Home / ಕವನ / ಕವಿತೆ / ಶ್ರೀ ಬಸವೇಶ್ವರ ದಂಡಕ

ಶ್ರೀ ಬಸವೇಶ್ವರ ದಂಡಕ

ಬಸವೇಶ್ವರನ ಒಂದು ಪಾದವ ರುದ್ರ ಪಿಡಿದನು
ಬಸವೇಶ್ವರನ ಒಂದು ಪಾದವ ವಿಷ್ಣು ಪಿಡಿದನು
ಬಸವೇಶ್ವರನ ಒಂದು ಪಾದವ ತೆತ್ತೀಸಕೋಟಿ ದೇವತೆಗಳು ಪಿಡಿದರು
ಬಸವೇಶ್ವರನೇ ಸಕಲ ಜಗವನು ನಾಲ್ಕುಯುಗದಿ ಸಲಹುವನು
ನಂದಿ ಜಯ ಜಯ ಎನುತಲಿಪ್ಪರು
ಗಂಗಾ ಪಾರ್ವತಾದೇವಿಯರು ಬಸವೇಶ್ವರನ ವಶಿಕರು
ಬಸವೇಶ್ವರನ ಒಂದು ಪಾದ ಮಂದರಗಿರಿ ಪರ್ವತದ ತುದಿಯ ಮೇಲೆ
ಬಸವೇಶ್ವರನ ಒಂದು ಪಾದ ಲಂಕಾದ್ರಿ ಪರ್ವತದ ಶಿಖರದ ಮೇಲೆ
ಬಸವೇಶ್ವರನ ಒಂದು ಪಾದ ಸಿಂಹಳದ್ವೀಪದ ಗಡ್ಡೆಯ ಮೇಲೆ
ಬಸವೇಶ್ವರನ ಒಂದು ಪಾದ ಜಂಬುದ್ವೀಪದ ಗಡ್ಡೆಯ ಮೇಲೆ
ಬಸವೇಶ್ವರನ ನಾಲ್ಕು ಪಾದಗಳ ಮೇಲೆ ನಾಲ್ಕು ವೇದಗಳು ಹುಟ್ಟಿದವು
ಅದು ಎಂತೆಂದೊಡೆ, ಯಜುರ್ವೇದ, ಋಗ್ವೇದ, ಸಾಮವೇದ,
ಅಥರ್ವಣವೇದ
ಈ ನಾಲ್ಕು ವೇದಗಳು ಸ್ವರ್ಗ ಮರ್ತ್ಯ ಪಾತಾಳದೊಳಗೆ ಇದ್ದ ವೇದಗಳಾ
ವಿಷ್ಣು ತಂದು ಬ್ರಹ್ಮನಿಗೆ ಕೊಟ್ಟನು
ಬ್ರಹ್ಮನು ತಂದು ಸರಸ್ವತಿಗೆ ಕೊಟ್ಟನು
ಸರಸ್ವತಿಯು ತಂದು ವಿಘ್ನೇಶ್ವರನಿಗೆ ಕೊಟ್ಟಳು
ವಿಘ್ನೇಶ್ವರನು ತಂದು ರೇವಣಸಿದ್ದೇಶ್ವರನಿಗೆ ಕೊಟ್ಟನು
ರೇವಣ್ಡಸಿದ್ದೇಶ್ವರನು ತಂದು ಎನಗೆ ಕೊಟ್ಟನು
ನಾ ಮುಟ್ಟಿ ಹವಲಿಕ್ಕಿದೆ.
ಎಂಟು ದಿಕ್ಕಿಗೆ ಎಂಟು ಜನ ದುರ್ಗಿಯರ ಕಾವಲವು
ಎಂಟು ದಿಕ್ಕಿಗೆ ಎಂಟು ಮಧುಕರಿಯ ಕಾವಲವು
ಎಂಟು ದಿಕ್ಕಿಗೆ ಎಂಟು ಶಾರ್ದೂಲ ಕಾವಲವು
ನಡುವೆ ಸರ್ಪನ ಕಾವಲವು
ಮೂರುದಿನಕ್ಕೆ ಹುಟ್ಟಿದ ಗೋಲದೇವತೆಯ ಕಾವಲವು
ಆ ಗೋಲದೇವತೆಗೆ ನಳನ ಕಾವಲವು
ಆ ನಳನಿಗೆ ಈಶಾನ್ಯನ ಕಾವಲವು
ಆ ಈಶಾನ್ಯನಿಗೆ ಇಂದ್ರನ ಕಾವಲವು
ಆ ಇಂದ್ರನಿಗೆ ಅಗ್ನಿಯ ಕಾವಲವು
ಆ ಆಗ್ನಿಗೆ ಯಮನ ಕಾವಲವು
ಆ ಯಮನಿಗೆ ನೈರುತ್ಯನ ಕಾವಲವು
ಆ ನೈರುತ್ಯನಿಗೆ ವರುಣನ ಕಾವಲವು
ಆ ವರುಣನಿಗೆ ಧನಪನ ಕಾವಲವು
ಆ ಧನಪನಿಗೆ ತೆಂಕನ ದಿಕ್ಕಿನ ಲಂಕೆಯ ಹನುಮಂತನ ಕಾವಲವು
ಆ ಲಂಕೆಯ ಹನುಮಂತನಿಗೆ ಪೂರ್ವಭಾಗದ ಕಾಲೇಶನ ಕಾವಲವು
ಆ ಕಾಲೇಶನಿಗ ಮೋಕ್ಷ ಬ್ರಹ್ಮನ ಕಾವಲವು
ಆ ಮೋಕ್ಷ ಬ್ರಹ್ಮನಿಗೆ ಸರಸ್ವತಿಯ ಕಾವಲವು
ಆ ಸರಸ್ವತಿಗೆ ವೀರಭದ್ರನ ಕಾವಲವು
ಆ ವೀರಭದ್ರನಿಗೆ ಕಾಲಿಕಾದೇವಿಯ ಕಾವಲವು
ಆ ಕಾಲಿಕಾದೇವಿಗೆ ಪಾರ್ವತಿಯ ಕಾವಲವು
ಆ ಪಾರ್ವತಿಗೆ ಕೈಯೊಳಗೆ ಪಿಡಿದಿರ್ದ ತ್ರಿಶೂಲವೇ ಕಾವಲವು
ಆ ತ್ರಿಶೂಲಂಗೆ ಕೆಂಚೆಡೆಯ ಪರಮೇಶ್ವರನ ಕಾವಲವು
ಆ ಕೆಂಚೆಡೆಯ ಪರಮೇಶ್ವರನಿಗೆ ಏಕಮುಖದವರ ಕಾವಲವು
ಆ ಏಕಮುಖದವರಿಗೆ ದ್ವಿಮುಖದವರ ಕಾವಲವು
ಆ ದ್ವಿಮುಖದವರಿಗೆ ತ್ರಿಮುಖದವರ ಕಾವಲವು
ಆ ತ್ರಿಮುಖದವರಿಗೆ ಚತುರ್ಮುಖದವರ ಕಾವಲವು
ಆ ಚತುರ್ಮುಖದವರಿಗೆ ಪಂಚಮುಖದವರ ಕಾವಲವು
ಆ ಪಂಚಮುಖದವರಿಗೆ ಷಣ್ಮುಖದವರ ಕಾವಲವು
ಆ ಷಣ್ಮುಖದವರಿಗೆ ಸಪ್ತಮುಖದವರ ಕಾವಲವು
ಆ ಸಪ್ತಮುಖದವರಿಗೆ ಅಷ್ಟಮುಖದವರ ಕಾವಲವು
ಆ ಆಷ್ಟಮುಖದವರಿಗೆ ನವಮುಖದವರ ಕಾವಲವು
ಆ ನವಮುಖದವರಿಗೆ ದಶಮುಖದವರ ಕಾವಲವು
ಆ ದಶಮುಖದವರಿಗೆ ಏಕಮುಖದವರ ಕಾವಲವು
ಇಂತು ಕಾವಲವ ಕಟ್ಟಿ ಮೂರುಸಾರೆ ವಿಭೂತಿಯ ಮಂತ್ರಿಸಿ
ಫಣಿಯಲ್ಲಿ ಧರಿಸಿಕೊಂಡು ಜಗದ ಮುಂದೆ ಹೋಗಲು
ರಾಜ್ಕವಶ ಜನವಶ ಮುಖವಶವಾಗುವದು
ಇಂತು ಅರವತ್ತಾರು ಕೋಟಿ ಭೂತ ಪ್ರೇತ ಪಿಶಾಚಿಗಳು
ಶಿಶುನಾಳಧೀಶನ ಕರುಣದಿಂದ ಬಿಟ್ಟು ಹೋಗುವವು
ಗುರುನಾಥ ಗೋವಿಂದನ ಪಾದಸಾಕ್ಷಿ
ಓಂ ಶಾಂತಿ ಶಾಂತಿ ಶಾಂತಿ|
*****

 

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...