ತಮೋಭೀತಿ

ತವಸಿ ಶಿವ ಪಾರ್ವತಿಯ ನಸು ನೋಡುತೆವೆ ಮುಚ್ಚಿ-
ದಂದದೂಳು ಸಂಜೆಯಚ್ಚರಿ ಹೊನ್ನ ಬೆಳಕು
ಮಲೆ ಕಣಿವೆ ಬನ ಸರಸಿಯೆಲ್ಲವೂ ತೇಜಗೊಳೆ
ತುಸಕಾಲ ಬೆಳಗುತಳಿಯಿತು, ಆಯ್ತು ನಸುಕು.

ಕತ್ತಲೆಲ್ಲೆಡೆ ಈಗ-ಇದಿರುಮಲೆ ಕರಗಿತಿಗೊ
ಬಾನಿನೊಳು ಕದಡಿತಿಗೊ-ಬರಿ ಧೂಳುಗುಪ್ಪೆ;
ಇರುಳ ಹಾವಸೆಯಂತೆ ರೂವಳಿದು ತೇಲುತಿವೆ
ಕೆರೆಯ ಕರೆ ಮಾವು ನೇರಿಳೆ ಹೊಂಗೆ ಹಿಪ್ಪೆ.

ಜಗ ಮೆಲ್ಲನಳಿಯುತಿದೆ, ಮುಗಿಲ ಮರೆಯೊಳಗಾರೊ
ನಗುವ ತೆರವಾಯ್ತು ತಾರೆಗಳಟ್ಟಹಾಸ,
ಜೀವಕ್ಕೆ ಬಯಲಾಸೆ ತೀರಿದುದು, ಜನವಿಡುವ
ದೀಪದಿಂ ದೇಶಕ್ಕೆ ಕಿಂಚಿದವಕಾಶ.

ಕಮಲಕೊಕ್ಕರೆಯಿಂದ ಚೆಂದವಿದು, ಬಳಕೆಯಿಂ-
ದೆನಗಿನಿದು ಈ ಸರಸಿ-ಎಂತಾಗುತಿಹುದು!
ಬೂತವಾಡಿಸುತ್ತಿರುವ ರಾಜಕುವರಿಯ ತೆರದಿ
ನೀರ ಜಡೆ ಬಿಚ್ಚಿ ಹರಡಿರೆ ಭೀತಿಯಹುದು!

ಬೆಟ್ಟ ಕೆರೆ ಬನ ಬಾನು ಬಯಲೆಲ್ಲವೊಂದೀಗ,
ನನಗಿವಕು ಮುದದ ಬೇಹರ ತೀರಿತೀಗ.
ಸುತ್ತ ನೋಡೆನ್ನೆ ದೆಗು ದಾಳಿಯಿಡೆ ಸಾರುವೀ
ತಮಕೆ ನಾನೆದೆಗೆಟ್ಟು ಕಾಲ್ತೆಗೆವೆ ಬೇಗ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಣ್ಣ ರೆಪ್ಪೆಯ ಕೆಳಗೆ
Next post ಏನ ಮಾಡಲಿರುವೆ ನೀನು

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…