Home / ಕವನ / ಕವಿತೆ / ಶ್ರೀ ಹನುನುಂತದೇವರ ದಂಡಕ

ಶ್ರೀ ಹನುನುಂತದೇವರ ದಂಡಕ

ಹನುಮಂತ ಭೂಪಾ
ಸದ್ಗುಣಮಣಿ ಶಾಂತರೂಪಾ || ಪ ||

ಹನುಮಂತ ಮಹಾಮುನೀಶ ವಾಯು
ತನಯ ವಾನರೇಂದ್ರ ವನಚರ
ಶುಭಕಿರಣ ವಿಹಾರನು ಮಹಿಮಾಗಾರಾ
ಅಂಜನೀಕುಮಾರಾ ಸುಜನೋದ್ದಾರಾ ಕುಜನೋತ್ಪಾಲನಾ
ಹೋ ಭಕ್ತಪ್ರಾಣ ಪಂಚಪ್ರಾಣಾ ನಮಸ್ತುತೆ
ಕ್ಷೋಣಿಪಾಲ ರಘುಚರಣ ಸೇವಕಾ ಕಪಿವರ ಕರುಣ ಕೃಪಾಳು ||೧||

ಹರಿ ರಾಮ ಚಾರಕಾ ನಿರುಪಮ ನಿರಹಂಕರ ಕರಾ ಸಂಚಾರ
ಚರಿತ ಭೂಪರಾ ಬಹುಭರದಿ ಲಂಕಾಪುರಕೆ ಕಪಿಗಳ
ನೆರಪಿ ವಿಸ್ತರಾ ರಾವಣಸುರಾನುರುಹಿದಾ ದೀರಾ
ಕುಂಭಕರ್ಣರಾ ತಾಟಕಿಯ ಭರಾ ದೂಷಣ
ಖರಾದಿಗಳ ಸಂಹರಾ ಪರಾಕ್ರಮ ವೀರಾ ನಿನ್ನ ಶ್ರೀಕರ
ಚರಣಕಮಲಕೆ ಪರಾಕು ವಂದಿಪೆ ಶರಣು ||೨||

ಜಿತೇಂದ್ರಿಯ ಜಯ ಶುಭಮತೀ ಜಲಸ್ತಟ
ಪಥಾಸಾರಿ ನಿರ್ಮಿತಾ ನಿರಂತರ
ಹತಾಶ ದಾನವ ಪತೀಂದ್ರಜಿತುವಿನ ಮಥನ ಮೂರುತಿ ನತಾ
ವಿಭೀಷಣ ಗತಿಮುಕ್ತಿಯಾ ಪಥ ವಾಯಕಾ ಹಿತಾ ಸಾಯಕಾ
ವೃತಸ್ತಂಭನಾ ಅತೀತ ಮೂರುತಿ ನುತಿಪೆ
ನಿನ್ನ ಪಾದಗತಿಯೆನುತ ಸರ್ವಥಾ ಸೇವಿಪೆ |!೩||

ಭಲಾವಂತ ಬಾಲಕಾ ರಾಮ ಭೂಪಾಲ ರಘುಸುತ
ಸಲುಹಿ ಸಮರದಿ ಕಲಿ ಲಕ್ಷ್ಮಣನಿಗೊಲಿದು ಜೀವನ
ಫಲಾಗೊಳಿಸಿ ಪಾತಾಳಕಿಳಿದು ಮಹಾ
ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವ-ಕುಶ ಕುಮಾರರ
ಛಲಾಗೆಲಿಸಿ ಜಾನಕಿಯ ರಾಮ ಪದಕೊಲಿಸಿ ನಿಜ
ಲೀಲಾ ಮೂರುತಿ ಭಲೆ ಬ್ರಹ್ಮಋಷಿ ಕುಲೊತ್ತಮಂ ಭಜೇ
ಬಾಲದಂಡ ಬಲಭೀಮದಯಾಳು ||೪||

ಮಂಡಲೀಶ ಕೋದಂಡ ಹರೀವರ ಪಾಂಡುತನಯ
ಗಾಂಡಿವಿರಥಾಗ್ರದಿ ಕಂಡು ಪತಾಕಿನಿ
ಕುಂಡಲಿಯೋಳ್ ನಿನ್ನ ಅಂಡಲಿಯಲು ಕುರುಸೈನ್ಯ ಕಲಹದೋಳ್
ದಿಂಡುಗೆಡಹಿ ಬ್ರಹ್ಮಾಂಡಕಿಳಿದು ಬಹು ಪುಂಡಗ್ರಾಮ ಅತಿಗೇರಿ ಸ್ಥಳದಿ ಪ್ರ-
ಚಂಡ ವೀರ ಹನುಮಂತ ಪ್ರಭೋ
ಉದ್ದಂಡ ಗುರುಗೋವಿಂದನ ಕರುಣದಿ
ಕಂಡುಸುರುವೆ ನಿನ್ನ ಪಾದಕಮಲ ಕರ
ದಂಡಯೆತ್ತಿ ನಮೋಯೆಂಬೆನೈ || ೫ ||
*****

 

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...