ಶ್ರೀ ಹನುನುಂತದೇವರ ದಂಡಕ

ಹನುಮಂತ ಭೂಪಾ
ಸದ್ಗುಣಮಣಿ ಶಾಂತರೂಪಾ || ಪ ||

ಹನುಮಂತ ಮಹಾಮುನೀಶ ವಾಯು
ತನಯ ವಾನರೇಂದ್ರ ವನಚರ
ಶುಭಕಿರಣ ವಿಹಾರನು ಮಹಿಮಾಗಾರಾ
ಅಂಜನೀಕುಮಾರಾ ಸುಜನೋದ್ದಾರಾ ಕುಜನೋತ್ಪಾಲನಾ
ಹೋ ಭಕ್ತಪ್ರಾಣ ಪಂಚಪ್ರಾಣಾ ನಮಸ್ತುತೆ
ಕ್ಷೋಣಿಪಾಲ ರಘುಚರಣ ಸೇವಕಾ ಕಪಿವರ ಕರುಣ ಕೃಪಾಳು ||೧||

ಹರಿ ರಾಮ ಚಾರಕಾ ನಿರುಪಮ ನಿರಹಂಕರ ಕರಾ ಸಂಚಾರ
ಚರಿತ ಭೂಪರಾ ಬಹುಭರದಿ ಲಂಕಾಪುರಕೆ ಕಪಿಗಳ
ನೆರಪಿ ವಿಸ್ತರಾ ರಾವಣಸುರಾನುರುಹಿದಾ ದೀರಾ
ಕುಂಭಕರ್ಣರಾ ತಾಟಕಿಯ ಭರಾ ದೂಷಣ
ಖರಾದಿಗಳ ಸಂಹರಾ ಪರಾಕ್ರಮ ವೀರಾ ನಿನ್ನ ಶ್ರೀಕರ
ಚರಣಕಮಲಕೆ ಪರಾಕು ವಂದಿಪೆ ಶರಣು ||೨||

ಜಿತೇಂದ್ರಿಯ ಜಯ ಶುಭಮತೀ ಜಲಸ್ತಟ
ಪಥಾಸಾರಿ ನಿರ್ಮಿತಾ ನಿರಂತರ
ಹತಾಶ ದಾನವ ಪತೀಂದ್ರಜಿತುವಿನ ಮಥನ ಮೂರುತಿ ನತಾ
ವಿಭೀಷಣ ಗತಿಮುಕ್ತಿಯಾ ಪಥ ವಾಯಕಾ ಹಿತಾ ಸಾಯಕಾ
ವೃತಸ್ತಂಭನಾ ಅತೀತ ಮೂರುತಿ ನುತಿಪೆ
ನಿನ್ನ ಪಾದಗತಿಯೆನುತ ಸರ್ವಥಾ ಸೇವಿಪೆ |!೩||

ಭಲಾವಂತ ಬಾಲಕಾ ರಾಮ ಭೂಪಾಲ ರಘುಸುತ
ಸಲುಹಿ ಸಮರದಿ ಕಲಿ ಲಕ್ಷ್ಮಣನಿಗೊಲಿದು ಜೀವನ
ಫಲಾಗೊಳಿಸಿ ಪಾತಾಳಕಿಳಿದು ಮಹಾ
ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವ-ಕುಶ ಕುಮಾರರ
ಛಲಾಗೆಲಿಸಿ ಜಾನಕಿಯ ರಾಮ ಪದಕೊಲಿಸಿ ನಿಜ
ಲೀಲಾ ಮೂರುತಿ ಭಲೆ ಬ್ರಹ್ಮಋಷಿ ಕುಲೊತ್ತಮಂ ಭಜೇ
ಬಾಲದಂಡ ಬಲಭೀಮದಯಾಳು ||೪||

ಮಂಡಲೀಶ ಕೋದಂಡ ಹರೀವರ ಪಾಂಡುತನಯ
ಗಾಂಡಿವಿರಥಾಗ್ರದಿ ಕಂಡು ಪತಾಕಿನಿ
ಕುಂಡಲಿಯೋಳ್ ನಿನ್ನ ಅಂಡಲಿಯಲು ಕುರುಸೈನ್ಯ ಕಲಹದೋಳ್
ದಿಂಡುಗೆಡಹಿ ಬ್ರಹ್ಮಾಂಡಕಿಳಿದು ಬಹು ಪುಂಡಗ್ರಾಮ ಅತಿಗೇರಿ ಸ್ಥಳದಿ ಪ್ರ-
ಚಂಡ ವೀರ ಹನುಮಂತ ಪ್ರಭೋ
ಉದ್ದಂಡ ಗುರುಗೋವಿಂದನ ಕರುಣದಿ
ಕಂಡುಸುರುವೆ ನಿನ್ನ ಪಾದಕಮಲ ಕರ
ದಂಡಯೆತ್ತಿ ನಮೋಯೆಂಬೆನೈ || ೫ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ ಬಸವೇಶ್ವರ ದಂಡಕ
Next post ಅಮಾವಾಸ್ಯೆಯ ದಿವಸ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys