ಹರಿಯೇ ನೀನು ನಂಬಿದವರ

ಹರಿಯೇ ನೀನು ನಂಬಿದವರ
ಕೈಯ ಬಿಡವನಲ್ಲವೆಂದು |
ತಿಳಿದು ನಾನು ಅಚಲವಾಗಿ ನಿನ್ನ ನಂಬಿರುವೆನು ||
ಏನೇ ಕಷ್ಟ ಬಂದರೂನು
ನಿನ್ನ ನೆನೆದು ನೀಗಿ ಬಿಡುವೆನು||

ಮತ್ತೆ ಮತ್ತೆ ಬಿಡದೆ ನನ್ನಪಾಪ
ಬೆನ್ನ ಹತ್ತಿಬಂದರೂನು ನಿನ್ನ ಜಪಿಸಿ|
ಎಲ್ಲ ಕರ್ಮವನು ಕಳೆಯುವವರೆಗೂ
ನಿನ್ನ ಸ್ತುತಿಸಿ ಮುಂದೆ ಸಾಗುವೆ|
ನಿನ್ನ ಕೃಪೆಯು ಎನ್ನ
ರಕ್ಷಣೆ ಮಾಡಿತೆಂದುಕೊಳ್ಳುವೆ||

ಕರ್ಮಫಲವು ನೀಡಿದೆಲ್ಲವನ್ನೂ
ಮಹಾ ಭಾಗ್ಯವೆಂದುಕೊಳ್ಳುವೆ|
ಯಾವ ಪಿತೃವನು ದೂಷಿಸದೆ
ಕಾಲ ಕರ್ಮವನು ಮಾಡುತಾ
ನಿನ್ನ ಭಜನೆ ಮಾಡುವೆ|
ಬಂದದ್ದನ್ನೆಲ್ಲಾ ಸಹಿಸಿ
ಮುಂದೆ ದಾರಿ ಮಾಡಿಕೊಳ್ಳುವೆ||

ಮಂದಮತಿಯಾದ ಎನ್ನ ಕ್ಷಮಿಸಿ
ತಿದ್ದಿರೂಪಿಸು ಹರಿಯೇ|
ಜನ್ಮ ಜನ್ಮಾಂತರಕೂ ನಿನ್ನನೇ ನೆನೆಯುವೆ
ನಿನಗೆ ನನ್ನ ಅನಂತ ಅನಂತ
ವಂದನೆಯ ಅರ್ಪಿಸುವೆ
ಸ್ವೀಕರಿಸು ಓ ಎನ್ನ ದೊರೆಯೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಕ್ತವನ್ನು ಶುದ್ಧಿಕರಿಸುವ ಡೈಯಾಲೈಸರ್
Next post ಸಾವು-ನೋವು

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…