Home / ಕವನ / ಕವಿತೆ / ಸ್ವಾತಂತ್ರ್ಯ ಎಂದರೇನು

ಸ್ವಾತಂತ್ರ್ಯ ಎಂದರೇನು

ಅವರು ಹೆತ್ತು ಹೆತ್ತು ನಲುಗಿದ ಹೆಣ್ಣುಗಳು
ದುಡಿದು ದುಡಿದು ಸವೆದು ಹೋದ ದೇಹಗಳು
ಸಹಿಸಿ ಸಹಿಸಿ ಸುಣ್ಣವಾದ ಅವರ ಮನಸುಗಳು
ಸುತ್ತಲೂ ಎತ್ತರೆತ್ತರದ ಪಹರೆ ಗೋಡೆಗಳು
ಉಸಿರುಗಟ್ಟಿಸುವ ನಿಯಮಗಳು
ನಡುವೆ ಸಮಾಧಿಯಾದ ಬದುಕು.
ಗೋಡೆಯಾಚೆ ತೂಗುತ್ತಿದೆ ನೋಡು
ನಿರಂತರ ತಲ್ಲಾಖಿನ ಕತ್ತಿ
ಅದು ಯಾವಾಗ ಬೇಕಾದರೂ
ಅವಳ ಕತ್ತು ಕೊಯ್ಯುತ್ತದೆ.
ಪ್ರಪಂಚದ ಓದು ಅವಳಿಗೇಕೆ?
ಖುರಾನ್ ಓದು ಸಾಕು.
ಧರ್‍ಮ ಉಸ್ತುವಾರಿಯ ನಡುವೆ
ನಲುಗಿದ ಅವಳ ಬಾಲ್ಯ,
ನಾಟಿ ಕೋಳಿಗೆ ದಕ್ಕುವ
ವಿವಿಧ ಕಾಳಿನ ವೈವಿಧ್ಯ
ಹೆಕ್ಕಿ ತಿನ್ನುವ ಅವಕಾಶ
ಫಾರಂ ಕೋಳಿಗೆ ಎಲ್ಲಿ?
ಹಾಕಿದ ಫೀಡ್ಸ್, ನಿಂತ ನೀರನ್ನೇ ಕುಡಿದು,
ಪಂಜರದಲ್ಲಿ ಬಂಧಿ ಅವಳಿಗೆ
ಹೇಗೆ ದಕ್ಕಿತು ಸ್ವಾತಂತ್ರ್ಯ
ಬೆಳ್ಳಗೆ ಫಾರಮ್‌ ಕೋಳಿಯಂತಹ
ಬಿಳಿ ಹೆಂಡತಿ ಅವನ ಹೆಮ್ಮೆಯ ಆಯ್ಕೆ ನಿಜ.
ಇವಳಲ್ಲ, ಇನ್ನೊಬ್ಬಳು ಇದ್ದೇ ಇದೆಯಲ್ಲ!
ನಾಲ್ಕರತನಕದ ಗಡುವು ನಿರಾಳ
ಫಾರಂ ಕೋಳಿಗೆ ಕತ್ತಲ
ಗವಿಯ ಇಕ್ಕಟ್ಟಿನ ಬದುಕು
ಸೂರ್‍ಯ ಕಿರಣ ತಾಕದೇ
ವಿದ್ಯುತ್‌ ಬಲ್ಬಿನ ಬೆಳಕು
ಯಾವ ವಸಂತದ ರುಚಿಯೂ ಕಾಣದಿರುವ
ಅದರ ಬದುಕು ನಿರ್‍ಬಂಧಿತ
ಸರಪಳಿಗಳು, ಸರಹದ್ದುಗಳ ಮಧ್ಯ
ಶುದ್ಧ ಗಾಳಿ, ಬೆಳಕು ನಿಶಿದ್ಧ ವಲಯದಲಿ
ಅರಳಲಾರದೇ, ಮುದುಡಿದ ಕೆಂಪು ತಾವರೆ
ಚೌಕಟ್ಟಿನಲಿ ಬಂಧಿತ
ಕಪ್ಪು ಬಿಳುಪಿನ ಭಾವಚಿತ್ರದಲ್ಲಿ
ಮೂಡಲಾರದು ವೈವಿಧ್ಯತೆಯ ಬಣ್ಣಗಳು,
ಆಯ್ಕೆಯಿಲ್ಲ, ಇಚ್ಛೆಯಿಲ್ಲ.
ಕತ್ತಲ ಗವಿಯಲ್ಲಿ ಬೇತಾಳ
ಕಿಟಕಿಯಾಚೆ ಪರದೆ ಸರಿಸಿ ಇಣುಕಿದರೆ,
ಶೂನ್ಯ ತುಂಬಿದ ಆಕಾಶದಲ್ಲಿ
ದುಃಖದ ಕಾರ್‍ಮೋಡ ಚೆಲ್ಲಾಡಿ
ಆದರೂ ರೆಕ್ಕೆ ಪುಕ್ಕ ಹಚ್ಚಿಕೊಂಡು ಆಕಾಶದಲ್ಲಿ
ಹೂರ್‌ಪರಿ’ಯಂತೆ ಹಾರುತ್ತೇನೆ.
ಬಂಧನದ ಸರಪಳಿ ಕಿತ್ತೆಸೆದು ಬೆಳ್ಳಕ್ಕಿ
ನಿರಾಂತಕ ಹಾರಾಡುತ್ತೇನೆ.
ನಾನು ಅನುಭವಿಸಿದ ಬಂಧನದ ನರಕಯಾತನೆ
ಕೆಲ ದಿನಗಳಾದರೂ ಅವನೂ ಅನುಭವಿಸಲಿ
ಆಗ ತಿಳಿಯುತ್ತದೆ ಅವನಿಗೆ
ಸ್ವಾತಂತ್ರ ಎಂದರೇನೆಂದು.
*****
(ಹೂ‌ರ್ ಪರಿ-ದೇವಕನ್ಯೆ)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...