ಶ್ರೀ ಬಸವೇಶ್ವರ ದಂಡಕ

ಬಸವೇಶ್ವರನ ಒಂದು ಪಾದವ ರುದ್ರ ಪಿಡಿದನು
ಬಸವೇಶ್ವರನ ಒಂದು ಪಾದವ ವಿಷ್ಣು ಪಿಡಿದನು
ಬಸವೇಶ್ವರನ ಒಂದು ಪಾದವ ತೆತ್ತೀಸಕೋಟಿ ದೇವತೆಗಳು ಪಿಡಿದರು
ಬಸವೇಶ್ವರನೇ ಸಕಲ ಜಗವನು ನಾಲ್ಕುಯುಗದಿ ಸಲಹುವನು
ನಂದಿ ಜಯ ಜಯ ಎನುತಲಿಪ್ಪರು
ಗಂಗಾ ಪಾರ್ವತಾದೇವಿಯರು ಬಸವೇಶ್ವರನ ವಶಿಕರು
ಬಸವೇಶ್ವರನ ಒಂದು ಪಾದ ಮಂದರಗಿರಿ ಪರ್ವತದ ತುದಿಯ ಮೇಲೆ
ಬಸವೇಶ್ವರನ ಒಂದು ಪಾದ ಲಂಕಾದ್ರಿ ಪರ್ವತದ ಶಿಖರದ ಮೇಲೆ
ಬಸವೇಶ್ವರನ ಒಂದು ಪಾದ ಸಿಂಹಳದ್ವೀಪದ ಗಡ್ಡೆಯ ಮೇಲೆ
ಬಸವೇಶ್ವರನ ಒಂದು ಪಾದ ಜಂಬುದ್ವೀಪದ ಗಡ್ಡೆಯ ಮೇಲೆ
ಬಸವೇಶ್ವರನ ನಾಲ್ಕು ಪಾದಗಳ ಮೇಲೆ ನಾಲ್ಕು ವೇದಗಳು ಹುಟ್ಟಿದವು
ಅದು ಎಂತೆಂದೊಡೆ, ಯಜುರ್ವೇದ, ಋಗ್ವೇದ, ಸಾಮವೇದ,
ಅಥರ್ವಣವೇದ
ಈ ನಾಲ್ಕು ವೇದಗಳು ಸ್ವರ್ಗ ಮರ್ತ್ಯ ಪಾತಾಳದೊಳಗೆ ಇದ್ದ ವೇದಗಳಾ
ವಿಷ್ಣು ತಂದು ಬ್ರಹ್ಮನಿಗೆ ಕೊಟ್ಟನು
ಬ್ರಹ್ಮನು ತಂದು ಸರಸ್ವತಿಗೆ ಕೊಟ್ಟನು
ಸರಸ್ವತಿಯು ತಂದು ವಿಘ್ನೇಶ್ವರನಿಗೆ ಕೊಟ್ಟಳು
ವಿಘ್ನೇಶ್ವರನು ತಂದು ರೇವಣಸಿದ್ದೇಶ್ವರನಿಗೆ ಕೊಟ್ಟನು
ರೇವಣ್ಡಸಿದ್ದೇಶ್ವರನು ತಂದು ಎನಗೆ ಕೊಟ್ಟನು
ನಾ ಮುಟ್ಟಿ ಹವಲಿಕ್ಕಿದೆ.
ಎಂಟು ದಿಕ್ಕಿಗೆ ಎಂಟು ಜನ ದುರ್ಗಿಯರ ಕಾವಲವು
ಎಂಟು ದಿಕ್ಕಿಗೆ ಎಂಟು ಮಧುಕರಿಯ ಕಾವಲವು
ಎಂಟು ದಿಕ್ಕಿಗೆ ಎಂಟು ಶಾರ್ದೂಲ ಕಾವಲವು
ನಡುವೆ ಸರ್ಪನ ಕಾವಲವು
ಮೂರುದಿನಕ್ಕೆ ಹುಟ್ಟಿದ ಗೋಲದೇವತೆಯ ಕಾವಲವು
ಆ ಗೋಲದೇವತೆಗೆ ನಳನ ಕಾವಲವು
ಆ ನಳನಿಗೆ ಈಶಾನ್ಯನ ಕಾವಲವು
ಆ ಈಶಾನ್ಯನಿಗೆ ಇಂದ್ರನ ಕಾವಲವು
ಆ ಇಂದ್ರನಿಗೆ ಅಗ್ನಿಯ ಕಾವಲವು
ಆ ಆಗ್ನಿಗೆ ಯಮನ ಕಾವಲವು
ಆ ಯಮನಿಗೆ ನೈರುತ್ಯನ ಕಾವಲವು
ಆ ನೈರುತ್ಯನಿಗೆ ವರುಣನ ಕಾವಲವು
ಆ ವರುಣನಿಗೆ ಧನಪನ ಕಾವಲವು
ಆ ಧನಪನಿಗೆ ತೆಂಕನ ದಿಕ್ಕಿನ ಲಂಕೆಯ ಹನುಮಂತನ ಕಾವಲವು
ಆ ಲಂಕೆಯ ಹನುಮಂತನಿಗೆ ಪೂರ್ವಭಾಗದ ಕಾಲೇಶನ ಕಾವಲವು
ಆ ಕಾಲೇಶನಿಗ ಮೋಕ್ಷ ಬ್ರಹ್ಮನ ಕಾವಲವು
ಆ ಮೋಕ್ಷ ಬ್ರಹ್ಮನಿಗೆ ಸರಸ್ವತಿಯ ಕಾವಲವು
ಆ ಸರಸ್ವತಿಗೆ ವೀರಭದ್ರನ ಕಾವಲವು
ಆ ವೀರಭದ್ರನಿಗೆ ಕಾಲಿಕಾದೇವಿಯ ಕಾವಲವು
ಆ ಕಾಲಿಕಾದೇವಿಗೆ ಪಾರ್ವತಿಯ ಕಾವಲವು
ಆ ಪಾರ್ವತಿಗೆ ಕೈಯೊಳಗೆ ಪಿಡಿದಿರ್ದ ತ್ರಿಶೂಲವೇ ಕಾವಲವು
ಆ ತ್ರಿಶೂಲಂಗೆ ಕೆಂಚೆಡೆಯ ಪರಮೇಶ್ವರನ ಕಾವಲವು
ಆ ಕೆಂಚೆಡೆಯ ಪರಮೇಶ್ವರನಿಗೆ ಏಕಮುಖದವರ ಕಾವಲವು
ಆ ಏಕಮುಖದವರಿಗೆ ದ್ವಿಮುಖದವರ ಕಾವಲವು
ಆ ದ್ವಿಮುಖದವರಿಗೆ ತ್ರಿಮುಖದವರ ಕಾವಲವು
ಆ ತ್ರಿಮುಖದವರಿಗೆ ಚತುರ್ಮುಖದವರ ಕಾವಲವು
ಆ ಚತುರ್ಮುಖದವರಿಗೆ ಪಂಚಮುಖದವರ ಕಾವಲವು
ಆ ಪಂಚಮುಖದವರಿಗೆ ಷಣ್ಮುಖದವರ ಕಾವಲವು
ಆ ಷಣ್ಮುಖದವರಿಗೆ ಸಪ್ತಮುಖದವರ ಕಾವಲವು
ಆ ಸಪ್ತಮುಖದವರಿಗೆ ಅಷ್ಟಮುಖದವರ ಕಾವಲವು
ಆ ಆಷ್ಟಮುಖದವರಿಗೆ ನವಮುಖದವರ ಕಾವಲವು
ಆ ನವಮುಖದವರಿಗೆ ದಶಮುಖದವರ ಕಾವಲವು
ಆ ದಶಮುಖದವರಿಗೆ ಏಕಮುಖದವರ ಕಾವಲವು
ಇಂತು ಕಾವಲವ ಕಟ್ಟಿ ಮೂರುಸಾರೆ ವಿಭೂತಿಯ ಮಂತ್ರಿಸಿ
ಫಣಿಯಲ್ಲಿ ಧರಿಸಿಕೊಂಡು ಜಗದ ಮುಂದೆ ಹೋಗಲು
ರಾಜ್ಕವಶ ಜನವಶ ಮುಖವಶವಾಗುವದು
ಇಂತು ಅರವತ್ತಾರು ಕೋಟಿ ಭೂತ ಪ್ರೇತ ಪಿಶಾಚಿಗಳು
ಶಿಶುನಾಳಧೀಶನ ಕರುಣದಿಂದ ಬಿಟ್ಟು ಹೋಗುವವು
ಗುರುನಾಥ ಗೋವಿಂದನ ಪಾದಸಾಕ್ಷಿ
ಓಂ ಶಾಂತಿ ಶಾಂತಿ ಶಾಂತಿ|
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಳಲಾರೆ ತಗಣಿಕಾಟವಾ
Next post ಶ್ರೀ ಹನುನುಂತದೇವರ ದಂಡಕ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…