ಎತ್ತ ಸಾಗಿದೆಯೊ ಕನ್ನಡ ರಥವು

ಎತ್ತ ಸಾಗಿದೆಯೊ ಕನ್ನಡ ರಥವು
ತಿಳಿಯುತಿಲ್ಲವಲ್ಲ
ಹಿಂದಕೊ ಮುಂದಕೊ ಬೆಟ್ಟಕೊ ಕಡಲಿಗೊ
ಅಯೋಮಯವು ಎಲ್ಲ || ಪ ||
ಕನ್ನಡಕ್ಕೇಳು ಜ್ಞಾನಪೀಠಗಳು
ಬೀಗುತಿರುವೆವಲ್ಲಾ
ಕುಸಿಯುತಲಿರುವ ನೆಲವು ಕಣ್ಣಿಗೆ
ಕಾಣುತಿಲ್ಲವಲ್ಲ
ಕವಿಗಳು ದಾಸರು ಶರಣರು ಸಂತರು
ಕನ್ನಡ ಕಟ್ಟಿದರಲ್ಲಾ
ಇಂತಹ ಚರಿತೆ ಸಾಹಿತ್ಯ ಚರಿತೆಗೆ
ಮೀಸಲಾಯಿತಲ್ಲ
ಶತಶತಮಾನದಿ ಕನ್ನಡ ಜನಪದ
ಉಳಿದು ಬೆಳೆಯಿತಲ್ಲಾ
ಇಂದು ಸಂತೆಯಲಿ ಆಂಗ್ಲ ಮೋಹದಲಿ
ಕುಬ್ಜರಾದೆವಲ್ಲಾ
ಕೋಟಿ ಮಕ್ಕಳನು ಹಡೆದ ಕನ್ನಡತಿ
ಎಲ್ಲರ ಸಲುಹಿದಳಲ್ಲಾ
ಇಂತಹ ತಾಯಿಯ ಪೊರೆವ ಮಕ್ಕಳು
ಇಬ್ಬರೂ ಇಲ್ಲವಲ್ಲಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿರುಕು
Next post ನಂಬಲೆಂತು?

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys