ರಕ್ತವನ್ನು ಶುದ್ಧಿಕರಿಸುವ ಡೈಯಾಲೈಸರ್

ರಕ್ತವನ್ನು ಶುದ್ಧಿಕರಿಸುವ ಡೈಯಾಲೈಸರ್

(Dialyser!)

ನಮ್ಮ ದೇಹದಲ್ಲಿರುವ ಕೋಶಗಳಲ್ಲಿ ಪ್ರತಿದಿನವೂ ರಕ್ತ ಅಶುದ್ಧಿಯಾಗುತ್ತಲೇ ಇರುತ್ತದೆ. ಏಕಂದರೆ ನಮ್ಮ ದೇಹದ ಕೋಶಗಳಲ್ಲಿ ಮಲೀನ ಪದಾರ್ಥಗಳು ಪ್ರತಿದಿನ ಉತ್ಪತ್ತಿಯಾಗುತ್ತಲೇ ಇರುತ್ತವೆ. ನಮ್ಮ ಮೂತ್ರ ಪಿಂಡಗಳು ಇಂತಹ ಮಲಿನರಕ್ತವನ್ನು ಶುದ್ಧೀಕರಿಸುತ್ತ ಚಲನಶೀಲಗೊಂಡಿರುತ್ತವೆ. ಮುಷ್ಟಿ ಗಾತ್ರದಲ್ಲಿರುವ ಮೂತ್ರ ಪಿಂಡಗಳಲ್ಲಿ ರಕ್ತವು ಹಾಯ್ದು ಹೋಗುತ್ತದೆ. ಮತ್ತು ಅಲ್ಲಿ ರಕ್ತ ಶುದ್ಧಿಗೊಂಡು ದೇಹದಲ್ಲಿ ಪ್ರವಹಿಸುತ್ತಾ ಹೋಗುತ್ತದೆ. ಅಶುದ್ಧ ಅಥವಾ ಮಲಿನ ಪದಾರ್ಥಗಳನ್ನು ಮೂತ್ರಪಿಂಡವು ಮೂತ್ರದ ಮೂಲಕ ಹೊರಗೆಡುತ್ತದೆ. ಈ ಕಾರ್ಯಕ್ಕೆ ‘ಡೈಯಾಲೈಸರ್’ ಎಂದು ಕರೆಯುತ್ತಾರೆ. ಯಾವುದೋ ಕಾರಣದಿಂದ ಈ ಮೂತ್ರ ಪಿಂಡಗಳು ತಮ್ಮ ಕಾರ್ಯವನ್ನು ಸೂಕ್ತ ರೀತಿಯಲ್ಲಿ ಮಾಡದಿದ್ದಾಗ ದೇಹದಲ್ಲಿರುವ ಮಲಿನ ಪದಾರ್ಥಗಳು ರಕ್ತದಲ್ಲಿಯೇ ಸಂಗ್ರಹವಾಗಿ ರಕ್ತವು ವಿಷವಾಗಿ ಸಾವು ಸಂಭವಿಸಬಹುದು.

ಇಂಥಹ ಅಪಾಯಕಾರಿ ಸನ್ನಿವೇಶದಲ್ಲಿ ವಿಜ್ಞಾನವು ಒಂದು ಪ್ರಗತಿದಾಯಕ ಯಂತ್ರವನ್ನು ಕಂಡುಹಿಡಿದಿದೆ. ಮೂತ್ರ ಪಿಂಡಗಳು ತಮ್ಮ ಕಾರ್ಯವನ್ನು ನಿರ್ವಹಿಸದಿದ್ದಾಗ ಆ ಕಾರ್ಯವನ್ನು ಈ ಯಂತ್ರವೇ ನೆರವೇರಿಸುತ್ತದೆ, ಇದರ ಹೆಸರು ಡೈಯಾಲೈಸರ್. ರಕ್ತನಾಳದಿಂದ ರಕ್ತವು ಈ ಉಪಕರಣಕ್ಕೆ ಬರುವಂತೆ ಮಾಡಿ ರಕ್ತವನ್ನು ಪರಿಶುದ್ದಗೊಳಿಸಿ ಅದನ್ನು ಅಭಿದಮನಿಗೆ (Vein) ರವಾನಿಸಲಾಗುವುದು. ಈ ಯಂತ್ರ ಮೂತ್ರ ಪಿಂಡದಿಂದ ಕಾರ್ಯ ಮಾಡಿದರೂ ಮೂತ್ರ ಪಿಂಡಕ್ಕೆ ಸಾಟಿಯಾಗಲಾರದು. ಆದರೂ ನೋವಿನಿಂದ ಬಳಲುತ್ತಿರುವ ರೋಗಿಗೆ ತಾತ್ಕಾಲಿಕ ಪರಿಹಾರ ಒದಗಿಸಿ ಅವನ ಸಾವನ್ನು ಮುಂದೂಡುತ್ತದೆ. ಇಂಥಹ ರೋಗಿಗೆ ಪ್ರತಿವಾರ ಎರಡು ಸಲವಾದರೂ ಡಯಾಲಿಸಿಸ್ ಅಗತ್ಯವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಿ ನಾರೆನಲುಂಟೇ ? ನಾರಿಕೇಳವನು ಸುಲಿದುಣಬೇಡವೇ ?
Next post ಹರಿಯೇ ನೀನು ನಂಬಿದವರ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys