Home / ಕವನ / ಕವಿತೆ / ನಂಬಲೆಂತು?

ನಂಬಲೆಂತು?

ರಾಗ ಧನ್ಯಾಸಿ- ಆದಿ ತಾಳ

ನಂಬಲೆಂತು ನಾ ನೋಡುವ ಮುನ್ನ
ಯದುಕುಲದಾ ಲೀಲೆಯ ನಿನ್ನ? ||ಪಲ್ಲ||
ನೋಡದೆ ನಂಬಲು ಬಲ್ಲವನಲ್ಲ,
ನೋಡಿಸಿ ನಂಬಿಸೊ ಬಲ್ಲವ ನಲ್ಲ! ||ಅನು||

೧ನನ್ನ ಮನದ ಮೋಹಮೇಕೆ ಹೀರೆ?
೨ಏಕೆದೆಯಾನೆಯ ಮದ ಮುರಿಯೆ?
೩ಏಕೆ ಕನಲ ಕುದುರೆಯ ಕೊಲಲೇರೆ?
೪ಬಿಗಿತದ ಕತ್ತೆಯ ತಿರ್ರನೆ ತರಿಯೆ? ||೧||

೫ಎದೆಯ ಬೆದೆಯ ಹಿಳಿಲನೇಕೆ ಹಿಳಿಯೆ ?
೬ಕಪಟದೇಕೆ ರೆಕ್ಕೆಯ ಕೀಳೆ?
೭ಹಗೆಯ ಹಾವಿನೇತಕೆ ಹೆಡೆ ತುಳಿಯೆ?
೮ಸೆಳೆಯಾಸೆಯ ಸುಳಿಯನೇಕೆ ಸೀಳೆ? ||೨||

ನಿನ್ನಡಿ ಹಂಬಲ ಹಸವ ಮೇಸೆಯ?
ಕೊಳಲಾಗದೆ ಬಿದಿರೆದೆಯೆನ್ನ?
೯ಆಲ ಸಾಲದೇನೆನ್ನೆದೆಯಾಸೆಯ ?
೧೦ಎತ್ತೆ ಏಕೆ ಪಾಪದ ಮಲೆಯನ್ನ? ||೩||

ಡಂಬ ಭಕ್ತಿಯೆನ್ನೆದೆಯಿಂ ಮಾಣದೆ,
೧೧ಮಘವನ್ಮಖ ಮಾಣಿಸಿ ಗುಣವೇಂ?
ನನ್ನ ನಯನದಿ ಸದಾ ನಿನನಾನದೆ,
೧೨ಯಮುನೆಯ ತೇಲಿನ ನೆಳಲಲಿ ತಣಿವೇಂ? ||೪||

೧೩ಹೂವಿನಾಸೆಯೇ? ಪ್ರೇಮದ ಮೊಗಸನೆ
ಸೂಸಿ ಹೂವಿಸೇಕೆದೆಯೆನ್ನ?
೧೪ನನ್ನೆದೆಯೊಗೆಯದೆ ಪಾತಕಿಯಗಸನೆ?
೧೫ಬಾಗಿಹೆ, ನೆಟ್ಟನೆ ನೆಗಹೇಕೆನ್ನ? ||೫||

ನನ್ನೆದೆಯಾನ್ಮೆಯ ೧೬ಮಲ್ಲನ ಮುರಿಯದೆ,
೧೭ಹರಿಯದೆದೆಯ ಹಿಂಸೆಯ ಬಿಲ್ಲ,
ಪಾಪಪುರುಷ ಕಂಸನಿರವನಿರಿಯದೆ,
ಬಲ್ಲೆನೆ ಬಿಲ್ಲಿನ ಹಬ್ಬದ ಗೆಲ್ಲ? ||೬||

ಗೊಲ್ಲ ಗೊಲ್ಲತಿಯರಲ್ಲಿಯೆ ಸಾಕೆನೆ
ಸಲ್ಲಿಸಿದೆಯೊ ೧೮ಮಲ್ಲಣಿಯೆಲ್ಲ?
ಹೊಲ್ಲ ಹೊಲ್ಲದಲಿ ತಲ್ಲಣಿಪೇಕೆನ
ಗೂಲ್ಲೆ ಮೆಲ್ಲಡಿಯ ಪಲ್ಲನದೊಲ್ಲ? ||೭||

ಆದೆಯ ರಾಧೆಯ ಹೃದಯಾರಾಧನ?
ಈಯೆಯೇಕೆ ನಿನ್ನಡಿ ಸಾರೆ?
ಕಂಬನಿಯಿಂಬಿಗನೆಂಬುದೆ ಸಾಧನ-
ಅಂಗಲಾಚಿ ಕರೆವೆನೇಕೆ ಬಾರೆ? ||೮||

ನನ್ನೆದೆ ಯದುಕುಲದಲಿ ಕಂಬನಿಯಾ
ಕೂಲದಿ ಬಾಲಲೀಲೆಯ ನಿನ್ನ
ಮರಳಿ ಮೆರಸದಿರೆ, ಕನಸಿನ ಗನಿಯಾ
ಕಾಲನನಗೆಯಲಳನವೆ ಅಕಟೆನ್ನ? ||೯||
*****
೧ ಪೂತನಿ
೨ ಕುವಲಯಾನಪೀಡನೆಂಬ ಆನೆ
೩ ಕೇತಿ ಎಂಬ ಕುದುರೆ
೪ ಧೇನುಕನೆಂಬ ಕತ್ತೆ
೫ ಅರಿಷ್ಟನೆಂಬ ಗೂಳಿ
೬ ಬಕಾಸುರ
೭ ಕಾಲಿಯನೆಂಬ ನಾಗ
೮ ತೃಣಾವರ್‍ತ
೯ ಭಾಂಡೀರವೆಂಬ ಆಲದ ಮರ
೧೦ ಗೋವರ್ಧನೋದ್ಧಾರ
೧೧ ಇಂದ್ರಯಜ್ಞ ನಿಷೇಧ
೧೨ ಆಕ್ರೂರನಿಗೆ ಯಮುನಾ ನದಿಯಲ್ಲಿತ್ತ ದರ್‍ಶನ
೧೩ ಮಾಲಾಕಾರನಿಂದ ಹೂವನ್ನು ಕೊಂಡುದು
೧೪ ಮಥುರೆಯಲ್ಲಿ ಅಗಸನನ್ನು ಎದುರ್‍ಗೊಂಡುದು
೧೫ ಕುಬ್ಜೆ
೧೬ ಜಾಣೂರ
೧೭ ಧನುರ್‍ಭಂಗ
೧೮ ರಾಸಕ್ರೀಡೆ

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...