Home / ಕವನ / ಕವಿತೆ / ನಹುಷನ ಹಕ್ಕಿಗಳು

ನಹುಷನ ಹಕ್ಕಿಗಳು

ನನ್ನೊಳಗೆ ನೂರಾರು ಹಕ್ಕಿಗಳಿದ್ದವು. ಅವುಗಳಿಗೆ
ಅವುಗಳದೇ ನೂರಾರು ಹಕ್ಕುಗಳಿದ್ದವು. ಒಂದು ದಿನ
ದೇವತೆಗಳು ಬಂದರು. ಸ್ವರ್ಗಕ್ಕೆ ಕರೆದರು.

ಹಕ್ಕಿಗಳು ನಾವು ಸ್ವಚ್ಛಂದ ಅಲೆದೆವು. ಹಾರಲು ನೀಲ ಆಕಾಶ
ಪದ ಊರಲು ಇಂದ್ರಾಸನ. ದೇವತೆಗಳು ಬೆರಗಾದರು.
ನಮ್ಮ ನಿಷ್ಕಳಂಕ ಹಾಡುಗಳಿಗೆ ಅಪ್ಸರೆಯರ ನರ್ತನ

ಹೋಮದಿಂದ ಮೇಲೆದ್ದ ಧೂಮ ! ಈ ಮನುಷ್ಯನ ಮಿತಿ
ಈತನ ತೀರಲಾರದ ಕಾಮ ನಮ್ಮ ಹೆಗಲಿನ ಮೇಲೆ ಈತನ ಭೂಮಿಯ ಭಾರ!
ಎಲೆ ನಹುಷನೇ ಬೀಳು – ಮರಳಿ ಪೃಥ್ವಿಗೆ ದ್ಯೆತ್ಯಸರ್ಪವಾಗಿ.

ನನ್ನ ಸುಡುತ್ತಿದೆ ಅಯ್ಯೋ
ಋಷಿಗಳ ಶಾಪ. ಕರುಣೆಯಷ್ಟೇ ಸರಳ
ಸುರರ ಕೋಪ ದೇವತೆಗಳೇ ಕ್ಷಮಿಸಿ. ನನ್ನ ನೋವಿಗೆ ಕೈ
ಕಾಲುಗಳಿಲ್ಲ. ವೇದನೆಗೆ ವಿಷದ ಹಲ್ಲುಗಳು !

ನಹುಷ ಬೀಳುತ್ತಲೇ ಇದ್ದಾನೆ ಸ್ವರ್ಗದಿಂದ. ಅವನು ತಲುಪುವ ಭೂಮಿ
ಎಷ್ಟು ದೂರ ? ಅವನ ಉದ್ದರಿಸುವವತಾರ ಎಷ್ಟು ದೂರ?
ಹಕ್ಕಿಗಳು ನಾವು ಸಾರೋಣವೇ ಅವನು ಬೀಳುವ ನೆಲಕ್ಕೆ ?
ಏರೋಣವೇ ಅವನು ನೆಗೆಯುವ ನಭಕ್ಕೆ ?
ಆದರೆ
ನಾವೀಗ ಹಕ್ಕಿಗಳಲ್ಲ ನಮಗೀಗ ಹಕ್ಕುಗಳಿಲ್ಲ
ನಮ್ಮ ಏರಿಸಿ ಇಳಿಸುವ ಆಟದ ಓ ನಭದ ಜಗವೇ
ನೀನು ನೀಡಬಹುದಾದದ್ದು ಶಾಪವಲ್ಲ ನೀಡಬಹುದಾದ
ಕರುಣೆ ಪ್ರೀತಿಗೆ ಇಲ್ಲಿ ಲೆಕ್ಕವಿಲ್ಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...