ಹೊಸ ಬೆಳಗು

ಶತ ಶತಮಾನಗಳಿಂದ
ಅದೇ ದಡ
ಅದೇ ಕಡಲು
ಕಡಲ ಸಿಟ್ಟಿಗೆ
ಮತ್ತೆ ಮತ್ತೆ
ಹಲ್ಲೆಗೊಳಗಾಗುವ
ದಡದ ಒಡಲು.

ಕಬಂಧ ಬಾಹುಗಳ ಚಾಚಿ
ದಡವನೇ ಬಾಚಿ
ನುಂಗುವ ಹುನ್ನಾರ ಕಡಲಿನದು

ದೈತ್ಯ ಕಡಲಲೆ
ಎಷ್ಟಾದರೂ ತಟ್ಟಲಿ
ಹೇಗಾದರೂ ಮುಟ್ಟಲಿ
ಮತ್ತೆ ಮತ್ತೆ ಬೆನ್ನಟ್ಟಲಿ
ಒಂದಿಷ್ಟೂ ಬೇಸರಿಸದೆ
ಮೌನದಲಿ ನಿಂತು
ಎಲ್ಲ ಸಹಿಸುವ
ನಿರ್ಲಿಪ್ತ ನೀತಿ ದಡದ್ದು

ಕಡಲ ಕ್ರೌರ್ಯ ಕಡಲಿಗೆ
ದಡದ ಸಹನೆ ದಡಕ್ಕೆ
ಕಡಲು ಸೊಕ್ಕಿ ಭೋರ್ಗರೆದು

ಮತ್ತೆ ಮತ್ತೆ
ದಡವನಪ್ಪಳಿಸುತ್ತದೆ
ಏನಾದರೇನು? ಎಂತಾದರೇನು?
ದಡ ತಟಸ್ಥ ನಿಲ್ಲುತ್ತದೆ.

ನೋಡಿದೂ ಮುಗಿಸಿಬಿಡುವೆನೆಂಬ
ಠೇಂಕಾರ ಕಡಲಿನದು
ಎಷ್ಟು ನೋವಾದರೇನು?
ಪ್ರತಿಯೊಂದು ರಾತ್ರಿಗೂ
ಒಂದು ಹೊಸ ಬೆಳಗಿಲ್ಲವೇ?
ಮತ್ತ ಅರಳುವೆನು
ಎಂಬ ಆಶಾವಾದ
ಸೋತು ನಿಂತ ದಡದ್ದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಜ
Next post ಮಾನವ ನಿರ್ಮಿಸಿದ ಅತಿಮಾನವ ಯಂತ್ರ ರೋಬಟ್

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…