ಮರೆಗುಳಿತನ

ಮರೆಗುಳಿತನ

ಕೆಲವರಿಗೆ ಮರೆಗುಳಿತನ ವಂಶ ಪರಂಪರೆಯಾಗಿ ಬಂದಿರುತ್ತದೆ. ವಯಸ್ಸು ಸಣ್ಣದಿರಲಿ ದೊಡ್ಡದಿರಲಿ ಮರೆಗುಳಿತನ ಜಾಸ್ತಿಯಿರುವುದು, ಮರೆವು ಒಂದು ವರದಾನ. ಕಹಿಯನ್ನು ಮರೆಯಲು ದೇವರಿತ್ತ ವರವು. ಇದರಿಂದಾಗಿ ತುಸು ನೆಮ್ಮದಿ, ತೃಪ್ತಿ, ಶಾಂತಿ ಲಭಿಸಲು ಕಾರಣವಾಗಿದೆ. ಮರೆವು ಬೇಕು. ಆದರೆ ಅದೇ ಜಾಸ್ತಿಯಾದರೆ…. ಜೀವನ ನೀರಸನವಾಗುವುದು.

ಈ ಮರೆಗುಳಿತನಕ್ಕೆ ಕಾರಣವೇನು? ವಯಸ್ಸಾಗುತ್ತಾ… ಬರುಬರುತ್ತಾ… ಮರೆವು ಸಹಜವೇ? ನಿಜಕ್ಕೂ ಮರೆವು ಒಂದು ವರದಾನವೇ? ಇದೊಂದು ಕಾಯಿಲೆಯೇ?

– ಹೀಗೆ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಶಾಶ್ವತ ಪರಿಹಾರ ನೀಡುವ ಔಷಧಿ ಕಂಡು ಹಿಡಿಯಲು ವಿಶ್ವದಾದ್ಯಂತ ನಿರಂತರವಾಗಿ…. ಹಲವು ಸಂಶೋಧನೆಗಳು ಈಗಾಗಲೇ ಜರುಗುತ್ತಿವೆ.

ಈಗೀಗ ಘಟಾನುಘಟಿ ವೈದ್ಯರು, ನರತಜ್ಞರು, ವಿಜ್ಞಾನಿಗಳು… ಈಗಲೂ ಈ ಕಾಯಿಲೆಗೆ ಔಷಧಿಯನ್ನು ನಿಖರ ಕಾರ್‍ಯ ಕಾರಣವನ್ನು ಪರಿಹಾರವನ್ನು ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ.

ಆದರೆ… ಜುಲೈ ೨೦೧೫ ರಲ್ಲಿ ಸರ್ರೆಯ ಕ್ರಿಟಿನ್ ನಿತ್ಯಾನಂದನ್ ಲಂಡನ್ ಶಾಲಾ ಬಾಲಕ ವಯಸ್ಸು ೧೫ ವರ್ಷ ಭಾರತೀಯ ಮೂಲದ ಬ್ರಿಟೀಶ್ ಪ್ರಜೆಯಾದ ಈತ ಈಗ ಮರೆಗುಳಿತನಕ್ಕೆ ಪರಿಹಾರ ಕಂಡು ಹಿಡಿದು, ಇಡೀ ಜಗತ್ತನ್ನು ನಿಬ್ಬೆರಗುಗೊಳಿಸಿದ್ದಾನೆ. ಅಬ್ಬಾ! ವಯಸ್ಸು ಕಿರಿದು ಸಾಧನೆ ಹಿರಿದು ಎಂದು ಹುಬ್ಬೇರುವಂತೆ ಮಾಡಿದ್ದಾನೆ. ಈ ಮರೆಗುಳಿತನ ಕಾಣಿಸಿಕೊಳ್ಳುವ ಹತ್ತು ವರ್ಷ ಮೊದಲೇ ಈ ರೋಗ ಲಕ್ಷಣಗಳನ್ನು ಗುರ್ತಿಸಿ ತಡೆಗಟ್ಟುವ ವಿಧಿವಿಧಾನವನ್ನು ಕಂಡು ಹಿಡಿದಿರುವನು.

ಈತನು ತನ್ನೆಲ್ಲ ಪ್ರಯೋಗ ವಿವರವಾದ ಸಂಶೋಧನಾ ವರದಿಗಳನ್ನು ಈಗಾಗಲೇ “ಗೂಗಲ್ ಸೈನ್ಸ್ ಫೇರ್ ಪ್ರೈಜ್‌ಗೆ” ಕಳಿಸಿದ್ದಾನೆ. ಅಲ್ಲಿ ಅಂತಿಮವಾಗಿದ್ದು ಬಹುಮಾನ ಕೂಡಾ ಬಂದಿದೆ!

ಈತನಕ ಮರೆಗುಳಿಗೆ ದಿವ್ಯ ಔಷಧಿಯನ್ನು ಕಂಡು ಹಿಡಿಯಲು ಹಲವು ಥರದ ಅರಿವಿನ ನಾನಾ ಪರೀಕ್ಷೆಗಳನ್ನು ನಡೆಸಬೇಕಾಗಿತ್ತು! ಇಲ್ಲವೆ ವ್ಯಕ್ತಿಯ ಸಾವಿನ ತರುವಾಯ ಆತನ ಮೆದುಳನ್ನು ಪರೀಕ್ಷೆಗೆ ಒಡ್ಡಬೇಕಾಗಿತ್ತು. ಇದು ಪೋಸ್ಟ್‌ಮಾರ್‍ಟಂ ಕೆಲಸವಾಗಿತ್ತು!

ಆದರೆ… ಸರ್ರೆಯ ಕ್ರಿಟನ್ ನಿತ್ಯಾನಂದನ್ ಈಗ ತಾನು ಟ್ರೋಜನ್ ಹಾರ್ಸ್ ಎಂಬ ಪ್ರತಿಕಾಯವನ್ನು ಬಹಳ ಕಷ್ಟಪಟ್ಟು ಸಂಶೋಧಿಸಿದ್ದು ಅದು ಮೆದುಳನ್ನು ಸಲೀಸಾಗಿ ಹೊಕ್ಕು ಅಲ್ಲಿರುವ ಮರೆಗುಳಿತನ ತರುವ ನ್ಯೂರೋಟಾಕ್ಸಿಕ್ ಪ್ರೋಟಿನ್‌ಗಳ ಜತೆ ಕೂಡಿಕೊಳ್ಳುವುವು…. ಹೀಗಾಗಿ ಮೊತ್ತ ಮೊದಲ ಪ್ರಯತ್ನದಲ್ಲಿಯೇ ಮರೆಗುಳಿತನವನ್ನು ಗುರ್ತಿಸಿದ್ದು ಪರಿಹಾರವೂ ದೊರಕಿರುವುದು!

ಈಗೀಗ ಬ್ರಿಟನ್ ದೇಶದಲ್ಲೇನು… ಇತರ ದೇಶ ವಿದೇಶಗಳಲ್ಲಿ ಕೂಡಾ ಮರೆಗುಳಿತನ ಬಹುದೊಡ್ಡ ಕಾಯಿಲೆಯಾಗಿ ಉಲ್ಬಣಗೊಳ್ಳುತ್ತಿದ್ದು ಇದಕ್ಕೊಂದು ಪರಿಹಾರ ಸಿಕ್ಕಂತಾಗಿದೆಯೆಂದು ನಿತ್ಯಾನಂದನ್ ಈಗಾಗಲೇ ಅಭಿಮಾನದಿಂದ ಸಾರಿಕೊಂಡಿದ್ದಾನೆ.

ನಾವು ನೀವು ಎಲ್ಲರೂ ನಿತ್ಯಾನಂದನ್‌ಗೆ ಆಲ್ ದಿ ಬೆಸ್ಟ್ ಹೇಳೋಣವಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಿಷಿಣ ಹಚ್ಚೂ ಹಾಡು – ೨
Next post ಹೋದ ವರ್ಷದ ಹಕ್ಕಿಯೊ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys