
ಹಸಿರ ಕಾಡಿಗೆ ಬಂದೆನೆ
ಹೂವು ಹೂವಿಗೆ ದುಂಬಿ ದುಂಬಿಗೆ
ಮುತ್ತು ಕೊಡುವುದ ಕಂಡೆನೆ
ಚಿತ್ರ ಚಲುವಿಯ ಕಂಡೆನೆ ||

ನೀಲ ಗಗನದಿ ಮೇಘ ಮಯೂರಿ
ಕುಣಿವ ರಾಸವ ಸವಿದೆನೆ
ಒಣಗಿ ಹೋದಾ ಕಣ್ಣ ಹೊಂಡದಿ
ಬಣ್ಣ ತುಂಬಿಸಿ ನಲಿದೆನೆ
ಕಣ್ಣು ಕಣ್ಣೊಳು ಬೆರೆದೆನೆ ||

ಕರಿಯ ಮಣ್ಣಿನ ಕಪ್ಪು ಹುಡಿಗಿಯ
ಕೆಂಪು ಮಣ್ಣಿಗೆ ತಂದೆನೆ
ಜೋಳ ಸಜ್ಜಿಯ ಗಟ್ಟಿ ಹುಡುಗನು
ರಾಗಿ ರೊಟ್ಟಿಯ ತಿಂದೆನೆ
ಹಳೆಯ ಹುಡಿಗಿಯ ಬಿಟ್ಟೆನೆ ||

ಏನು ಏನೊ ಹಾಗೆ ಇದ್ದವ
ಹೀಗೆ ಕೊಳಲನು ಊದಿದೆ
ರಸದ ಬಾಳೆಯ ಗಾನ ತರುಣಿಯ
ಕದ್ದು ಮುಚ್ಚಿ ನೋಡಿದೆ
ಹುಚ್ಚನಾಗಿ ಕೂಡಿದೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡು ಕತೆಗಳು
Next post ಕಾದಲ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…