Home / ಲೇಖನ / ವಿಜ್ಞಾನ / ರಕ್ತವನ್ನು ಶುದ್ಧಿಕರಿಸುವ ಡೈಯಾಲೈಸರ್

ರಕ್ತವನ್ನು ಶುದ್ಧಿಕರಿಸುವ ಡೈಯಾಲೈಸರ್

(Dialyser!)

ನಮ್ಮ ದೇಹದಲ್ಲಿರುವ ಕೋಶಗಳಲ್ಲಿ ಪ್ರತಿದಿನವೂ ರಕ್ತ ಅಶುದ್ಧಿಯಾಗುತ್ತಲೇ ಇರುತ್ತದೆ. ಏಕಂದರೆ ನಮ್ಮ ದೇಹದ ಕೋಶಗಳಲ್ಲಿ ಮಲೀನ ಪದಾರ್ಥಗಳು ಪ್ರತಿದಿನ ಉತ್ಪತ್ತಿಯಾಗುತ್ತಲೇ ಇರುತ್ತವೆ. ನಮ್ಮ ಮೂತ್ರ ಪಿಂಡಗಳು ಇಂತಹ ಮಲಿನರಕ್ತವನ್ನು ಶುದ್ಧೀಕರಿಸುತ್ತ ಚಲನಶೀಲಗೊಂಡಿರುತ್ತವೆ. ಮುಷ್ಟಿ ಗಾತ್ರದಲ್ಲಿರುವ ಮೂತ್ರ ಪಿಂಡಗಳಲ್ಲಿ ರಕ್ತವು ಹಾಯ್ದು ಹೋಗುತ್ತದೆ. ಮತ್ತು ಅಲ್ಲಿ ರಕ್ತ ಶುದ್ಧಿಗೊಂಡು ದೇಹದಲ್ಲಿ ಪ್ರವಹಿಸುತ್ತಾ ಹೋಗುತ್ತದೆ. ಅಶುದ್ಧ ಅಥವಾ ಮಲಿನ ಪದಾರ್ಥಗಳನ್ನು ಮೂತ್ರಪಿಂಡವು ಮೂತ್ರದ ಮೂಲಕ ಹೊರಗೆಡುತ್ತದೆ. ಈ ಕಾರ್ಯಕ್ಕೆ ‘ಡೈಯಾಲೈಸರ್’ ಎಂದು ಕರೆಯುತ್ತಾರೆ. ಯಾವುದೋ ಕಾರಣದಿಂದ ಈ ಮೂತ್ರ ಪಿಂಡಗಳು ತಮ್ಮ ಕಾರ್ಯವನ್ನು ಸೂಕ್ತ ರೀತಿಯಲ್ಲಿ ಮಾಡದಿದ್ದಾಗ ದೇಹದಲ್ಲಿರುವ ಮಲಿನ ಪದಾರ್ಥಗಳು ರಕ್ತದಲ್ಲಿಯೇ ಸಂಗ್ರಹವಾಗಿ ರಕ್ತವು ವಿಷವಾಗಿ ಸಾವು ಸಂಭವಿಸಬಹುದು.

ಇಂಥಹ ಅಪಾಯಕಾರಿ ಸನ್ನಿವೇಶದಲ್ಲಿ ವಿಜ್ಞಾನವು ಒಂದು ಪ್ರಗತಿದಾಯಕ ಯಂತ್ರವನ್ನು ಕಂಡುಹಿಡಿದಿದೆ. ಮೂತ್ರ ಪಿಂಡಗಳು ತಮ್ಮ ಕಾರ್ಯವನ್ನು ನಿರ್ವಹಿಸದಿದ್ದಾಗ ಆ ಕಾರ್ಯವನ್ನು ಈ ಯಂತ್ರವೇ ನೆರವೇರಿಸುತ್ತದೆ, ಇದರ ಹೆಸರು ಡೈಯಾಲೈಸರ್. ರಕ್ತನಾಳದಿಂದ ರಕ್ತವು ಈ ಉಪಕರಣಕ್ಕೆ ಬರುವಂತೆ ಮಾಡಿ ರಕ್ತವನ್ನು ಪರಿಶುದ್ದಗೊಳಿಸಿ ಅದನ್ನು ಅಭಿದಮನಿಗೆ (Vein) ರವಾನಿಸಲಾಗುವುದು. ಈ ಯಂತ್ರ ಮೂತ್ರ ಪಿಂಡದಿಂದ ಕಾರ್ಯ ಮಾಡಿದರೂ ಮೂತ್ರ ಪಿಂಡಕ್ಕೆ ಸಾಟಿಯಾಗಲಾರದು. ಆದರೂ ನೋವಿನಿಂದ ಬಳಲುತ್ತಿರುವ ರೋಗಿಗೆ ತಾತ್ಕಾಲಿಕ ಪರಿಹಾರ ಒದಗಿಸಿ ಅವನ ಸಾವನ್ನು ಮುಂದೂಡುತ್ತದೆ. ಇಂಥಹ ರೋಗಿಗೆ ಪ್ರತಿವಾರ ಎರಡು ಸಲವಾದರೂ ಡಯಾಲಿಸಿಸ್ ಅಗತ್ಯವಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...