ತಾಳಲಾರೆ ತಗಣಿಕಾಟವಾ

ತಾಳಲಾರೆ ತಗಣಿಕಾಟವಾ ಶಿವಹರನು ಬಲ್ಲ
ತಾಳಲಾರೆ ತಗಣಿಕಾಟವಾ ||ಪ||

ತಾಳಲಾರೆ ತಗಣಿಕಾಟಾ
ಘನಘೋರ ಇದರಾರ‍್ಭಾಟ
ಮಾಳಗಿ ಮನಿಯ ಜಂತಿ ಸೇರಿ
ಗೋಳುಮಾಡಿ ಬಿಟ್ಟವಣ್ಣಾ ||ಅ.ಪ.||

ಮೈಯ ಮೇಲೆ ಬಿದ್ದರ ತಿಂಡಿ
ಹಚ್ಚಿದಂತೆ ಪುಂಡಿ
ಮಾಯದೇಹ ರಕ್ತದ ಉಂಡಿ
ಗಾಯ ಮಾಯವು ಕೆರೆದು ಹುರುಕು
ನಾಯಿಯಾದೆ ರಾತ್ರಿಯನ್ನು
ನಾ ಎನಿತೀ ದಿವಸ ಕಳೆವೆ
ಬಾಯಿಬಿಟ್ಟು ಬಳಲುತಿರುವೆ ||೧||

ಮೋಜಿನ ಮಾತು ಕೌತುಕವಾಯಿತು
ಜ್ಞಾನಕ್ಕೇನು ಗೊತ್ತು
ರಾಜಿಸುತಿಹ ರಾಜನ ಗತ್ತು
ರಾಜಯೋಗಿ ಶಿಶುನಾಳೇಶನ
ತೇಜಿಸುತಿಹ ಸದರಿನೆಡೆಗೆ
ನೀ ಜವದೊಳು ಬಂದು ಕೆಟ್ಟಿ
ಮಾಜು ನಿನ್ನ ದುರ್ಗುಣವನು ||೨||

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪದ ಕಂಬ – ೫ (ಜೀವನ ಚಿತ್ರ)
Next post ಶ್ರೀ ಬಸವೇಶ್ವರ ದಂಡಕ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…