ಹಾಡಲು ಕೋಗಿಲೆ ಅಭಿಮಾನದಲಿ
ಕನ್ನಡ ಗೀತೆಯನು
ಕುಣಿಯುತ ನವಿಲು ನಾಟ್ಯದಿ ಮರೆಸಿತು
ಕನ್ನಡತನವನ್ನು
ಅರಳಲು ಹೂಗಳು ಮಧುಮಾಸದಲಿ
ಕನ್ನಡ ನೆಲದಲ್ಲಿ
ದುಂಬಿಯ ಸಾಲು ಸಿರಿಗನ್ನಡ ಮಧು
ಹೀರಿವೆ ಒಲುಮೆಯಲಿ
ಕಾರ್ಮೋಡಗಳು ನೀಲಾಂಬರದಲಿ
ತೇಲಿರೆ ನಲಿವಾಗಿ
ಮಲೆ ಸಹ್ಯಾದ್ರಿಯ ಮೋಹಕ ಚೆಲುವಿಗೆ
ಸುರಿದಿದೆ ಮಳೆಯಾಗಿ
ಕೆಸರಿನ ಕೊಳದಲಿ ನೈದಿಲೆ ಸುಮಗಳು
ನಗುತಿರೆ ಚೆಲುವಾಗಿ
ಹುಣ್ಣಿಮೆ ಚಂದಿರ ಮೋಹಿತನಾದನು
ಸಂಪ್ರೀತಿಯ ಮನದಿ
ಕನ್ನಡ ನಾಡಿನ ಸುಂದರ ಚೇತನ
ಕಣ್ಮನ ಸೆಳೆಯುವಲಿ
ಸ್ಫೂರ್ತಿಯ ನೆಲೆಯಲಿ ಕವಿತೆಯ ಬರೆದಿಹೆ
ಕವಿ ನಾನಾಗುತಲಿ
*****