Home / ಕವನ / ಕವಿತೆ / ಶ್ರೀ ಹನುನುಂತದೇವರ ದಂಡಕ

ಶ್ರೀ ಹನುನುಂತದೇವರ ದಂಡಕ

ಹನುಮಂತ ಭೂಪಾ
ಸದ್ಗುಣಮಣಿ ಶಾಂತರೂಪಾ || ಪ ||

ಹನುಮಂತ ಮಹಾಮುನೀಶ ವಾಯು
ತನಯ ವಾನರೇಂದ್ರ ವನಚರ
ಶುಭಕಿರಣ ವಿಹಾರನು ಮಹಿಮಾಗಾರಾ
ಅಂಜನೀಕುಮಾರಾ ಸುಜನೋದ್ದಾರಾ ಕುಜನೋತ್ಪಾಲನಾ
ಹೋ ಭಕ್ತಪ್ರಾಣ ಪಂಚಪ್ರಾಣಾ ನಮಸ್ತುತೆ
ಕ್ಷೋಣಿಪಾಲ ರಘುಚರಣ ಸೇವಕಾ ಕಪಿವರ ಕರುಣ ಕೃಪಾಳು ||೧||

ಹರಿ ರಾಮ ಚಾರಕಾ ನಿರುಪಮ ನಿರಹಂಕರ ಕರಾ ಸಂಚಾರ
ಚರಿತ ಭೂಪರಾ ಬಹುಭರದಿ ಲಂಕಾಪುರಕೆ ಕಪಿಗಳ
ನೆರಪಿ ವಿಸ್ತರಾ ರಾವಣಸುರಾನುರುಹಿದಾ ದೀರಾ
ಕುಂಭಕರ್ಣರಾ ತಾಟಕಿಯ ಭರಾ ದೂಷಣ
ಖರಾದಿಗಳ ಸಂಹರಾ ಪರಾಕ್ರಮ ವೀರಾ ನಿನ್ನ ಶ್ರೀಕರ
ಚರಣಕಮಲಕೆ ಪರಾಕು ವಂದಿಪೆ ಶರಣು ||೨||

ಜಿತೇಂದ್ರಿಯ ಜಯ ಶುಭಮತೀ ಜಲಸ್ತಟ
ಪಥಾಸಾರಿ ನಿರ್ಮಿತಾ ನಿರಂತರ
ಹತಾಶ ದಾನವ ಪತೀಂದ್ರಜಿತುವಿನ ಮಥನ ಮೂರುತಿ ನತಾ
ವಿಭೀಷಣ ಗತಿಮುಕ್ತಿಯಾ ಪಥ ವಾಯಕಾ ಹಿತಾ ಸಾಯಕಾ
ವೃತಸ್ತಂಭನಾ ಅತೀತ ಮೂರುತಿ ನುತಿಪೆ
ನಿನ್ನ ಪಾದಗತಿಯೆನುತ ಸರ್ವಥಾ ಸೇವಿಪೆ |!೩||

ಭಲಾವಂತ ಬಾಲಕಾ ರಾಮ ಭೂಪಾಲ ರಘುಸುತ
ಸಲುಹಿ ಸಮರದಿ ಕಲಿ ಲಕ್ಷ್ಮಣನಿಗೊಲಿದು ಜೀವನ
ಫಲಾಗೊಳಿಸಿ ಪಾತಾಳಕಿಳಿದು ಮಹಾ
ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವ-ಕುಶ ಕುಮಾರರ
ಛಲಾಗೆಲಿಸಿ ಜಾನಕಿಯ ರಾಮ ಪದಕೊಲಿಸಿ ನಿಜ
ಲೀಲಾ ಮೂರುತಿ ಭಲೆ ಬ್ರಹ್ಮಋಷಿ ಕುಲೊತ್ತಮಂ ಭಜೇ
ಬಾಲದಂಡ ಬಲಭೀಮದಯಾಳು ||೪||

ಮಂಡಲೀಶ ಕೋದಂಡ ಹರೀವರ ಪಾಂಡುತನಯ
ಗಾಂಡಿವಿರಥಾಗ್ರದಿ ಕಂಡು ಪತಾಕಿನಿ
ಕುಂಡಲಿಯೋಳ್ ನಿನ್ನ ಅಂಡಲಿಯಲು ಕುರುಸೈನ್ಯ ಕಲಹದೋಳ್
ದಿಂಡುಗೆಡಹಿ ಬ್ರಹ್ಮಾಂಡಕಿಳಿದು ಬಹು ಪುಂಡಗ್ರಾಮ ಅತಿಗೇರಿ ಸ್ಥಳದಿ ಪ್ರ-
ಚಂಡ ವೀರ ಹನುಮಂತ ಪ್ರಭೋ
ಉದ್ದಂಡ ಗುರುಗೋವಿಂದನ ಕರುಣದಿ
ಕಂಡುಸುರುವೆ ನಿನ್ನ ಪಾದಕಮಲ ಕರ
ದಂಡಯೆತ್ತಿ ನಮೋಯೆಂಬೆನೈ || ೫ ||
*****

 

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...