Home / ಕವನ / ಕವಿತೆ / ಅಮಾವಾಸ್ಯೆಯ ದಿವಸ

ಅಮಾವಾಸ್ಯೆಯ ದಿವಸ

ಹುಣ್ಣಿಮೆಯಿಂದ ಪಾಡ್ಯ
ಪಾಡ್ಯದಿಂದ ಬಿದಿಗೆ
ಅಂಶ-ಅಂಶ ಕರಗಿ
ಅಮಾವಾಸ್ಯೆ
ಇನ್ನಿಲ್ಲವಾಗಿಬಿಟ್ಟ ಚಂದ್ರ
ಬರುವುದಿಲ್ಲ ಇನ್ನು

ಇದೇ ಹದಿನೈದು ದಿನಗಳ ಹಿಂದೆ
ಈ ಆಕಾಶ
ತಾರೆಗಳ ಹೂಹಾರ ತೊಡಿಸಿ
ಚಂದ್ರನ್ನ ಸನ್ಮಾನಿಸಿತ್ತು,
ಪೂರ್ಣಚಂದ್ರನ ತುಂಬು ನಗೆ ತುಂಬಿ ಆಕಾಶ
ಸುರಿದಿತ್ತು, ಭೂಮಿಯ ತುಂಬ
ತುಂಬಿಕೊಂಡಿದ್ದೆವು ನಾವೂ ನೀವೂ

ಇನ್ನು ಇನ್ನಿಲ್ಲ ಚಂದ್ರ
ಆಕಾಶದಲ್ಲಿ ಹೊಳೆಯೋದಿಲ್ಲ
ತಾರೆಗಳ ಮೂಕ ಮೆರವಣಿಗೆಯಲ್ಲಿ
ಚಂದ್ರನ್ನ ಬೇರೆಲ್ಲೋ ಸಾಗಿಸಲಾಯ್ತು,
ಆಕಾಶ ಅಪೂರ್ಣ ಇನ್ನು
ಸೂರ್ಯನೂ ಒಬ್ಬಂಟಿ ಇನ್ನು

ಚಂದ್ರ ಹೋಗಿ ಬಿಟ್ಟ
ಇನ್ನೂ ಬೇಕು
ಎನ್ನುತ್ತಿದ್ದಾಗಲೇ ಹೋಗುವುದು ಒಳ್ಳೆಯದು
ಹೋಗಿಬಿಟ್ಟ

ಆದರೆ ಒಂದೇ ಶಂಕೆ
ಚಂದ್ರನಿಗೆ
ಆಕಾಶವಲ್ಲದೆ ಬೇರ ಎಲ್ಲಿದೆ ಜಾಗ ?
ಇದ್ದರೂ ಆ ಜಾಗ
ಚಂದ್ರನ ಅನಂತ ನಗೆಗೆ
ಖಂಡಿತಾ ಸಾಕಾಗ

ಬರುತ್ತಾನೆ
ಬರದೆ ಎಲ್ಲಿ ಹೋಗುತ್ತಾನೆ ?
ಚಂದ್ರ ಇದ್ದಲ್ಲೇ ತಾರೆಗಳು
ಇದ್ದಲ್ಲೆ ಆಕಾಶ
ಇದ್ದಲ್ಲೆ ನಮ್ಮ
ಕವಿತೆಗಳಿಗಿಷ್ಟು ಅವಕಾಶ

ನಗಲಿದ್ದಾನೆ ಹೊಸ ಶಕ್ತಿಯಿಂದ
ಹೊಗಲಿದ್ದಾನೆ ಹೊಸ ಭಾವನೆಗಳಿಂದ
ಹೊಳೆಯುತ್ತಾನೆ ಪುನಹಾ
ಬೆಳೆಯುತ್ತಾನೆ

ಅಳಬೇಡಿರೋ ಮಕ್ಕಳೆ
ನಿಸ್ತೇಜ ಪ್ರೇಮಿಗಳೆ
ಭಗ್ನ ಹೃದಯಿಗಳಾಗಿ
ಕೆರೆ ಹಾರಿ ಸಾಯಬೇಡಿರೋ ಕವಿಗಳೆ

ನಿಮಗಾಗಿ-ನಿಜವಾಗಿಯೂ
ನಿಮಗಾಗಿಯು

ಬರಲಿದ್ದಾನೆ ಚಂದ್ರ
ಚಂದ್ರ ಬರಲಿದ್ದಾನೆ
*****

 

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...