Home / ಕವನ / ಕವಿತೆ / ಹೋದ ವರ್ಷದ ಹಕ್ಕಿಯೊ

ಹೋದ ವರ್ಷದ ಹಕ್ಕಿಯೊ

ಹೋದ ವರ್ಷದ ಹಕ್ಕಿಯೊ
ಈಗಿಲ್ಲಿ ಹಾರುವುದು
ಅದೇ ಸಣ್ಣ ಅದೇ ಕಣ್ಣ ಅದೇ ಬಣ್ಣದ ಹಕ್ಕಿಯೊ
ಅದೇ ಬೆಳೆಸಿ ಅದೇ ಕಲಿಸಿದ ಅದರ ಮರಿ ಹಕ್ಕಿಯೊ

ಆ ಹಕ್ಕಿ ಏನಾಯಿತೊ ಈ ಹಕ್ಕಿ ಹೀಗಾಯಿತೊ
ಈ ಮಧ್ಯದ ಕಾಲ ಅದು ಹೇಗೆ ಕಳೆಯಿತೊ

ಆ ಹಕ್ಕಿಯ ಹಾಗೇ ಈ ಹಕ್ಕಿ ಕೂಡ
ಗೂಡು ಕಟ್ಟಿದೆ ಮರಿ ಮಾಡಿದೆ
ಹಾರಿ ಹೋಗಿ ಚೂರು ತಂದು
ಮರಿಗಳಿಗೆ ನೀಡಿದೆ

ಆ ಹಕ್ಕಿಯ ನೆನಪು ಈ ಹಕ್ಕಿಗಿರುವುದೆ
ತಾಯಿ ಹಕ್ಕಿಯ ನೆನಪದರ ಮರಿಗಳಿಗೂ ಇರುವುದೆ
ನಿನ್ನೆ ನಾಳೆಗಳ ನಡುವೆ ಈ ಹಕ್ಕಿ ಸದ್ಯೋಜಾತ
ಮನುಷ್ಯ ಮಾತ್ರರಿಗೇ ಬಹುಶಃ ಇನ್ನೊಂದು ಪಾತ್ರ

ಚರಿತ್ರೆ ಮತ್ತು ಭವಿಷ್ಯ ಮನುಷ್ಯರಿಗೆ ಮಾತ್ರ
ವರ್ತಮಾನವೆನ್ನುವ ಅವರ ಧರ್ಮಕ್ಷೇತ್ರ
ಪಾಪ ಮನುಷ್ಯರಿಗೆ ಪುಣ್ಯ ಮನುಷ್ಯರಿಗೆ
ನೀತಿ ಅನೀತಿಗಳು ಮನುಷ್ಯರಿಗೆ

ಆಸೆ ಮನುಷ್ಯರಿಗೆ ನಿರಾಸೆ ಮನುಷ್ಯರಿಗೆ
ಕನಸು ಕಾಣುವ ಮಹಾಯೋಗ ಮನುಷ್ಯರಿಗೆ
ಎಲ್ಲ ವೈರುಧ್ಯಗಳೂ ಅವರೊಳಗೆ
ನಾಕ ನರಕಗಳೂ ಸ್ವಾಂತದೊಳಗೆ

ಸೃಷ್ಟಿ ನಿರ್ಮಿಸಿದ ಏನದ್ಭುತ ಪ್ರಯೋಗ
ಸೃಷ್ಟಿಯನೆ ಮೀರಿ ಸಾಗಿರುವುದೀಗ
ಎಷ್ಟು ದೂರವೊ ಸ್ವರ್ಗ ಎಷ್ಟು ನೀಳವೊ ಹಗ್ಗ
ಮುಕ್ತಿಯೋ ಧೀಶಕ್ತಿಯೋ ಇದ ಧಿಕ್ಕರಿಸಿದಾಗ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...