ಕನ್ನಡಿಗರು ನಾವು

ಕನ್ನಡಿಗರು ನಾವು ಕನ್ನಡಿಗರು;
ಕರ್ಣನಿಗೂ ಕಡಿಮೆ ಇರದ
ದಾನಶೂರರು ನಾವು ಕನ್ನಡಿಗರು!
ಧೀಮಂತರು ನಾವು ಕನ್ನಡಿಗರು
ಕಾವೇರಿಯ ಉಳಿಸಿಕೊಳದ
ಹೋದ ಶಕ್ತಿ ಗಳಿಸಿಕೊಳದ
ಮಾನ ಹೋದರೂನು ಮಾನ
ಉಳಿದುದಂತೆ ನಟಿಸುತಿರುವ
ಧೀಮಂತರು ನಾವು ಕನ್ನಡಿಗರು!
ಸ್ನೇಹಪರರು ನಾವು ಸ್ನೇಹಪರರು
ತಾಯ ಭಾಷೆ ಅಳಿದರೂನು
ನಮ್ಮ ತನವ ಮರೆತರೂನು
ಅನ್ಯರೊಡನೆ ಅನ್ಯಭಾಷೆ
ಆಡಿ ಕಲೆತು ನಲಿಯುವಂತ
ಸ್ನೇಹಪರರು ನಾವು ಕನ್ನಡಿಗರು!
ನೀತಿವಂತರು ನಾವು ಧರ್ಮಭೀರರು;
ನಮ್ಮ ತಾಯ್ಗೆ ನಮ್ಮ ಮೆಯ್ಗೆ
ಇರದಿರೇನು ತುಂಡು ಬಟ್ಟೆ
ಪರರ ತಾಯೆ ರೇಷ್ಮೆ ವಸ್ತ್ರ
ಉಡಿಸುತಲೀ ತಣಿಯುವಂತ
ನೀತಿವಂತರು ನಾವು ಕನ್ನಡಿಗರು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೈದ್ಯ ಮತ್ತು ಅವನ ರೋಗಿ
Next post ಮಹಾಕವಿ ಕುಮಾರವ್ಯಾಸನಿಗೆ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…