ಭೂಮಿ ನಾನು

ಚಂದ್ರ ಕಾಯುತ್ತಾನೆ ರಾತ್ರಿಗಾಗಿ
ಹಗಲು ಅವನಿಗೆ ಬೆಲೆಯಿಲ್ಲ
ಸೂರ್‍ಯ ಕಾಯುತ್ತಾನೆ ಹಗಲಿಗಾಗಿ
ರಾತ್ರಿ ಅವನಿಗೆ ಹುಗಲಿಲ್ಲ
ಭೂಮಿ ಕಾಯುತ್ತಾಳೆ ಈ ಇಬ್ಬರಿಗಾಗಿ
ಸರಿದಿಯಲ್ಲಿ ಬರುವ ಈ ಪ್ರಿಯಕರರ ಪಾಳಿಗಾಗಿ
ಒಬ್ಬನದೋ ಪ್ರಖರ ಪುಂಜಧಾರೆ
ಇನ್ನೊಬ್ಬ ಅಮೃತ ಸಿಂಚನದ ಶಿಖರ
ಮೀರೆ ಈ ಇವಳಿಗೆ ಸಡಗರ ಸಂಭ್ರಮ
ಅಮಾವಾಸ್ಯೆಗೊಮ್ಮೆ ಮೈ ನಡುಕ
ಇಬ್ಬರಲಿ ಒಬ್ಬನ ಪತ್ತೆಯೇ ಇಲ್ಲ.
ಸದ್ಯ ಸೂರ್‍ಯನಿಗಿಲ್ಲ ಅಮಾವಾಸ್ಯೆ ನಿಟ್ಟುಸಿರು!
ಹೀಗೆ….. ಸೂರ್‍ಯಚಂದ್ರರ ಕಡೆಗೇ ಕಣ್ಣಾಗಿ
ಬಾಯಿ ಬಿಡುವ ಇವಳ ಅಂತರಂಗ ಪಿಸುಗುಟ್ಟಿತು
ನಿನ್ನೊಳಗೇ ನಾನಿದ್ದೇನೆ ಬೆಂಕಿ ಬೆಳಕು ಲಾವಾ
ಹರಿಯ ಬಿಡು ಹೊರಗೆ
ಅರಿವಾಗಲಿ ಅವರಿಗೆ
ಹಾಗೆಂದೇ ಈಗೀಗ ಇವಳೂ ನಡುಗುತ್ತಾಳೆ
ಗುಡುಗುತ್ತಾಳೆ ಬಾಯಿ ತೆರೆಯುತ್ತಾಳೆ ಬೆಂಕಿ
ಹರಿಸುತ್ತಾಳೆ ಆದರೂ ಮೆರೆಯುತ್ತಾಳೆ
ಕ್ಷಮಯಾ ಧರಿತ್ರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಳಿರ್ ಮಂಜು
Next post ಕಪ್ಪು ಕೋಗಿಲೆ ಕೆಂಪಾಯ್ತು

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…