Home / ಕವನ / ಕವಿತೆ / ಕುಳಿರ್ ಮಂಜು

ಕುಳಿರ್ ಮಂಜು

ಉದುರಿಸುತ ಮಣಿ ಮಂಜು | ಮಾಡಿ ಮಲ್ವಾಸುಗಳ
ನೆಲದ ಹಸುರನು ಮುಚ್ಚಿ – ಹರಡಿ ಬಿಳಿ ಬಣ್ಣಗಳ
ಬೆದೆಯನಾರಿಸಿ ತಣ್ಪ | ನೆರಚಿ ಚಳಿ ಹೊದಿಕೆಗಳ
ಹೊದಿಸಿ ನಡುಗುವ ಕುಳಿರ | ನೂಕುತಿದೆ ಕುರುಡಿರುಳ.

ಬೆಟ್ಟಗಳ ನಡುವಿಂದ | ಹರಿದು ಬಹ ಹೊಳೆಯಂತೆ
ಮಂಜಿನೆಳೆ ವಸ್ತ್ರಗಳ | ಹೊದಿಸಿ ಚಳಿ ಮುರಿವಂತೆ
ಆಗಸವೆ ಧರೆಗಿಳಿದು | ಬೆಟ್ಟದಲಿ ನಿಂದಂತೆ
ತೋರುತಿದೆ ಸುತ್ತಲುಂ | ತುಹಿನಗಿರಿ ಬಂದಂತೆ.

ರಸವೇರಿ ಚೆಲುವೆತ್ತು | ಮೈದೋರಿ ಕಾಣುತಿವೆ
ಪೂಗಾಯಿ ಪಣ್ಗಳುಂ | ನುಡಿಗಳಿಗೆ ಸಿಲುಕದಿವೆ
ಸುತ್ತಣ ದಿಗಂತದಲಿ | ಹಿಮದ ರೇಖೆಯ ನಾವೆ
ಮನ ಸೆಳೆದು ಜಗ ಮರೆದು | ಎಲ್ಲೆಲ್ಲು ತೇಲುತಿವೆ.

ಓಡಿಹೋದನು ಚಂದ್ರ | ಹಿಮಗಿರಿಯ ಸೆರೆಯಲ್ಲಿ
ಚಳಿಯ ಹೂದಿಕೆಯ ಸೂರ್ಯ | ಝಳನೀಗಿ ಹಗಲಲ್ಲಿ
ಕುಳಿರ ಕುಣಿತಕೆ ಸೋತು | ಪಣ್ಪಿರಿಯೆ ಮರದಲ್ಲಿ
ಮೈಯುರುಬಿ ನುಡಿಯುತಿವೆ | ಗಿಳಿವಿಂಡು ಮರೆಯಲ್ಲಿ.

ಎಳೆಯ ಹರೆಯದ ವೃದ್ಧ | ರೆಲ್ಲರುಂ ಗಡಗಡನೆ
ನಡುಗುತ್ತ ಬೆನ್ ಬಾಗಿ | ಮೈ ಕುಗ್ಗಿ ಬರುತೊಡನೆ
ಕುಳಿರು ಬರುತಿರೆ ಸಾಗಿ | ಸೂರ್ಯನಲ್ಲೆನುತೊಡನೆ
ಉರಿಗೆ ನೀರೆರೆದಂತೆ | ಸಹಿಸದೆಯೆ ಬಲು ಬೇನೆ.

ಕಾಯ್ಗಟ್ಟಿ ಮೈಯೆಲ್ಲ | ಹುರಿಗಟ್ಟಿ ನವಿರೆಲ್ಲ
ಹಿಮ ತಣ್ಪು ಒಳಗೇರೆ | ರಕುತಮಂ ಹೊರಚೆಲ್ಲಿ
ಕುಳಿರ ಚಲುವಂ ನೋಡೆ | ಮೈಯೊಡೆವ ತೆರನೆಲ್ಲ
ಕೂಪಗೊಂಡಿವೆ ಹಸಿದು | ನಿಮಿರಿ ರೋಮಗಳೆಲ್ಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...