Home / ಕವನ / ಕವಿತೆ / ಸ್ವಾತಂತ್ರ್ಯ ಎಂದರೇನು

ಸ್ವಾತಂತ್ರ್ಯ ಎಂದರೇನು

ಅವರು ಹೆತ್ತು ಹೆತ್ತು ನಲುಗಿದ ಹೆಣ್ಣುಗಳು
ದುಡಿದು ದುಡಿದು ಸವೆದು ಹೋದ ದೇಹಗಳು
ಸಹಿಸಿ ಸಹಿಸಿ ಸುಣ್ಣವಾದ ಅವರ ಮನಸುಗಳು
ಸುತ್ತಲೂ ಎತ್ತರೆತ್ತರದ ಪಹರೆ ಗೋಡೆಗಳು
ಉಸಿರುಗಟ್ಟಿಸುವ ನಿಯಮಗಳು
ನಡುವೆ ಸಮಾಧಿಯಾದ ಬದುಕು.
ಗೋಡೆಯಾಚೆ ತೂಗುತ್ತಿದೆ ನೋಡು
ನಿರಂತರ ತಲ್ಲಾಖಿನ ಕತ್ತಿ
ಅದು ಯಾವಾಗ ಬೇಕಾದರೂ
ಅವಳ ಕತ್ತು ಕೊಯ್ಯುತ್ತದೆ.
ಪ್ರಪಂಚದ ಓದು ಅವಳಿಗೇಕೆ?
ಖುರಾನ್ ಓದು ಸಾಕು.
ಧರ್‍ಮ ಉಸ್ತುವಾರಿಯ ನಡುವೆ
ನಲುಗಿದ ಅವಳ ಬಾಲ್ಯ,
ನಾಟಿ ಕೋಳಿಗೆ ದಕ್ಕುವ
ವಿವಿಧ ಕಾಳಿನ ವೈವಿಧ್ಯ
ಹೆಕ್ಕಿ ತಿನ್ನುವ ಅವಕಾಶ
ಫಾರಂ ಕೋಳಿಗೆ ಎಲ್ಲಿ?
ಹಾಕಿದ ಫೀಡ್ಸ್, ನಿಂತ ನೀರನ್ನೇ ಕುಡಿದು,
ಪಂಜರದಲ್ಲಿ ಬಂಧಿ ಅವಳಿಗೆ
ಹೇಗೆ ದಕ್ಕಿತು ಸ್ವಾತಂತ್ರ್ಯ
ಬೆಳ್ಳಗೆ ಫಾರಮ್‌ ಕೋಳಿಯಂತಹ
ಬಿಳಿ ಹೆಂಡತಿ ಅವನ ಹೆಮ್ಮೆಯ ಆಯ್ಕೆ ನಿಜ.
ಇವಳಲ್ಲ, ಇನ್ನೊಬ್ಬಳು ಇದ್ದೇ ಇದೆಯಲ್ಲ!
ನಾಲ್ಕರತನಕದ ಗಡುವು ನಿರಾಳ
ಫಾರಂ ಕೋಳಿಗೆ ಕತ್ತಲ
ಗವಿಯ ಇಕ್ಕಟ್ಟಿನ ಬದುಕು
ಸೂರ್‍ಯ ಕಿರಣ ತಾಕದೇ
ವಿದ್ಯುತ್‌ ಬಲ್ಬಿನ ಬೆಳಕು
ಯಾವ ವಸಂತದ ರುಚಿಯೂ ಕಾಣದಿರುವ
ಅದರ ಬದುಕು ನಿರ್‍ಬಂಧಿತ
ಸರಪಳಿಗಳು, ಸರಹದ್ದುಗಳ ಮಧ್ಯ
ಶುದ್ಧ ಗಾಳಿ, ಬೆಳಕು ನಿಶಿದ್ಧ ವಲಯದಲಿ
ಅರಳಲಾರದೇ, ಮುದುಡಿದ ಕೆಂಪು ತಾವರೆ
ಚೌಕಟ್ಟಿನಲಿ ಬಂಧಿತ
ಕಪ್ಪು ಬಿಳುಪಿನ ಭಾವಚಿತ್ರದಲ್ಲಿ
ಮೂಡಲಾರದು ವೈವಿಧ್ಯತೆಯ ಬಣ್ಣಗಳು,
ಆಯ್ಕೆಯಿಲ್ಲ, ಇಚ್ಛೆಯಿಲ್ಲ.
ಕತ್ತಲ ಗವಿಯಲ್ಲಿ ಬೇತಾಳ
ಕಿಟಕಿಯಾಚೆ ಪರದೆ ಸರಿಸಿ ಇಣುಕಿದರೆ,
ಶೂನ್ಯ ತುಂಬಿದ ಆಕಾಶದಲ್ಲಿ
ದುಃಖದ ಕಾರ್‍ಮೋಡ ಚೆಲ್ಲಾಡಿ
ಆದರೂ ರೆಕ್ಕೆ ಪುಕ್ಕ ಹಚ್ಚಿಕೊಂಡು ಆಕಾಶದಲ್ಲಿ
ಹೂರ್‌ಪರಿ’ಯಂತೆ ಹಾರುತ್ತೇನೆ.
ಬಂಧನದ ಸರಪಳಿ ಕಿತ್ತೆಸೆದು ಬೆಳ್ಳಕ್ಕಿ
ನಿರಾಂತಕ ಹಾರಾಡುತ್ತೇನೆ.
ನಾನು ಅನುಭವಿಸಿದ ಬಂಧನದ ನರಕಯಾತನೆ
ಕೆಲ ದಿನಗಳಾದರೂ ಅವನೂ ಅನುಭವಿಸಲಿ
ಆಗ ತಿಳಿಯುತ್ತದೆ ಅವನಿಗೆ
ಸ್ವಾತಂತ್ರ ಎಂದರೇನೆಂದು.
*****
(ಹೂ‌ರ್ ಪರಿ-ದೇವಕನ್ಯೆ)

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...