ಧರೆಯ ಮೇಲೆ

ದಿನದಿನಕ್ಕೂ ಹೆಮ್ಮರವಾಗಿ
ಬೆಳೆಯುತ್ತಿರುವ ನೋವುಗಳು,
ಗೋಜಲುಗೋಜಲಾಗಿ
ಸ್ಪಷ್ಟತೆಯಿಲ್ಲದೆ ತಡಕಾಡುವ
ಸಾವಿರಾರು ಸಮಸ್ಯೆಗಳು,
ಜರ್ಜರಿತವಾಗಿ ಹತಾಶವಾಗಿರುವ
ಸುಂದರ ಕನಸುಗಳು,
ಅರಳಿ ಘಮಘಮಿಸಿ
ನಳನಳಿಸಲಾಗದೇ
ಬತ್ತಿ ಹೋಗುತ್ತಿರುವ
ಮೊಗ್ಗು ಮಲ್ಲಿಗೆಗಳು,
ಹರಡಿ ಹ೦ದರವಾಗಿ
ಹಸಿರುಟ್ಟು ನಲಿದು
ತಂಪನೀಯಲಾಗದೇ
ಕಪ್ಪಿಟ್ಟ ಬಳ್ಳಿಗಳು,
ಎಲ್ಲೆಡೆಗೂ ಅಸಹಾಯಕತೆ
ನೋವಿನ ಆರ್ತನಾದ
ಧ್ವನಿ – ಪ್ರತಿಧ್ವನಿಗಳ
ಕಿವಿಗಡಚಿಕ್ಕುವ ಶಬ್ದಗಳು,
ನಡೆಯಲಾಗದಿದ್ದರೂ
ತೆವಳುವ ಹಠ ತೊಟ್ಟ
ಅಲೆದಲೆದು ಸೋತಿರುವ,
ದಣದ ಕಾಲುಗಳಿಗೆ
ಗುರಿ ಸೇರುವ ತವಕ.
ಏನಾದರೂ ಮಾಡಲೇಬೇಕು
ಹೇಗಾದರೂ ಸಾಧಿಸಲೇಬೇಕು,
ಧಗಧಗನೇ ಉರಿಯುತ್ತಿರುವ
ತಂಪು ಕಾಣದೇ
ಬಾಯ್ಬಿರಿದು ನಿಂತ ಧರೆಗೆ
ತಂಪು ಮಳೆಯಾಗಿ
ಕಂಪ ಸೂಸುವ ಆಸೆಯೆನಗೆ,
ಬಾಯ್ಬಿರಿದು ಧರೆಯಲ್ಲಿ
ಇಂಗಿಹೋಗುವ ಸೀತೆಯಾಗದೇ
ಮಳೆಯಾಗಿ – ಹಸಿರಾಗಿ
ಧರೆಯ ಮೇಲೆಯೇ
ಇರುವ ಆಸೆಯೆನಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಷಿಯ ಬಲಿಕೊಟ್ಟೇನು ಕೈಗಾರಿಕೆಯೋ?
Next post ನಾಕೋತಿ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…