Home / ಕವನ / ಕವಿತೆ / ಹಣಿಯೆಂಬೊ ಭಾಂವಕ

ಹಣಿಯೆಂಬೊ ಭಾಂವಕ

ಹಣಿಯೆಂಬೊ ಭಾಂವಕ ಹೆಣಿಯಂದ ದಂಡೀಯ|
ಮಗ್ಗಿ ತಿರುವಂದ ಮಲಕೀಲಿ| ಸೋ ಎನ್ನೀರೆ ||೧||

ಹುಬ್ಬಂಬು ಭಾಂವಕ ತಿದ್ದೊಂದ ದಂಡೀಯ|
ಗೊನಿಯ ತಿರುವಂದ ಮಲಕೀಲಿ| ಸೋ… ||೨||

ಕಡಗಽವ ಇಡಸ್ಯಾರ ಕಡಗಣ್ಣಿಲಿ ನೋಡ್ಯಾರ|
ಕೊಡವೀಗಿ ತಮಗ ವರನೆಂದ| ಸೋ… ||೩||

ದ್ವಾರ್‍ಯಾಗೋಳಿಡಿಸ್ಯಾರ ಮಾರೀಯ ನೊಡ್ಯಾರ|
ನಾರೀಗಿ ತಮಗ ವರನಂದ| ಸೋ… ||೪||

ಹಸಿಯ ಜಗಲಿಯ ಮ್ಯಾಲ ಒಯ್ದಿಟ್ಟರ ಭಾಸಿಂಗ|
ತಂಗೆವ್ವಾ ಹೋಗಿ ತಗತಾರ| ಸೋ… ||೫||

ತಂಗೀಯವ್ವಾ ಹೋಗಿ ತಗತಾರ ಭಾಸಿಂಗ|
ನಂದಿ ಸೋಪನದ ನಸಲೀಗಿ| ಸೋ… ||೬||

ದಂಡಿ ತಂದಣ್ಣಾಗ ಕುಂಡ್ರೂ ಗದ್ದೀಗ್ಹಾಕಿ|
ಗುಂಡ ಗದ್ದ್ಯಾಣದ ಹೊಲ ಕೊಟ್ಟ| ಸೋ… ||೭||

ಗುಂಡಽನೆ ಗದ್ದ್ಯಾಣದ ಹೊಲ ಕೊಟ್ಟ ತಮ್ಮಾಽಗ|
ದಂಡಿ ತಂದಣಗ ಉಣಕೊಟ್ಟ| ಸೋ… ||೮||
*****

ಈ ಹಾಡಿನಲ್ಲಿ ಸತಿಯ ವಿಷಯದಲ್ಲಿ ಪತಿಗಿರುವ ಅಕ್ಕರತೆ ವರ್ಣಿಸಲ್ಪಟ್ಟಿದೆ. ಹಣೆಗೆ ದಂಡೆಯನ್ನು ಕಟ್ಟಿ ನೋಡುತ್ತಾನೆ. ಕೈಗೆ ಕಡೆಗ, ದ್ವಾರೇ ಮುಂತಾದ ಆಭರಣಗಳನ್ನಿಡಿಸಿ ನೋಡುತ್ತಾನೆ. ಅಷ್ಟಕ್ಕೂ ಸಾಲದೆ ಬಾಸಿಗವನ್ನು ತನ್ನಿರೆನ್ನುತ್ತಾನೆ. ತಂದು ಕೊಟ್ಟವರಿಗೆ ಪಾರಿತೋಷಿಕವನ್ನು ಕೊಡುತ್ತಾನೆ.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧದಂತಿದೆ.

ಶಬ್ದ ಪ್ರಯೋಗಗಳು:- ಭಾಂವಕ್ಕ=ಸ್ಥಾನಕ್ಕೆ. ಗೊನಿ=ಗೊಂಚಲು. ಕೊಡವಿ=ದಸುವುಗಳು. ತಗತಾರ=ತೆಗೆದುಕೊಂಡು ಬಾರೆ. ನಂದಿಸೋಪಾನ=ಪೂರ್ವಕಾಲದಲ್ಲಿ ಪ್ರಚಾರದಲ್ಲಿದ್ದ ಮೆಟ್ಟಿಲುಗಳ ಸಾಲು. ನಸಲೀಗಿ=ನೊಸಲಿಗೆ(ಹಣೆಗೆ). ಗುಂಡುಗದ್ಯಾಣದ ಹೊಲ=ದುಂಡಗಿನ ಆಕಾರದ ಹೊನ್ನಿನ ನಾಣ್ಯಗಳನ್ನು ಕೊಟ್ಟು ಕೊಂಡ ಹೊಲ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...