ಅಮರ

ಇದು ಹರಿವ ನೀರು
ಮೂಗು ಹಿಡಿದು ಮೂರು ಮುಳುಗು ಗಂಗಾಸ್ನಾನ
ತಿರುಪತಿ ಬ್ರ್ಯಾಂಡ್ ತಲೆ ಮೇಲ್ಕೋಟೆ ಮೂರ್‍ನಾಮ
-ಎಲ್ಲ ನೋಡುವ ಮೌನ ಮುಗುಳ್ನಗೆಯ ನೀರು.
ದಂಡೆಯಲಿ ಮಂಡಿಯೂರಿ ಮಂತ್ರ ಪಠಿಸುವ
ನೀರಿನ ನಿರಿಗೆಗೆ ಗರಿಗೆದರುವ ಬೆಲೆಗಟ್ಟುವ
ಜೀವರ ಬಳಿ ತೆವಳಿ ಕಂಪು ಮಾಡುತ್ತ
ಕಾಲ
ಹಿಡಿದೆಳೆದು ಮುಸಿ ಮುಸಿ
ಮೀಸೆ ಕುಣಿಸುವ ಸಹಜ ಠೀವಿ
ಮಂತ್ರದಂಡ ಬೇಕಿಲ್ಲದ ಮಹಾ ಮಾಯಾವಿ!

ಸಿಟ್ಟು ಬಂದರೆ ಇನ್ನು ಕಟ್ಟುಕಟ್ಟಳೆಯೆಲ್ಲಿ?
ದಡದ ಮಣ್ಣೆಲ್ಲ ಕೊಳೆತಮಂಡಲ ಕಡಿದ ಮೈ.
ಕ್ಷಣ ಕ್ಷಣಕ್ಕೆ ಬೆಳೆಯುವ ಕೈಬೆರಳು
ಉಗುರು; ಬೇರಿಗೆ ಉರುಳು.

ಬೆಳೆಯುತ್ತ ಬಲಿಯತ್ತ
ತೊಟ್ಟು ಸಡಿಲಿದ ಫಲಕ್ಕೆ ದುರ್‍ಬೀನು ಪತ್ತೆ
ರೊಚ್ಚಿಗೆ ಬೆಚ್ಚಿ ಬಿದ್ದವೆಷ್ಟೋ;
ಕಚ್ಚೆ ಹಿಡಿದು ದಡಬಡಿಸಿ ಎದ್ದೆದ್ದು ಬಿದ್ದು ಕೊಚ್ಚಿ ಹೋದವೆಷ್ಪೋ!
ಏನು ಹೇಳುವುದು ಮುಂದೆ?
ಕಡೆಗೆ ಉಳಿಯುವುದು ಬರೀ ನೆನಪು:
ದೊಕ್ಕರು ಬಿದ್ದ ನೆಲ ; ಅಲ್ಲಲ್ಲಿ ಅಸ್ತಿತ್ವ ಉಗ್ಗಡಿಸುವ ಜಲ;
ಹೊರ ಬಂದ ನೆಣ ; ಮರ ಮಸಣ ;
ಹದ್ದುಗಳಿಗೆ ಹಬ್ಬವೋ ಹಬ್ಬ :
ಗಬ್ಬ ಹತ್ತಿದ ಕಡಸು ತುರುಸು
ಮನದ ತಂಬೆಲ್ಲ ಬಾಣ ಬಿರುಸು.
ಪಾಪ! ಯಾವ ದಿಬ್ಬದ ಮೇಲೆ ಕದ್ದು ಹೊಂಚುತ್ತಿದೆಯೊ
ಸಹಜ ಸಂಚಿನ ಚುಂಚು!

ಸುಳ್ಳಲ್ಲ, ದಾರಿಗತ್ತಲಲ್ಲಿ ಹತ್ತಿ ಉರಿಯತ್ತವೆ ಲಾಂದ್ರ
ಎಣ್ಣೆ ಇದ್ದಷ್ಟು ಬೆಳಕು ಬೀದಿ,
ಸಂತೆ ಹಾದಿಯ ಕಾದ ಕಳ್ಳ ಇದ್ದಕ್ಕಿದ್ದಂತೆ ಅಮರಿ
ಅಡ್ಡಗಟ್ಟುವ ಪರಿ-
ಭೂತ ಭೇತಾಳಗಳ ವಿಜೃಂಭಿತ ಛತ್ರಿ ಚಾಮರ
ನೆಲಕ್ಕಂಟಿ ಬೇರಿಳದ ಗಾದಿ.

ಮೂಳೆ ಮೈ-
ಗಳ ಕುಣಿತ ಹುಲಿವೇಷ
ಕೊಂಬು ಕಹಳೆ ತಮ್ಮಟೆ ಆರ್‍ಭಟೆ
ಕತ್ತಿಗೆ ರೋಟಿ ಕೋಲು ಕಟಟಿದ ತೋಟಿ*
ಚಿತ್ತೈಸುವಾಗ ಕುಣಿಯುತ್ತ, ನೆಲಕ್ಕೆ ನಡುಗು ಒಳತೋಟಿ.

ಮೈ ತಂಬ ಸೆರಗು ಹೊದ್ದು ಬಾಳಿದರೂ ತಪ್ಪಿತೆ
ಸೀತಾ ಸಾಕ್ಷಾತ್ಕಾರ?
ಹುಟ್ಟಿಗೆ ಸಾವೊಂದೇ ಶಾಶ್ವತ ಪರಿಹಾರ
ಅದೇ ಅಮರ.
*****

*ತೋಟಿ -ಎಂಬುದು ಹಳ್ಳಿಯ ಕಡೆ ಹಾಕುವ ಒಂದು ವೇಷ. ಹಬ್ಬ ಹರಿದಿನಗಳಲ್ಲಿ ಭಯಂಕರ ಮೀಸೆಯೊಂದಿಗೆ ಈ ವೇಷ ವಾದ್ಯ ಶಬ್ಬಕ್ಕನುಗುಣವಾಗಿ ಕುಣಿಯುತ್ತ ಬೀದಿಯಲ್ಲಿ ಸಾಗುತ್ತದೆ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...