Home / ಕವನ / ಕವಿತೆ / ಅಮಾವಾಸ್ಯೆಯ ದಿವಸ

ಅಮಾವಾಸ್ಯೆಯ ದಿವಸ

ಹುಣ್ಣಿಮೆಯಿಂದ ಪಾಡ್ಯ
ಪಾಡ್ಯದಿಂದ ಬಿದಿಗೆ
ಅಂಶ-ಅಂಶ ಕರಗಿ
ಅಮಾವಾಸ್ಯೆ
ಇನ್ನಿಲ್ಲವಾಗಿಬಿಟ್ಟ ಚಂದ್ರ
ಬರುವುದಿಲ್ಲ ಇನ್ನು

ಇದೇ ಹದಿನೈದು ದಿನಗಳ ಹಿಂದೆ
ಈ ಆಕಾಶ
ತಾರೆಗಳ ಹೂಹಾರ ತೊಡಿಸಿ
ಚಂದ್ರನ್ನ ಸನ್ಮಾನಿಸಿತ್ತು,
ಪೂರ್ಣಚಂದ್ರನ ತುಂಬು ನಗೆ ತುಂಬಿ ಆಕಾಶ
ಸುರಿದಿತ್ತು, ಭೂಮಿಯ ತುಂಬ
ತುಂಬಿಕೊಂಡಿದ್ದೆವು ನಾವೂ ನೀವೂ

ಇನ್ನು ಇನ್ನಿಲ್ಲ ಚಂದ್ರ
ಆಕಾಶದಲ್ಲಿ ಹೊಳೆಯೋದಿಲ್ಲ
ತಾರೆಗಳ ಮೂಕ ಮೆರವಣಿಗೆಯಲ್ಲಿ
ಚಂದ್ರನ್ನ ಬೇರೆಲ್ಲೋ ಸಾಗಿಸಲಾಯ್ತು,
ಆಕಾಶ ಅಪೂರ್ಣ ಇನ್ನು
ಸೂರ್ಯನೂ ಒಬ್ಬಂಟಿ ಇನ್ನು

ಚಂದ್ರ ಹೋಗಿ ಬಿಟ್ಟ
ಇನ್ನೂ ಬೇಕು
ಎನ್ನುತ್ತಿದ್ದಾಗಲೇ ಹೋಗುವುದು ಒಳ್ಳೆಯದು
ಹೋಗಿಬಿಟ್ಟ

ಆದರೆ ಒಂದೇ ಶಂಕೆ
ಚಂದ್ರನಿಗೆ
ಆಕಾಶವಲ್ಲದೆ ಬೇರ ಎಲ್ಲಿದೆ ಜಾಗ ?
ಇದ್ದರೂ ಆ ಜಾಗ
ಚಂದ್ರನ ಅನಂತ ನಗೆಗೆ
ಖಂಡಿತಾ ಸಾಕಾಗ

ಬರುತ್ತಾನೆ
ಬರದೆ ಎಲ್ಲಿ ಹೋಗುತ್ತಾನೆ ?
ಚಂದ್ರ ಇದ್ದಲ್ಲೇ ತಾರೆಗಳು
ಇದ್ದಲ್ಲೆ ಆಕಾಶ
ಇದ್ದಲ್ಲೆ ನಮ್ಮ
ಕವಿತೆಗಳಿಗಿಷ್ಟು ಅವಕಾಶ

ನಗಲಿದ್ದಾನೆ ಹೊಸ ಶಕ್ತಿಯಿಂದ
ಹೊಗಲಿದ್ದಾನೆ ಹೊಸ ಭಾವನೆಗಳಿಂದ
ಹೊಳೆಯುತ್ತಾನೆ ಪುನಹಾ
ಬೆಳೆಯುತ್ತಾನೆ

ಅಳಬೇಡಿರೋ ಮಕ್ಕಳೆ
ನಿಸ್ತೇಜ ಪ್ರೇಮಿಗಳೆ
ಭಗ್ನ ಹೃದಯಿಗಳಾಗಿ
ಕೆರೆ ಹಾರಿ ಸಾಯಬೇಡಿರೋ ಕವಿಗಳೆ

ನಿಮಗಾಗಿ-ನಿಜವಾಗಿಯೂ
ನಿಮಗಾಗಿಯು

ಬರಲಿದ್ದಾನೆ ಚಂದ್ರ
ಚಂದ್ರ ಬರಲಿದ್ದಾನೆ
*****

 

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...