Home / ಕವನ / ಕವಿತೆ / ಅರಿಷಿಣ ಹಚ್ಚೂ ಹಾಡು – ೨

ಅರಿಷಿಣ ಹಚ್ಚೂ ಹಾಡು – ೨

ಹಂಚಗೂಣಿ ಬೆಂಚಗೂಣಿ ಮುತ್ತಿನ ನಾಗುರಣಿ
ಕುಸುಮಲ್ಲಿ ಭೂದೇವಿಗೆ||
ಮುತ್ತಿನ ಬಟ್ಬಿಟ್ಟು ಮುತ್ತೈದೆಯರೆಲ್ಲಾ
ಎಣ್ಣಿ ಹೆಚ್ಚುನು ಬನ್ನಿಽರೆ ||೧||

ಗಂಜಿಽಯ ಸೀರ್‍ಯುಟ್ಟು ಗಂದಽದ ಬಟ್ಟಿಟ್ಟು
ಪಿಲ್ಲೆ ಕಾಲುಂಗರಿಟ್ಟಽ ||
ಮುಡಿಸಣ್ಣ ಮುತ್ತಿಽನ ನತ್ತನಿಟ್ಟವರೆಲ್ಲ
ಎಣ್ಣಿ ಹಚ್ಚುನು ಬನ್ಸಿಽರೆ ||೨||

ಚಿಕ್ಕಿಽಯ ಸೀರ್‍ಯುಟ್ಟು ಚಿಲಕಽದ ಬಟ್ಟಿಟ್ಟು
ಮೂಗಿಽಗಿ ಮೂಗತಿಟ್ಟವರ
ಜಾಳಿಗಿದಂಡೀ ಮುಡಿಯ ಮುತ್ತೈದೇರ್‍ಯಾ
ಎಣ್ಣಿ ಹಚ್ಚುನು ಬನ್ನಿಽರೆ ||೩||

ಕಂಚೀನ ಬಟ್ಲಾಗ ಮಿಂಚೆಣ್ಣಿ ತಕ್ಕೊಂಡು
ಕೆಂಚೆರೊಂದೈವರಽ ||
ಕೆಂಚರೊಂದೈವರ ನೆರೆದ ಮುತ್ತೈದೇರ್‍ಯಾ
ಎಣ್ಣೆ ಹಚ್ಚುನು ಬನ್ನಿಽರೆ ||೪||

ಬೆಳ್ಳಿಽಯ ಬಟ್ಲಾಗ ಎಳ್ಳೆಣ್ಣಿ ತಕ್ಕೊಂಡು
ನಲ್ಲೆರೊಂದೈವರಽ || I
ನಲ್ಲೆರೊಂದೈವರ ನೆರೆದ ಮುತ್ತೈದೇರ್‍ಯಾ
ಎಣ್ಣಿ ಹಚ್ಚುನು ಬನ್ನಿಽರೆ ||೫||

ಹೆವಳಸರ ಬವಳಸರ ಮ್ಯಾಲ ಮುತ್ತಿನ ಸರ
ತಾಯಿತ ಲ್ಯಾವಽಳ ||
ತಾಯಿಽತ ಲ್ಯಾವಳ ತಾಳಿ ಕಟ್ಟಿಽದವರ್‍ಯಾ
ಎಣ್ಣಿ ಹಚ್ಚುನು ಬನ್ಸಿಽರೆ ||೬||
*****

ಕನ್ಯೆಗೆ ಅರಿಷಿಣ ಹಚ್ಚುವ ವಿಧಾನದ ಹಾಡಿದು.

ಛಂದಸ್ಸು:- ತ್ರಿಪದಿ.

ಶಬ್ದ ಪ್ರಯೋಗಗಳು:— ಕುರುಣೆ=ಮುಡಿಗೆ ಬಿಗಿಯುವ ಉಣ್ಣೆಯ ದಾರ. ಹಂಚಗೂಣಿ= ಹಚ್ಚಗಿನ ಕುರುಣೆ. ಬೆಂಚ(ಕೆಂಚ) ಗೂಣಿ=ಕೆಂಪು ಬಣ್ಣದ ಕುರುಣೆ. ನಾಗರುಣಿ=ನಾಗರ ಹಾವಿನಂತೆ ಜೋಲುವ ಕುರುಣೆ (ಇದು ಒಂದು ಅಭರಣವಾಗಿರಲೂ ಬಹುದು).ಕುಸುವಲ್ಲಿ=ಹೂವಿನಂಥವಳು.ಭೂದೇವಿ=ಮದುಮಗಳು. ಚಿಲಕ=ತಿಲಕ. ಕೆಂಚ್ಯಾರು-ಕೆಂಪುಮೈಯವರು.ಲ್ಯಾವಳ=ಗೋಪು.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...