ಧರೆಯ ಮೇಲೆ

ದಿನದಿನಕ್ಕೂ ಹೆಮ್ಮರವಾಗಿ
ಬೆಳೆಯುತ್ತಿರುವ ನೋವುಗಳು,
ಗೋಜಲುಗೋಜಲಾಗಿ
ಸ್ಪಷ್ಟತೆಯಿಲ್ಲದೆ ತಡಕಾಡುವ
ಸಾವಿರಾರು ಸಮಸ್ಯೆಗಳು,
ಜರ್ಜರಿತವಾಗಿ ಹತಾಶವಾಗಿರುವ
ಸುಂದರ ಕನಸುಗಳು,
ಅರಳಿ ಘಮಘಮಿಸಿ
ನಳನಳಿಸಲಾಗದೇ
ಬತ್ತಿ ಹೋಗುತ್ತಿರುವ
ಮೊಗ್ಗು ಮಲ್ಲಿಗೆಗಳು,
ಹರಡಿ ಹ೦ದರವಾಗಿ
ಹಸಿರುಟ್ಟು ನಲಿದು
ತಂಪನೀಯಲಾಗದೇ
ಕಪ್ಪಿಟ್ಟ ಬಳ್ಳಿಗಳು,
ಎಲ್ಲೆಡೆಗೂ ಅಸಹಾಯಕತೆ
ನೋವಿನ ಆರ್ತನಾದ
ಧ್ವನಿ – ಪ್ರತಿಧ್ವನಿಗಳ
ಕಿವಿಗಡಚಿಕ್ಕುವ ಶಬ್ದಗಳು,
ನಡೆಯಲಾಗದಿದ್ದರೂ
ತೆವಳುವ ಹಠ ತೊಟ್ಟ
ಅಲೆದಲೆದು ಸೋತಿರುವ,
ದಣದ ಕಾಲುಗಳಿಗೆ
ಗುರಿ ಸೇರುವ ತವಕ.
ಏನಾದರೂ ಮಾಡಲೇಬೇಕು
ಹೇಗಾದರೂ ಸಾಧಿಸಲೇಬೇಕು,
ಧಗಧಗನೇ ಉರಿಯುತ್ತಿರುವ
ತಂಪು ಕಾಣದೇ
ಬಾಯ್ಬಿರಿದು ನಿಂತ ಧರೆಗೆ
ತಂಪು ಮಳೆಯಾಗಿ
ಕಂಪ ಸೂಸುವ ಆಸೆಯೆನಗೆ,
ಬಾಯ್ಬಿರಿದು ಧರೆಯಲ್ಲಿ
ಇಂಗಿಹೋಗುವ ಸೀತೆಯಾಗದೇ
ಮಳೆಯಾಗಿ – ಹಸಿರಾಗಿ
ಧರೆಯ ಮೇಲೆಯೇ
ಇರುವ ಆಸೆಯೆನಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಷಿಯ ಬಲಿಕೊಟ್ಟೇನು ಕೈಗಾರಿಕೆಯೋ?
Next post ನಾಕೋತಿ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…