Home / ಲೇಖನ / ವಿಜ್ಞಾನ / ರಕ್ತವನ್ನು ಶುದ್ಧಿಕರಿಸುವ ಡೈಯಾಲೈಸರ್

ರಕ್ತವನ್ನು ಶುದ್ಧಿಕರಿಸುವ ಡೈಯಾಲೈಸರ್

(Dialyser!)

ನಮ್ಮ ದೇಹದಲ್ಲಿರುವ ಕೋಶಗಳಲ್ಲಿ ಪ್ರತಿದಿನವೂ ರಕ್ತ ಅಶುದ್ಧಿಯಾಗುತ್ತಲೇ ಇರುತ್ತದೆ. ಏಕಂದರೆ ನಮ್ಮ ದೇಹದ ಕೋಶಗಳಲ್ಲಿ ಮಲೀನ ಪದಾರ್ಥಗಳು ಪ್ರತಿದಿನ ಉತ್ಪತ್ತಿಯಾಗುತ್ತಲೇ ಇರುತ್ತವೆ. ನಮ್ಮ ಮೂತ್ರ ಪಿಂಡಗಳು ಇಂತಹ ಮಲಿನರಕ್ತವನ್ನು ಶುದ್ಧೀಕರಿಸುತ್ತ ಚಲನಶೀಲಗೊಂಡಿರುತ್ತವೆ. ಮುಷ್ಟಿ ಗಾತ್ರದಲ್ಲಿರುವ ಮೂತ್ರ ಪಿಂಡಗಳಲ್ಲಿ ರಕ್ತವು ಹಾಯ್ದು ಹೋಗುತ್ತದೆ. ಮತ್ತು ಅಲ್ಲಿ ರಕ್ತ ಶುದ್ಧಿಗೊಂಡು ದೇಹದಲ್ಲಿ ಪ್ರವಹಿಸುತ್ತಾ ಹೋಗುತ್ತದೆ. ಅಶುದ್ಧ ಅಥವಾ ಮಲಿನ ಪದಾರ್ಥಗಳನ್ನು ಮೂತ್ರಪಿಂಡವು ಮೂತ್ರದ ಮೂಲಕ ಹೊರಗೆಡುತ್ತದೆ. ಈ ಕಾರ್ಯಕ್ಕೆ ‘ಡೈಯಾಲೈಸರ್’ ಎಂದು ಕರೆಯುತ್ತಾರೆ. ಯಾವುದೋ ಕಾರಣದಿಂದ ಈ ಮೂತ್ರ ಪಿಂಡಗಳು ತಮ್ಮ ಕಾರ್ಯವನ್ನು ಸೂಕ್ತ ರೀತಿಯಲ್ಲಿ ಮಾಡದಿದ್ದಾಗ ದೇಹದಲ್ಲಿರುವ ಮಲಿನ ಪದಾರ್ಥಗಳು ರಕ್ತದಲ್ಲಿಯೇ ಸಂಗ್ರಹವಾಗಿ ರಕ್ತವು ವಿಷವಾಗಿ ಸಾವು ಸಂಭವಿಸಬಹುದು.

ಇಂಥಹ ಅಪಾಯಕಾರಿ ಸನ್ನಿವೇಶದಲ್ಲಿ ವಿಜ್ಞಾನವು ಒಂದು ಪ್ರಗತಿದಾಯಕ ಯಂತ್ರವನ್ನು ಕಂಡುಹಿಡಿದಿದೆ. ಮೂತ್ರ ಪಿಂಡಗಳು ತಮ್ಮ ಕಾರ್ಯವನ್ನು ನಿರ್ವಹಿಸದಿದ್ದಾಗ ಆ ಕಾರ್ಯವನ್ನು ಈ ಯಂತ್ರವೇ ನೆರವೇರಿಸುತ್ತದೆ, ಇದರ ಹೆಸರು ಡೈಯಾಲೈಸರ್. ರಕ್ತನಾಳದಿಂದ ರಕ್ತವು ಈ ಉಪಕರಣಕ್ಕೆ ಬರುವಂತೆ ಮಾಡಿ ರಕ್ತವನ್ನು ಪರಿಶುದ್ದಗೊಳಿಸಿ ಅದನ್ನು ಅಭಿದಮನಿಗೆ (Vein) ರವಾನಿಸಲಾಗುವುದು. ಈ ಯಂತ್ರ ಮೂತ್ರ ಪಿಂಡದಿಂದ ಕಾರ್ಯ ಮಾಡಿದರೂ ಮೂತ್ರ ಪಿಂಡಕ್ಕೆ ಸಾಟಿಯಾಗಲಾರದು. ಆದರೂ ನೋವಿನಿಂದ ಬಳಲುತ್ತಿರುವ ರೋಗಿಗೆ ತಾತ್ಕಾಲಿಕ ಪರಿಹಾರ ಒದಗಿಸಿ ಅವನ ಸಾವನ್ನು ಮುಂದೂಡುತ್ತದೆ. ಇಂಥಹ ರೋಗಿಗೆ ಪ್ರತಿವಾರ ಎರಡು ಸಲವಾದರೂ ಡಯಾಲಿಸಿಸ್ ಅಗತ್ಯವಾಗಿದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್