ರಕ್ತವನ್ನು ಶುದ್ಧಿಕರಿಸುವ ಡೈಯಾಲೈಸರ್

ರಕ್ತವನ್ನು ಶುದ್ಧಿಕರಿಸುವ ಡೈಯಾಲೈಸರ್

(Dialyser!)

ನಮ್ಮ ದೇಹದಲ್ಲಿರುವ ಕೋಶಗಳಲ್ಲಿ ಪ್ರತಿದಿನವೂ ರಕ್ತ ಅಶುದ್ಧಿಯಾಗುತ್ತಲೇ ಇರುತ್ತದೆ. ಏಕಂದರೆ ನಮ್ಮ ದೇಹದ ಕೋಶಗಳಲ್ಲಿ ಮಲೀನ ಪದಾರ್ಥಗಳು ಪ್ರತಿದಿನ ಉತ್ಪತ್ತಿಯಾಗುತ್ತಲೇ ಇರುತ್ತವೆ. ನಮ್ಮ ಮೂತ್ರ ಪಿಂಡಗಳು ಇಂತಹ ಮಲಿನರಕ್ತವನ್ನು ಶುದ್ಧೀಕರಿಸುತ್ತ ಚಲನಶೀಲಗೊಂಡಿರುತ್ತವೆ. ಮುಷ್ಟಿ ಗಾತ್ರದಲ್ಲಿರುವ ಮೂತ್ರ ಪಿಂಡಗಳಲ್ಲಿ ರಕ್ತವು ಹಾಯ್ದು ಹೋಗುತ್ತದೆ. ಮತ್ತು ಅಲ್ಲಿ ರಕ್ತ ಶುದ್ಧಿಗೊಂಡು ದೇಹದಲ್ಲಿ ಪ್ರವಹಿಸುತ್ತಾ ಹೋಗುತ್ತದೆ. ಅಶುದ್ಧ ಅಥವಾ ಮಲಿನ ಪದಾರ್ಥಗಳನ್ನು ಮೂತ್ರಪಿಂಡವು ಮೂತ್ರದ ಮೂಲಕ ಹೊರಗೆಡುತ್ತದೆ. ಈ ಕಾರ್ಯಕ್ಕೆ ‘ಡೈಯಾಲೈಸರ್’ ಎಂದು ಕರೆಯುತ್ತಾರೆ. ಯಾವುದೋ ಕಾರಣದಿಂದ ಈ ಮೂತ್ರ ಪಿಂಡಗಳು ತಮ್ಮ ಕಾರ್ಯವನ್ನು ಸೂಕ್ತ ರೀತಿಯಲ್ಲಿ ಮಾಡದಿದ್ದಾಗ ದೇಹದಲ್ಲಿರುವ ಮಲಿನ ಪದಾರ್ಥಗಳು ರಕ್ತದಲ್ಲಿಯೇ ಸಂಗ್ರಹವಾಗಿ ರಕ್ತವು ವಿಷವಾಗಿ ಸಾವು ಸಂಭವಿಸಬಹುದು.

ಇಂಥಹ ಅಪಾಯಕಾರಿ ಸನ್ನಿವೇಶದಲ್ಲಿ ವಿಜ್ಞಾನವು ಒಂದು ಪ್ರಗತಿದಾಯಕ ಯಂತ್ರವನ್ನು ಕಂಡುಹಿಡಿದಿದೆ. ಮೂತ್ರ ಪಿಂಡಗಳು ತಮ್ಮ ಕಾರ್ಯವನ್ನು ನಿರ್ವಹಿಸದಿದ್ದಾಗ ಆ ಕಾರ್ಯವನ್ನು ಈ ಯಂತ್ರವೇ ನೆರವೇರಿಸುತ್ತದೆ, ಇದರ ಹೆಸರು ಡೈಯಾಲೈಸರ್. ರಕ್ತನಾಳದಿಂದ ರಕ್ತವು ಈ ಉಪಕರಣಕ್ಕೆ ಬರುವಂತೆ ಮಾಡಿ ರಕ್ತವನ್ನು ಪರಿಶುದ್ದಗೊಳಿಸಿ ಅದನ್ನು ಅಭಿದಮನಿಗೆ (Vein) ರವಾನಿಸಲಾಗುವುದು. ಈ ಯಂತ್ರ ಮೂತ್ರ ಪಿಂಡದಿಂದ ಕಾರ್ಯ ಮಾಡಿದರೂ ಮೂತ್ರ ಪಿಂಡಕ್ಕೆ ಸಾಟಿಯಾಗಲಾರದು. ಆದರೂ ನೋವಿನಿಂದ ಬಳಲುತ್ತಿರುವ ರೋಗಿಗೆ ತಾತ್ಕಾಲಿಕ ಪರಿಹಾರ ಒದಗಿಸಿ ಅವನ ಸಾವನ್ನು ಮುಂದೂಡುತ್ತದೆ. ಇಂಥಹ ರೋಗಿಗೆ ಪ್ರತಿವಾರ ಎರಡು ಸಲವಾದರೂ ಡಯಾಲಿಸಿಸ್ ಅಗತ್ಯವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಿ ನಾರೆನಲುಂಟೇ ? ನಾರಿಕೇಳವನು ಸುಲಿದುಣಬೇಡವೇ ?
Next post ಹರಿಯೇ ನೀನು ನಂಬಿದವರ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…