ಯುದ್ಧಸಮರ್ಥನ ವಾದ

ಸತ್ಯವೆ ಗೆಲ್ಲುವುದು
ಅನೃತವು ಅಲ್ತು
ಇದು ಭವಿಷ್ಯತ್ತು.

ಗೆದ್ದುದೆ ಸತ್ಯ
ಸೋತುದೆ ಮಿಥ್ಯ
ಭೂತದ ರೀತ್ಯಾ.

ವರ್ತಮಾನದೊಳೊ?-
ಸಂಗ್ರಾಮವೆ ಸತ್ಯ
ಶಾಂತಿಯೆ ಮಿಥ್ಯ
ಮಿಗಿಲೆನೆ ಇದರಿತ್ಯರ್ಥಕೆ
ಸಮರವೆ ಮುಖ್ಯ
ಶಾಂತಿಯಸಹ್ಯ.

ಸಂಗ್ರಾಮದೊಳೇ ಸತ್ಯದ ಸುಳಿವು
ಸಂಗಾಮದೊಳೇ ಮಿಥ್ಯೆಯ ಅಳಿವು
ನನ್ನಿ ಯಾಸೆ ಜನಕೆಂದಿನವರೆಗೋ
ಆ ವರೆಗೂ ಹೋರಾಟವು ಸಿದ್ಧ
ಇದು ಸತ್ಯೋಪಾಸನೆ ಶುದ್ಧ
ಇದಕೆನುವರು ಯುದ್ಧ.

ಈ ಯುದ್ಧ ಸಮರ್ಥನವಾದ
ಓದುವಗೆಸಗಲಿ ಮೋದ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾತಂತ್ರ್ಯ ಎಂದರೇನು
Next post ಉಂಡುಂಡು ಮಲಗೋ ನಂಜುಂಡ ಅಯ್ಯ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…