ದಿನದಿನಕ್ಕೂ ಹೆಮ್ಮರವಾಗಿ
ಬೆಳೆಯುತ್ತಿರುವ ನೋವುಗಳು,
ಗೋಜಲುಗೋಜಲಾಗಿ
ಸ್ಪಷ್ಟತೆಯಿಲ್ಲದೆ ತಡಕಾಡುವ
ಸಾವಿರಾರು ಸಮಸ್ಯೆಗಳು,
ಜರ್ಜರಿತವಾಗಿ ಹತಾಶವಾಗಿರುವ
ಸುಂದರ ಕನಸುಗಳು,
ಅರಳಿ ಘಮಘಮಿಸಿ
ನಳನಳಿಸಲಾಗದೇ
ಬತ್ತಿ ಹೋಗುತ್ತಿರುವ
ಮೊಗ್ಗು ಮಲ್ಲಿಗೆಗಳು,
ಹರಡಿ ಹ೦ದರವಾಗಿ
ಹಸಿರುಟ್ಟು ನಲಿದು
ತಂಪನೀಯಲಾಗದೇ
ಕಪ್ಪಿಟ್ಟ ಬಳ್ಳಿಗಳು,
ಎಲ್ಲೆಡೆಗೂ ಅಸಹಾಯಕತೆ
ನೋವಿನ ಆರ್ತನಾದ
ಧ್ವನಿ – ಪ್ರತಿಧ್ವನಿಗಳ
ಕಿವಿಗಡಚಿಕ್ಕುವ ಶಬ್ದಗಳು,
ನಡೆಯಲಾಗದಿದ್ದರೂ
ತೆವಳುವ ಹಠ ತೊಟ್ಟ
ಅಲೆದಲೆದು ಸೋತಿರುವ,
ದಣದ ಕಾಲುಗಳಿಗೆ
ಗುರಿ ಸೇರುವ ತವಕ.
ಏನಾದರೂ ಮಾಡಲೇಬೇಕು
ಹೇಗಾದರೂ ಸಾಧಿಸಲೇಬೇಕು,
ಧಗಧಗನೇ ಉರಿಯುತ್ತಿರುವ
ತಂಪು ಕಾಣದೇ
ಬಾಯ್ಬಿರಿದು ನಿಂತ ಧರೆಗೆ
ತಂಪು ಮಳೆಯಾಗಿ
ಕಂಪ ಸೂಸುವ ಆಸೆಯೆನಗೆ,
ಬಾಯ್ಬಿರಿದು ಧರೆಯಲ್ಲಿ
ಇಂಗಿಹೋಗುವ ಸೀತೆಯಾಗದೇ
ಮಳೆಯಾಗಿ – ಹಸಿರಾಗಿ
ಧರೆಯ ಮೇಲೆಯೇ
ಇರುವ ಆಸೆಯೆನಗೆ.
*****
Related Post
ಸಣ್ಣ ಕತೆ
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
-
ಏಕಾಂತದ ಆಲಾಪ
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…