ಅರಿಷಿಣ ಹಚ್ಚೂ ಹಾಡು – ೨

ಹಂಚಗೂಣಿ ಬೆಂಚಗೂಣಿ ಮುತ್ತಿನ ನಾಗುರಣಿ
ಕುಸುಮಲ್ಲಿ ಭೂದೇವಿಗೆ||
ಮುತ್ತಿನ ಬಟ್ಬಿಟ್ಟು ಮುತ್ತೈದೆಯರೆಲ್ಲಾ
ಎಣ್ಣಿ ಹೆಚ್ಚುನು ಬನ್ನಿಽರೆ ||೧||

ಗಂಜಿಽಯ ಸೀರ್‍ಯುಟ್ಟು ಗಂದಽದ ಬಟ್ಟಿಟ್ಟು
ಪಿಲ್ಲೆ ಕಾಲುಂಗರಿಟ್ಟಽ ||
ಮುಡಿಸಣ್ಣ ಮುತ್ತಿಽನ ನತ್ತನಿಟ್ಟವರೆಲ್ಲ
ಎಣ್ಣಿ ಹಚ್ಚುನು ಬನ್ಸಿಽರೆ ||೨||

ಚಿಕ್ಕಿಽಯ ಸೀರ್‍ಯುಟ್ಟು ಚಿಲಕಽದ ಬಟ್ಟಿಟ್ಟು
ಮೂಗಿಽಗಿ ಮೂಗತಿಟ್ಟವರ
ಜಾಳಿಗಿದಂಡೀ ಮುಡಿಯ ಮುತ್ತೈದೇರ್‍ಯಾ
ಎಣ್ಣಿ ಹಚ್ಚುನು ಬನ್ನಿಽರೆ ||೩||

ಕಂಚೀನ ಬಟ್ಲಾಗ ಮಿಂಚೆಣ್ಣಿ ತಕ್ಕೊಂಡು
ಕೆಂಚೆರೊಂದೈವರಽ ||
ಕೆಂಚರೊಂದೈವರ ನೆರೆದ ಮುತ್ತೈದೇರ್‍ಯಾ
ಎಣ್ಣೆ ಹಚ್ಚುನು ಬನ್ನಿಽರೆ ||೪||

ಬೆಳ್ಳಿಽಯ ಬಟ್ಲಾಗ ಎಳ್ಳೆಣ್ಣಿ ತಕ್ಕೊಂಡು
ನಲ್ಲೆರೊಂದೈವರಽ || I
ನಲ್ಲೆರೊಂದೈವರ ನೆರೆದ ಮುತ್ತೈದೇರ್‍ಯಾ
ಎಣ್ಣಿ ಹಚ್ಚುನು ಬನ್ನಿಽರೆ ||೫||

ಹೆವಳಸರ ಬವಳಸರ ಮ್ಯಾಲ ಮುತ್ತಿನ ಸರ
ತಾಯಿತ ಲ್ಯಾವಽಳ ||
ತಾಯಿಽತ ಲ್ಯಾವಳ ತಾಳಿ ಕಟ್ಟಿಽದವರ್‍ಯಾ
ಎಣ್ಣಿ ಹಚ್ಚುನು ಬನ್ಸಿಽರೆ ||೬||
*****

ಕನ್ಯೆಗೆ ಅರಿಷಿಣ ಹಚ್ಚುವ ವಿಧಾನದ ಹಾಡಿದು.

ಛಂದಸ್ಸು:- ತ್ರಿಪದಿ.

ಶಬ್ದ ಪ್ರಯೋಗಗಳು:— ಕುರುಣೆ=ಮುಡಿಗೆ ಬಿಗಿಯುವ ಉಣ್ಣೆಯ ದಾರ. ಹಂಚಗೂಣಿ= ಹಚ್ಚಗಿನ ಕುರುಣೆ. ಬೆಂಚ(ಕೆಂಚ) ಗೂಣಿ=ಕೆಂಪು ಬಣ್ಣದ ಕುರುಣೆ. ನಾಗರುಣಿ=ನಾಗರ ಹಾವಿನಂತೆ ಜೋಲುವ ಕುರುಣೆ (ಇದು ಒಂದು ಅಭರಣವಾಗಿರಲೂ ಬಹುದು).ಕುಸುವಲ್ಲಿ=ಹೂವಿನಂಥವಳು.ಭೂದೇವಿ=ಮದುಮಗಳು. ಚಿಲಕ=ತಿಲಕ. ಕೆಂಚ್ಯಾರು-ಕೆಂಪುಮೈಯವರು.ಲ್ಯಾವಳ=ಗೋಪು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಪ್ಪು ಕೋಗಿಲೆ ಕೆಂಪಾಯ್ತು
Next post ಮರೆಗುಳಿತನ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys