Home / ಲೇಖನ / ಇತರೆ / ನಂಬಿಕೆಯೇ ದೇವರು

ನಂಬಿಕೆಯೇ ದೇವರು

೧೯೯೧ ರಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ನಾನು ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕೆಲಸ ಮಾಡುವ ಅವಕಾಶವೊಂದು ಲಭಿಸಿತ್ತು. ಟಿ.ಪಿ. ವೆಂಕಟರಮಣ ಅವರು ನಮ್ಮ ಮೇಲೆ ಬಹುದೊಡ್ಡ ಸಾರಿಗೆ ಅಧಿಕಾರಿಯಾಗಿದ್ದರು. ಅವರೊಬ್ಬ ಪ್ರಾಮಾಣಿಕ, ದಕ್ಷ, ಸರಳ, ಸಜ್ಜನ ಬಹುದೊಡ್ಡ ಕೆಲಸಗಾರರಾಗಿದ್ದರು! ಅವರು ನನ್ನನ್ನು ಇಲ್ಲಿ ಕೆಲಸ ಮಾಡಲು ಒತ್ತಾಯಿಸಿದ್ದರು.

ಆಗ ನಾನು ಸುಬ್ರಮಣ್ಯ ನಗರದಲ್ಲಿ ಪುಟ್ಟದೊಂದು ಬಾಡಿಗೆ ಮನೆಯಲ್ಲಿ ಬಹಳ ತೊಂದರೆಯಲ್ಲಿ ಕೆಲಸದ ಒತ್ತಡದಲ್ಲಿ ವಿಲವಿಲ ಒದ್ದಾಡುತ್ತಿದ್ದೆ. ಆಗ ನನ್ನವಳು ಒಂದು ದಿನ “ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗಿ ಬರೋಣ ನಮ್ಮ ಕಷ್ಟ ನಷ್ಟ ಅವಮಾನ ಎಲ್ಲ ತೊಲಗುವುದೆಂದು ನನ್ನ ಐದಾರು ಭಾರಿ ಹುರಿದುಂಬಿಸಿದ್ದಳು.

ನನಗೂ ಪ್ರವಾಸದ ಹುಚ್ಚು ಬೇರೆ “ಆಯ್ತು” ಎಂದೆ. ಶುಕ್ರವಾರ ರಾತ್ರಿ ಬೆಂಗಳೂರು ಬಿಟ್ಟು ಶನಿವಾರ ಬೆಳ್ಳಂಬೆಳಿಗ್ಗೆ ಮಕನಸುಕಿನಲ್ಲಿ ರೂಮು ಮಾಡಿ, ತಣ್ಣೀರಿನಲ್ಲಿ ಮುಳುಗೆದ್ದು ಸರತಿ ಸಾಲಿನಲ್ಲಿ ಹೋಗಿ ನಿಂತೆವು… ನೂಕುನುಗ್ಗಲು. “ತಿರುಪತಿ ತಿಮ್ಮಪ್ಪನಿಗೆ ದಾರಿ ಯಾವುದಯ್ಯಾ?” ಅನಿಸಿತು! ತಳ್ಳುನೂಕು… ಹುಟ್ಟಿದ್ದೆಲ್ಲ ನೆನೆಸಿಕೊಂಡೆ….

ಒಂದು ಹಗಲು ಒಂದು ರಾತ್ರಿ ನಿಂತು ನಿಂತೂ… ಕುಂತು ಕುಂತೂ ತಿರುಪತಿ ತಿರುಮಲ ದೇವಸ್ಥಾನದ ಮಂದಿ ನಮಗೆಲ್ಲ ನರಕ ತೋರಿಸಿ ಬಿಟ್ಟರು. ಗುದ್ದಾಟ ತಳ್ಳಾಟ. ಟೀವಿ ತೋರಿಸುವ ಜಾಹಿರಾತು ತೋರಿಸುವ ನೆಪದಲ್ಲಿ ಅವರಿಗೆ ತಂಪು ಪಾನಿಯಗಳು… ಬಿಸ್ಕತ್, ಬ್ರೆಡ್, ಹಣ್ಣುಹಂಪಲು, ಚಾಕಲೇಟ್ಸ್… ಚಿಪ್ಸ್…. ಹೀಗೆ ನಾನಾ ತರತರದ ತಿಂಡಿತೀರ್‍ಥಗಳು ಖರ್‍ಚಾಗಲೆಂದೇ ಜನರನ್ನು ಕುರಿ ಮಂದೆ ಮಲಗಿಸಿದಂತೆ ಇಪ್ಪತ್ತು ನಾಲ್ಕು ತಾಸು, ಮೂವತ್ತಾರು ತಾಸು, ನಲವತ್ತೆಂಟು ಗಂಟೆ ಒಳಗೆ ಕೂಡಿ ಹಾಕಿ ತಿಮ್ಮಪ್ಪನ ಒಂದು ನಿಮಿಷ ನೋಡಲೂ ಬಿಡಲಿಲ್ಲ. ತಳ್ಳಿದರೆ ಮೂರು ಉಳ್ಳಿಕೆ ಬೀಳಬೇಕು ಹಂಗೆ ಬಲವಾಗಿ ನೂಕಿದರು. ಉಸಿರು ಗಟ್ಟಿಸುವ ಸ್ಥಿತಿಗತಿ ನೂಕುನುಗ್ಗಲು! ಇದು ಬೇಕಾ?

“ಥ! ಇಲ್ಲಿಗೆ ಇನ್ನೊಮ್ಮೆ ಬರಬಾರದೆಂದು” ಜೀವ ಬಲು ನೊಂದು ಬೆಂದು ಬಸವಳಿದು ಸೊರಗಿ ಸೋತು ಅಂದು ಆಡಿ ಕೂಗಾಡಿ ಬಿಟ್ಟೆ!

ಸೋಮವಾರ ದಿನ ಕಚೇರಿಯಲ್ಲಿ ಕರ್‍ತವ್ಯದ ಮೇಲಿದ್ದೆ ೧೯೯೨ ರಲ್ಲಿ ನನ್ನಮ್ಮನ ಆಸೆ ಆಣತಿಯಂತೆ ಮತ್ತೆ ತಿರುಪತಿ ತಿಮ್ಮಪ್ಪನ ದರ್‍ಶನಕ್ಕೆ ಅದೇ ಹಿಂಸೆ ಚಿತ್ರಹಿಂಸೆ ನೂಕುನುಗ್ಗಲು ತಳ್ಳಾಟ… “ಥ! ಇನ್ನೊಮ್ಮೆ ಇಲ್ಲಿಗೆ ಬರುವುದು ಬೇಡ!” ಎಂದು ಬೈದಾಡಿ ಕೂಗಾಡಿ ಬಂದಿದ್ದುಂಟು!!

– ಹೀಗೆ ಹತ್ತಾರು ಸಲ ಈಗಾಗಲೇ ಹೋಗಿ ಬಂದಿದ್ದೇನೆ. “ಏನೈತಿ? ಅಂಥಾದೇನೈತಿ?? ಇದೇಕೆ? ಇಲ್ಲಿನ ಗತ್ತುಗಮ್ಮತ್ತು ಏನು..? ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಏನೈತಿ?” ಎಂದು ಪ್ರತಿ ಸಾರಿ ಕೇಳಿಕೊಳ್ಳುತ್ತಿದ್ದೇನೆ.

ಈಗಾಗಲೇ ಮುಡಿ ಬಿಟ್ಟು ತಿರುಪತಿ ತಿಮ್ಮಪ್ಪನ ಬಳಿಗೆ ಹೋಗಲು, ೨೦೧೫ ರ ಡಿಸೆಂಬರ್ ತಿಂಗಳೊಳಗಾಗಿ ಹೋಗಲು, ಮನಸು ಮಾಡಿದ್ದೇನೆ. ಈ ನಿಟ್ಟಿನಲ್ಲಿ ಶತಪ್ರಯತ್ನ ವಿಶ್ವಪ್ರಯತ್ನದಲ್ಲಿದ್ದೇನೆ.

ನಾ ಅಂದುಕೊಂಡಂತೆ ಆಗುವುದು! ನಾ ಹೋಗಿ ಬಂದ ಮೇಲೆ ಅದರ ಸವಿಸವಿ ನೆನಪು ಅನುಭವ ಬರೆಯುವೆ, ಆಗಬಹುದೇ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...