Home / ಕವನ / ಕವಿತೆ / ಕುಳಿರ್ ಮಂಜು

ಕುಳಿರ್ ಮಂಜು

ಉದುರಿಸುತ ಮಣಿ ಮಂಜು | ಮಾಡಿ ಮಲ್ವಾಸುಗಳ
ನೆಲದ ಹಸುರನು ಮುಚ್ಚಿ – ಹರಡಿ ಬಿಳಿ ಬಣ್ಣಗಳ
ಬೆದೆಯನಾರಿಸಿ ತಣ್ಪ | ನೆರಚಿ ಚಳಿ ಹೊದಿಕೆಗಳ
ಹೊದಿಸಿ ನಡುಗುವ ಕುಳಿರ | ನೂಕುತಿದೆ ಕುರುಡಿರುಳ.

ಬೆಟ್ಟಗಳ ನಡುವಿಂದ | ಹರಿದು ಬಹ ಹೊಳೆಯಂತೆ
ಮಂಜಿನೆಳೆ ವಸ್ತ್ರಗಳ | ಹೊದಿಸಿ ಚಳಿ ಮುರಿವಂತೆ
ಆಗಸವೆ ಧರೆಗಿಳಿದು | ಬೆಟ್ಟದಲಿ ನಿಂದಂತೆ
ತೋರುತಿದೆ ಸುತ್ತಲುಂ | ತುಹಿನಗಿರಿ ಬಂದಂತೆ.

ರಸವೇರಿ ಚೆಲುವೆತ್ತು | ಮೈದೋರಿ ಕಾಣುತಿವೆ
ಪೂಗಾಯಿ ಪಣ್ಗಳುಂ | ನುಡಿಗಳಿಗೆ ಸಿಲುಕದಿವೆ
ಸುತ್ತಣ ದಿಗಂತದಲಿ | ಹಿಮದ ರೇಖೆಯ ನಾವೆ
ಮನ ಸೆಳೆದು ಜಗ ಮರೆದು | ಎಲ್ಲೆಲ್ಲು ತೇಲುತಿವೆ.

ಓಡಿಹೋದನು ಚಂದ್ರ | ಹಿಮಗಿರಿಯ ಸೆರೆಯಲ್ಲಿ
ಚಳಿಯ ಹೂದಿಕೆಯ ಸೂರ್ಯ | ಝಳನೀಗಿ ಹಗಲಲ್ಲಿ
ಕುಳಿರ ಕುಣಿತಕೆ ಸೋತು | ಪಣ್ಪಿರಿಯೆ ಮರದಲ್ಲಿ
ಮೈಯುರುಬಿ ನುಡಿಯುತಿವೆ | ಗಿಳಿವಿಂಡು ಮರೆಯಲ್ಲಿ.

ಎಳೆಯ ಹರೆಯದ ವೃದ್ಧ | ರೆಲ್ಲರುಂ ಗಡಗಡನೆ
ನಡುಗುತ್ತ ಬೆನ್ ಬಾಗಿ | ಮೈ ಕುಗ್ಗಿ ಬರುತೊಡನೆ
ಕುಳಿರು ಬರುತಿರೆ ಸಾಗಿ | ಸೂರ್ಯನಲ್ಲೆನುತೊಡನೆ
ಉರಿಗೆ ನೀರೆರೆದಂತೆ | ಸಹಿಸದೆಯೆ ಬಲು ಬೇನೆ.

ಕಾಯ್ಗಟ್ಟಿ ಮೈಯೆಲ್ಲ | ಹುರಿಗಟ್ಟಿ ನವಿರೆಲ್ಲ
ಹಿಮ ತಣ್ಪು ಒಳಗೇರೆ | ರಕುತಮಂ ಹೊರಚೆಲ್ಲಿ
ಕುಳಿರ ಚಲುವಂ ನೋಡೆ | ಮೈಯೊಡೆವ ತೆರನೆಲ್ಲ
ಕೂಪಗೊಂಡಿವೆ ಹಸಿದು | ನಿಮಿರಿ ರೋಮಗಳೆಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...