ಕಪ್ಪು ಕೋಗಿಲೆ ಕೆಂಪಾಯ್ತು

ಕಪ್ಪು ಕೋಗಿಲೆ ಕೆಂಪಾಯ್ತು
ಸಂಭ್ರಮದಾ ಮನ ಬೆವೆತೋಯ್ತು

ಕೆಂಪು ಸೂರ್‍ಯ ಕೆಂಪಾಗಿಯೆ ಉಳಿದ
ಹುಣ್ಣಿಮೆ ಚಂದ್ರ ಕೆಂಪಾದ
ಗುಡುಗು ಸಿಡಿಲು ಮಳೆ ಮಿಂಚು ಮೋಡ
ಒಂದಾಯಿತು ಕಳೆದಾಮೋದ

ಹರಡಿದ ಎಲ್ಲೂ ಇಬ್ಬನಿ ಮಾಲೆ
ಕೋಟಿ ಸೂರ್‍ಯರಿಗೆ ಮರುಜನ್ಮ
ಜೊತೆಗೇ ಬಂತು ಕೆಂಪು ಸುನಾಮಿ
ನೀಡುತ ಜಗಕೆ ಹೊಸ ಜನ್ಮ

ಕಪ್ಪು ಕೋಗಿಲೆ ಕೆಂಪಾಯ್ತು
ಸಂಭ್ರಮದಾ ನೆಲ ಕುಸಿದೋಯ್ತು

ಸಾವಿರ ಕನಸು ಸಾವಿರ ಮನಸು
ನವಿಲು ಕುಣಿಯಿತು ಕೋಗಿಲೆಗೆ
ಎದೆಯಲಿ ಹರ್‍ಷ ಹೊಸ ಉತ್ಕರ್‍ಷ
ಜಗ ಮುನ್ನಡೆಯಿತು ನವ ಶ್ರುತಿಗೆ

ತಗ್ಗು ದಿಣ್ಣೆ ಎಲ್ಲಿ ಹೋಯಿತೊ
ಮೂಡಿತು ಬದುಕಿಗೆ ಹೊಸ ಬಣ್ಣ
ಮಾಡಿದ ಮನಸಿಗೆ ಇಟ್ಟಽ ಹೆಜ್ಜೆಗೆ
ಬೆಲೆಽ ಬಂದಿತೊ ಓ ಅಣ್ಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭೂಮಿ ನಾನು
Next post ಅರಿಷಿಣ ಹಚ್ಚೂ ಹಾಡು – ೨

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…