Home / ಕವನ / ಕವಿತೆ / ಹಣಿಯೆಂಬೊ ಭಾಂವಕ

ಹಣಿಯೆಂಬೊ ಭಾಂವಕ

ಹಣಿಯೆಂಬೊ ಭಾಂವಕ ಹೆಣಿಯಂದ ದಂಡೀಯ|
ಮಗ್ಗಿ ತಿರುವಂದ ಮಲಕೀಲಿ| ಸೋ ಎನ್ನೀರೆ ||೧||

ಹುಬ್ಬಂಬು ಭಾಂವಕ ತಿದ್ದೊಂದ ದಂಡೀಯ|
ಗೊನಿಯ ತಿರುವಂದ ಮಲಕೀಲಿ| ಸೋ… ||೨||

ಕಡಗಽವ ಇಡಸ್ಯಾರ ಕಡಗಣ್ಣಿಲಿ ನೋಡ್ಯಾರ|
ಕೊಡವೀಗಿ ತಮಗ ವರನೆಂದ| ಸೋ… ||೩||

ದ್ವಾರ್‍ಯಾಗೋಳಿಡಿಸ್ಯಾರ ಮಾರೀಯ ನೊಡ್ಯಾರ|
ನಾರೀಗಿ ತಮಗ ವರನಂದ| ಸೋ… ||೪||

ಹಸಿಯ ಜಗಲಿಯ ಮ್ಯಾಲ ಒಯ್ದಿಟ್ಟರ ಭಾಸಿಂಗ|
ತಂಗೆವ್ವಾ ಹೋಗಿ ತಗತಾರ| ಸೋ… ||೫||

ತಂಗೀಯವ್ವಾ ಹೋಗಿ ತಗತಾರ ಭಾಸಿಂಗ|
ನಂದಿ ಸೋಪನದ ನಸಲೀಗಿ| ಸೋ… ||೬||

ದಂಡಿ ತಂದಣ್ಣಾಗ ಕುಂಡ್ರೂ ಗದ್ದೀಗ್ಹಾಕಿ|
ಗುಂಡ ಗದ್ದ್ಯಾಣದ ಹೊಲ ಕೊಟ್ಟ| ಸೋ… ||೭||

ಗುಂಡಽನೆ ಗದ್ದ್ಯಾಣದ ಹೊಲ ಕೊಟ್ಟ ತಮ್ಮಾಽಗ|
ದಂಡಿ ತಂದಣಗ ಉಣಕೊಟ್ಟ| ಸೋ… ||೮||
*****

ಈ ಹಾಡಿನಲ್ಲಿ ಸತಿಯ ವಿಷಯದಲ್ಲಿ ಪತಿಗಿರುವ ಅಕ್ಕರತೆ ವರ್ಣಿಸಲ್ಪಟ್ಟಿದೆ. ಹಣೆಗೆ ದಂಡೆಯನ್ನು ಕಟ್ಟಿ ನೋಡುತ್ತಾನೆ. ಕೈಗೆ ಕಡೆಗ, ದ್ವಾರೇ ಮುಂತಾದ ಆಭರಣಗಳನ್ನಿಡಿಸಿ ನೋಡುತ್ತಾನೆ. ಅಷ್ಟಕ್ಕೂ ಸಾಲದೆ ಬಾಸಿಗವನ್ನು ತನ್ನಿರೆನ್ನುತ್ತಾನೆ. ತಂದು ಕೊಟ್ಟವರಿಗೆ ಪಾರಿತೋಷಿಕವನ್ನು ಕೊಡುತ್ತಾನೆ.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧದಂತಿದೆ.

ಶಬ್ದ ಪ್ರಯೋಗಗಳು:- ಭಾಂವಕ್ಕ=ಸ್ಥಾನಕ್ಕೆ. ಗೊನಿ=ಗೊಂಚಲು. ಕೊಡವಿ=ದಸುವುಗಳು. ತಗತಾರ=ತೆಗೆದುಕೊಂಡು ಬಾರೆ. ನಂದಿಸೋಪಾನ=ಪೂರ್ವಕಾಲದಲ್ಲಿ ಪ್ರಚಾರದಲ್ಲಿದ್ದ ಮೆಟ್ಟಿಲುಗಳ ಸಾಲು. ನಸಲೀಗಿ=ನೊಸಲಿಗೆ(ಹಣೆಗೆ). ಗುಂಡುಗದ್ಯಾಣದ ಹೊಲ=ದುಂಡಗಿನ ಆಕಾರದ ಹೊನ್ನಿನ ನಾಣ್ಯಗಳನ್ನು ಕೊಟ್ಟು ಕೊಂಡ ಹೊಲ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...