Home / ಕವನ / ಕವಿತೆ / ಹಣಿಯೆಂಬೊ ಭಾಂವಕ

ಹಣಿಯೆಂಬೊ ಭಾಂವಕ

ಹಣಿಯೆಂಬೊ ಭಾಂವಕ ಹೆಣಿಯಂದ ದಂಡೀಯ|
ಮಗ್ಗಿ ತಿರುವಂದ ಮಲಕೀಲಿ| ಸೋ ಎನ್ನೀರೆ ||೧||

ಹುಬ್ಬಂಬು ಭಾಂವಕ ತಿದ್ದೊಂದ ದಂಡೀಯ|
ಗೊನಿಯ ತಿರುವಂದ ಮಲಕೀಲಿ| ಸೋ… ||೨||

ಕಡಗಽವ ಇಡಸ್ಯಾರ ಕಡಗಣ್ಣಿಲಿ ನೋಡ್ಯಾರ|
ಕೊಡವೀಗಿ ತಮಗ ವರನೆಂದ| ಸೋ… ||೩||

ದ್ವಾರ್‍ಯಾಗೋಳಿಡಿಸ್ಯಾರ ಮಾರೀಯ ನೊಡ್ಯಾರ|
ನಾರೀಗಿ ತಮಗ ವರನಂದ| ಸೋ… ||೪||

ಹಸಿಯ ಜಗಲಿಯ ಮ್ಯಾಲ ಒಯ್ದಿಟ್ಟರ ಭಾಸಿಂಗ|
ತಂಗೆವ್ವಾ ಹೋಗಿ ತಗತಾರ| ಸೋ… ||೫||

ತಂಗೀಯವ್ವಾ ಹೋಗಿ ತಗತಾರ ಭಾಸಿಂಗ|
ನಂದಿ ಸೋಪನದ ನಸಲೀಗಿ| ಸೋ… ||೬||

ದಂಡಿ ತಂದಣ್ಣಾಗ ಕುಂಡ್ರೂ ಗದ್ದೀಗ್ಹಾಕಿ|
ಗುಂಡ ಗದ್ದ್ಯಾಣದ ಹೊಲ ಕೊಟ್ಟ| ಸೋ… ||೭||

ಗುಂಡಽನೆ ಗದ್ದ್ಯಾಣದ ಹೊಲ ಕೊಟ್ಟ ತಮ್ಮಾಽಗ|
ದಂಡಿ ತಂದಣಗ ಉಣಕೊಟ್ಟ| ಸೋ… ||೮||
*****

ಈ ಹಾಡಿನಲ್ಲಿ ಸತಿಯ ವಿಷಯದಲ್ಲಿ ಪತಿಗಿರುವ ಅಕ್ಕರತೆ ವರ್ಣಿಸಲ್ಪಟ್ಟಿದೆ. ಹಣೆಗೆ ದಂಡೆಯನ್ನು ಕಟ್ಟಿ ನೋಡುತ್ತಾನೆ. ಕೈಗೆ ಕಡೆಗ, ದ್ವಾರೇ ಮುಂತಾದ ಆಭರಣಗಳನ್ನಿಡಿಸಿ ನೋಡುತ್ತಾನೆ. ಅಷ್ಟಕ್ಕೂ ಸಾಲದೆ ಬಾಸಿಗವನ್ನು ತನ್ನಿರೆನ್ನುತ್ತಾನೆ. ತಂದು ಕೊಟ್ಟವರಿಗೆ ಪಾರಿತೋಷಿಕವನ್ನು ಕೊಡುತ್ತಾನೆ.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧದಂತಿದೆ.

ಶಬ್ದ ಪ್ರಯೋಗಗಳು:- ಭಾಂವಕ್ಕ=ಸ್ಥಾನಕ್ಕೆ. ಗೊನಿ=ಗೊಂಚಲು. ಕೊಡವಿ=ದಸುವುಗಳು. ತಗತಾರ=ತೆಗೆದುಕೊಂಡು ಬಾರೆ. ನಂದಿಸೋಪಾನ=ಪೂರ್ವಕಾಲದಲ್ಲಿ ಪ್ರಚಾರದಲ್ಲಿದ್ದ ಮೆಟ್ಟಿಲುಗಳ ಸಾಲು. ನಸಲೀಗಿ=ನೊಸಲಿಗೆ(ಹಣೆಗೆ). ಗುಂಡುಗದ್ಯಾಣದ ಹೊಲ=ದುಂಡಗಿನ ಆಕಾರದ ಹೊನ್ನಿನ ನಾಣ್ಯಗಳನ್ನು ಕೊಟ್ಟು ಕೊಂಡ ಹೊಲ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...