ಹೋದ ವರ್ಷದ ಹಕ್ಕಿಯೊ

ಹೋದ ವರ್ಷದ ಹಕ್ಕಿಯೊ
ಈಗಿಲ್ಲಿ ಹಾರುವುದು
ಅದೇ ಸಣ್ಣ ಅದೇ ಕಣ್ಣ ಅದೇ ಬಣ್ಣದ ಹಕ್ಕಿಯೊ
ಅದೇ ಬೆಳೆಸಿ ಅದೇ ಕಲಿಸಿದ ಅದರ ಮರಿ ಹಕ್ಕಿಯೊ

ಆ ಹಕ್ಕಿ ಏನಾಯಿತೊ ಈ ಹಕ್ಕಿ ಹೀಗಾಯಿತೊ
ಈ ಮಧ್ಯದ ಕಾಲ ಅದು ಹೇಗೆ ಕಳೆಯಿತೊ

ಆ ಹಕ್ಕಿಯ ಹಾಗೇ ಈ ಹಕ್ಕಿ ಕೂಡ
ಗೂಡು ಕಟ್ಟಿದೆ ಮರಿ ಮಾಡಿದೆ
ಹಾರಿ ಹೋಗಿ ಚೂರು ತಂದು
ಮರಿಗಳಿಗೆ ನೀಡಿದೆ

ಆ ಹಕ್ಕಿಯ ನೆನಪು ಈ ಹಕ್ಕಿಗಿರುವುದೆ
ತಾಯಿ ಹಕ್ಕಿಯ ನೆನಪದರ ಮರಿಗಳಿಗೂ ಇರುವುದೆ
ನಿನ್ನೆ ನಾಳೆಗಳ ನಡುವೆ ಈ ಹಕ್ಕಿ ಸದ್ಯೋಜಾತ
ಮನುಷ್ಯ ಮಾತ್ರರಿಗೇ ಬಹುಶಃ ಇನ್ನೊಂದು ಪಾತ್ರ

ಚರಿತ್ರೆ ಮತ್ತು ಭವಿಷ್ಯ ಮನುಷ್ಯರಿಗೆ ಮಾತ್ರ
ವರ್ತಮಾನವೆನ್ನುವ ಅವರ ಧರ್ಮಕ್ಷೇತ್ರ
ಪಾಪ ಮನುಷ್ಯರಿಗೆ ಪುಣ್ಯ ಮನುಷ್ಯರಿಗೆ
ನೀತಿ ಅನೀತಿಗಳು ಮನುಷ್ಯರಿಗೆ

ಆಸೆ ಮನುಷ್ಯರಿಗೆ ನಿರಾಸೆ ಮನುಷ್ಯರಿಗೆ
ಕನಸು ಕಾಣುವ ಮಹಾಯೋಗ ಮನುಷ್ಯರಿಗೆ
ಎಲ್ಲ ವೈರುಧ್ಯಗಳೂ ಅವರೊಳಗೆ
ನಾಕ ನರಕಗಳೂ ಸ್ವಾಂತದೊಳಗೆ

ಸೃಷ್ಟಿ ನಿರ್ಮಿಸಿದ ಏನದ್ಭುತ ಪ್ರಯೋಗ
ಸೃಷ್ಟಿಯನೆ ಮೀರಿ ಸಾಗಿರುವುದೀಗ
ಎಷ್ಟು ದೂರವೊ ಸ್ವರ್ಗ ಎಷ್ಟು ನೀಳವೊ ಹಗ್ಗ
ಮುಕ್ತಿಯೋ ಧೀಶಕ್ತಿಯೋ ಇದ ಧಿಕ್ಕರಿಸಿದಾಗ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರೆಗುಳಿತನ
Next post ಯಾರಲ್ಲಿ ಬೇಡಲಿ?

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…