ಕಪ್ಪು ಕೋಗಿಲೆ ಕೆಂಪಾಯ್ತು

ಕಪ್ಪು ಕೋಗಿಲೆ ಕೆಂಪಾಯ್ತು
ಸಂಭ್ರಮದಾ ಮನ ಬೆವೆತೋಯ್ತು

ಕೆಂಪು ಸೂರ್‍ಯ ಕೆಂಪಾಗಿಯೆ ಉಳಿದ
ಹುಣ್ಣಿಮೆ ಚಂದ್ರ ಕೆಂಪಾದ
ಗುಡುಗು ಸಿಡಿಲು ಮಳೆ ಮಿಂಚು ಮೋಡ
ಒಂದಾಯಿತು ಕಳೆದಾಮೋದ

ಹರಡಿದ ಎಲ್ಲೂ ಇಬ್ಬನಿ ಮಾಲೆ
ಕೋಟಿ ಸೂರ್‍ಯರಿಗೆ ಮರುಜನ್ಮ
ಜೊತೆಗೇ ಬಂತು ಕೆಂಪು ಸುನಾಮಿ
ನೀಡುತ ಜಗಕೆ ಹೊಸ ಜನ್ಮ

ಕಪ್ಪು ಕೋಗಿಲೆ ಕೆಂಪಾಯ್ತು
ಸಂಭ್ರಮದಾ ನೆಲ ಕುಸಿದೋಯ್ತು

ಸಾವಿರ ಕನಸು ಸಾವಿರ ಮನಸು
ನವಿಲು ಕುಣಿಯಿತು ಕೋಗಿಲೆಗೆ
ಎದೆಯಲಿ ಹರ್‍ಷ ಹೊಸ ಉತ್ಕರ್‍ಷ
ಜಗ ಮುನ್ನಡೆಯಿತು ನವ ಶ್ರುತಿಗೆ

ತಗ್ಗು ದಿಣ್ಣೆ ಎಲ್ಲಿ ಹೋಯಿತೊ
ಮೂಡಿತು ಬದುಕಿಗೆ ಹೊಸ ಬಣ್ಣ
ಮಾಡಿದ ಮನಸಿಗೆ ಇಟ್ಟಽ ಹೆಜ್ಜೆಗೆ
ಬೆಲೆಽ ಬಂದಿತೊ ಓ ಅಣ್ಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಮಿ ನಾನು
Next post ಅರಿಷಿಣ ಹಚ್ಚೂ ಹಾಡು – ೨

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys